Seetha Rama: ಅಂಜಲಿ ಪೋನ್‌ನಲ್ಲಿ ರುದ್ರಪ್ರತಾಪ್‌ ಫೋಟೋ: ಹೆದರಿದ ಸಿಹಿಗೆ ಬಾರ್ಡಿಗಾರ್ಡ್ಸ್!

Seetha Rama Kannada Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಹಿ ಅಂಜಲಿ ಪೋನ್‌ನಲ್ಲಿ ರುದ್ರಪ್ರತಾಪ್‌ ಫೋಟೋ ನೋಡಿ ಗಾಬರಿಯಾಗುತ್ತಾಳೆ. ರಾಮ್‌ ಸಿಹಿಗಾಗಿ ಆಕೆಯ ಮನೆಗೆ ಇಬ್ಬರು ಬಾರ್ಡಿಗಾರ್ಡ್ಸ್ ವ್ಯವಸ್ಥೆಯನ್ನು ಮಾಡಿ ಕಳುಹಿಸುತ್ತಾನೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.   

Written by - Zee Kannada News Desk | Last Updated : Apr 25, 2024, 12:37 PM IST
  • ಸಹಿ ಆರಾಮವಾಗಿ ಅಂಜಲಿ ಜೊತೆಗೆ ಆಟವಾಡುತ್ತಿರುವಾಗ ಆಕೆಯ ಫೋನ್‌ನಲ್ಲಿ ಅಕಸ್ಮಾತ್ ಆಗಿ ರುದ್ರಪ್ರತಾಪ್ ಫೋಟೋವನ್ನು ನೋಡಿ ಗಾಬರಿಯಾಗುತ್ತಾಳೆ.
  • ಆಗ ರಾಮ್‌ ಹಾಗೂ ಸೀತಾಗೆ ಲಾಯರ್‌ ರುದ್ರಪ್ರತಾಪ್ ಸೀತಾ ಅಣ್ಣನ ಮನೆಯಲ್ಲೇ ಇದ್ದಾನೆ ಎಂಬ ಸತ್ಯ ಗೊತ್ತಾಗುತ್ತದೆ.
  • ಅಷ್ಟು ಮಾತ್ರವಲ್ಲದೇ ಉಳಿದುಕೊಳ್ಳುವುದಕ್ಕೆ ಅಂಜಲಿ ಕ್ಲಿನಿಕ್ ನಲ್ಲೇ ಜಾಗ ಪಡೆಯುವುದರ ಜೊತೆಗೆ, ಆಕೆಯ ಜೊತೆಗೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾನೆ
Seetha Rama: ಅಂಜಲಿ ಪೋನ್‌ನಲ್ಲಿ ರುದ್ರಪ್ರತಾಪ್‌ ಫೋಟೋ: ಹೆದರಿದ ಸಿಹಿಗೆ ಬಾರ್ಡಿಗಾರ್ಡ್ಸ್! title=

Ram Arranges Body Guard For Sihi: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʻಸೀತಾ ರಾಮʼ ಧಾರಾವಾಹಿಯಲ್ಲಿ ರಾಮ್‌ ಸಿಹಿಗೆ ಮನೆಗೆ ಬಾಡಿಗಾರ್ಡ್‌ ಕಳುಹಿಸಿದ್ದಾನೆ. ಸಹಿ ಆರಾಮವಾಗಿ ಅಂಜಲಿ ಜೊತೆಗೆ ಆಟವಾಡುತ್ತಿರುವಾಗ ಆಕೆಯ ಫೋನ್‌ನಲ್ಲಿ ಅಕಸ್ಮಾತ್ ಆಗಿ ರುದ್ರಪ್ರತಾಪ್ ಫೋಟೋವನ್ನು ನೋಡಿ ಗಾಬರಿಯಾಗುತ್ತಾಳೆ. ಅವಾಗ ಸಿಹಿ ಇದ್ದಕ್ಕಿದ್ದ ಹಾಗೆಯೇ ಸೀತಮ್ಮನನ್ನು ನೋಡಲೇಬೇಕು ಎಂದು ಹಠ ಹಿಡಿದಿದ್ದಾಳೆ. ಅದೇ ಸಂದರ್ಭದಲ್ಲಿ ಸಿಹಿಯನ್ನು ನೋಡಲೆಂದೇ ರಾಮ ಮತ್ತು ಸೀತಾ ಬರುತ್ತಾರೆ.

