ಕಿಚ್ಚನಿಗೆ ಅಪಮಾನ! ಸುದೀಪ್ ನಿರೂಪಣೆ ತೊರೆದ ಬೆನ್ನಲ್ಲೆ ವೈರಲ್‌ ಆಯ್ತು ರೂಪೇಶ್ ರಾಜಣ್ಣ ಶಾಕಿಂಗ್‌ ಟ್ವೀಟ್‌! ಅಷ್ಟಕ್ಕೂ ರಿಯಾಲಿಟಿ ಶೋನ ಹಿಂದೆ ನಡೆಯುತ್ತಿರುವುದೇನು..?

Bigg boss kannada 11: ಬಿಗ್‌ಬಾಸ್‌ ಸೀಸನ್‌ 11 ಕ್ಕೆ ಎರಡು ವಾರಗಳ ಹಿಂದಷ್ಟೆ ದ್ದೂರಿ ಚಾಲನೆ ಸಿಕ್ಕಿತ್ತು. ಕಿಚ್ಚ ಈ ಸೀಸನ್‌ನಲ್ಲಿ ನಿರೂಪಣೆ ಮಾಡುತ್ತಿಲ್ಲ ಎನ್ನುವ ಸುದ್ದಿಗೆ ತೆರೆ ಎಳೆದು ಕಿಚ್ಚಾ ಈ ಸೀಸನ್‌ನ ನಿರೂಪಣೆಗೆ ಎಂಟ್ರಿಕೊಟ್ಟಿದ್ದಾರೆ. ಸೀಸನ್‌ ಅದ್ದೂರಿಯಾಗಿ ಆರಂಭಾವಗಿದೆ, ಎರಡು ವಾರಗಳು ಸುಸೂತ್ರವಾಗಿ ಸಾಗಿದೆ, ಆದರೆ ಎರಡನೆ ವಾರದ ಪಂಚಾಯಿತಿ ಮುಗಿಸಿ ಬರುತ್ತಿದ್ದಂತೆ ಕಿಚ್ಚ ಸುದೀಪ್‌ ಶಾಕಿಂಗ್‌ ಟ್ವೀಟ್‌ ಮಾಡಿದ್ದು, ಈ ಟ್ವೀಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.   

Written by - Zee Kannada News Desk | Last Updated : Oct 14, 2024, 02:07 PM IST
  • ಸುದೀಪ್‌ ಶಾಕಿಂಗ್‌ ಟ್ವೀಟ್‌ ಮಾಡಿದ್ದು, ಈ ಟ್ವೀಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
  • ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ಮಾಡಿರುವ ಈ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ.
  • ಈ ಒಂದು ಟ್ವೀಟ್‌ನಿಂದ ಸಾಕಷ್ಟು ಪ್ರಶ್ನೆಗಳು ಎದ್ದಿದ್ದು, ಇದರ ಹಿಂದೆ ಯಾವುದೋ ಬಲವಾದ ಕಾರಣ ಇದೆ ಎಂದು ಅಭಿಮಾನಿಳು ಗಾಬರಿ ಹೊರಹಾಕಿದ್ದಾರೆ.
ಕಿಚ್ಚನಿಗೆ ಅಪಮಾನ! ಸುದೀಪ್ ನಿರೂಪಣೆ ತೊರೆದ ಬೆನ್ನಲ್ಲೆ ವೈರಲ್‌ ಆಯ್ತು ರೂಪೇಶ್ ರಾಜಣ್ಣ ಶಾಕಿಂಗ್‌ ಟ್ವೀಟ್‌! ಅಷ್ಟಕ್ಕೂ ರಿಯಾಲಿಟಿ ಶೋನ ಹಿಂದೆ ನಡೆಯುತ್ತಿರುವುದೇನು..? title=

Bigg boss kannada 11: ಬಿಗ್‌ಬಾಸ್‌ ಸೀಸನ್‌ 11 ಕ್ಕೆ ಎರಡು ವಾರಗಳ ಹಿಂದಷ್ಟೆ ದ್ದೂರಿ ಚಾಲನೆ ಸಿಕ್ಕಿತ