ಅಶೋಕ್‌ ಮನೆಗೆ ಬಂದ ರಾಮ ಮತ್ತು ಸೀತಾ ಹತ್ತಿರ ಸಿಹಿ ಎಲ್ಲಾ ವಿಚಾರವನ್ನೂ ಹೇಳಿ ಕೊಳ್ಳುತ್ತಾಳೆ. ಸಿಹಿ ಬ್ಯಾಡ್ ಅಂಕಲ್ ನಮ್ಮ ಸುತ್ತ-ಮುತ್ತವೇ ಇದ್ದಾರೆ. ಮತ್ತೆ ನಮಗೆ ತೊಂದರೆ ಕೊಡುತ್ತಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಸೀತಾ ಮತ್ತು ರಾಮ ಗೂ ಆತಂಕವಾಗುತ್ತದೆ. ಅವಾಗ ರಾಮ್‌ ಸೀತಾಳ ಅಣ್ಣ ಮತ್ತು ಅತ್ತಿಗೆಯ ಮೊರೆ ಹೋಗುತ್ತಾರೆ. ಆಗ ರಾಮ್‌ ಹಾಗೂ ಸೀತಾಗೆ ಲಾಯರ್‌ ರುದ್ರಪ್ರತಾಪ್ ಸೀತಾ ಅಣ್ಣನ ಮನೆಯಲ್ಲೇ ಇದ್ದಾನೆ ಎಂಬ ಸತ್ಯ ಗೊತ್ತಾಗುತ್ತದೆ. 

ಇದನ್ನೂ ಓದಿ: Priyanka Singh: ʻಒಂದು ರಾತ್ರಿಗೆ ನಿನ್ನ ರೇಟ್‌ ಎಷ್ಟು?ʼ : ಖಡಕ್‌ ಆಗಿ ಉತ್ತರಿಸಿದ ಬಿಗ್‌ ಬಾಸ್‌ ಪ್ರಿಯಾಂಕಾ!

ಸೀತಾಳ ಅಣ್ಣ ಅತ್ತಿಗೆ ರಾಮ್‌ ಬಳಿ ಸೀತಾಯನ್ನು ತನ್ನ ಜೊತೆಗೆ ಮದುವೆ ಮಾಡಿಕೊಡಿ ಎಂದು ಪೀಡಿಸುತ್ತಿದ್ದಾನೆ. ಅವನ ಕಾಟದಿಂದ ನಮ್ಮನ್ನು ಕಾಪಾಡಿ ಎಂದು ಹೇಳುತ್ತಾರೆ. ನಂತರ ಅವರ ಮನೆಗೆ ಹೋಗಿ ನೋಡುವಷ್ಟರಲ್ಲಿ ರುದ್ರಪ್ರತಾಪ್‌ ಮನೆಯಿಂದ ಹೊರಗೆ ಹೋಗಿರುತ್ತಾನೆ. ಅವಾಗ ರಾಮ್‌ ಆತ ಸಾಮಾನ್ಯನಲ್ಲ, ಏನಾದರೂ ಸಮಸ್ಯೆ ಮಾಡಬಹುದೆಂದು ಆತಂಕದಿಂದ ಸಿಹಿಗಾಗಿ ಇಬ್ಬರು ಬಾಡಿಗಾರ್ಡ್ಸ್ ನ ವ್ಯವಸ್ಥೆ ಮಾಡಿದ್ದಾನೆ. ಆ ಇಬ್ಬರು ಬಾಡಿಗಾರ್ಡ್ಸ್‌ಗಳು ಸಿಹಿ ನ ಮೇಡಂ ಎಂದು ಕರೆಯುವುದು ಪುಟಾಣಿಗೆ ಖುಷಿ ತಂದಿದೆ. 

ಇನ್ನೊಂದು ಕಡೆ ಅಂಜಲಿಗೆ ಸ್ಕೆಚ್ ಹಾಕಿದ ಆರ್ ಪಿ ರಾತ್ರಿ ವೇಳೆ ವೀಡಿಯೋ ಕಾಲ್ ಮಾಡಿ ತನಗೆ ಸಮಸ್ಯೆ ಆಗಿದೆಂದು ಹೇಳಿದ್ದಾನೆ. ಅಂಜಲಿ ಕೂಡ ಅವನ ಮಾತನ್ನು ನಂಬಿ ಕ್ಲಿನಿಕ್ ಹತ್ತಿರ ಹೋದಾಗ, ಅಲ್ಲಿ ಅವನು ಯಾರನ್ನೋ ಪ್ರೀತಿಸಿದ್ದಾಗಿ, ಆಕೆ ಮೋಸ ಮಾಡಿ ಬೇರೆಯವರನ್ನು ಮದುವೆಯಾಗುತ್ತಿದ್ದಾಳೆ, ತನಗೆ ತೊಂದರೆ ಕೊಡುತ್ತಿರುವುದಾಗಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾನೆ. ಅಷ್ಟು ಮಾತ್ರವಲ್ಲದೇ ಉಳಿದುಕೊಳ್ಳುವುದಕ್ಕೆ ಅಂಜಲಿ ಕ್ಲಿನಿಕ್ ನಲ್ಲೇ ಜಾಗ ಪಡೆಯುವುದರ ಜೊತೆಗೆ, ಆಕೆಯ ಜೊತೆಗೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾನೆ. ಮುಂದೆ ರುದ್ರಪ್ರತಾಪ್‌ನಿಂದ ಅಂಜಲಿ ಅಥವಾ ಸಿಹಿಗೆ ಯಾರಿಗಾದರೂ ತೊಂದರೆ ಮಾಡುತ್ತಾನಾ ಎಂಬುದನ್ನು ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News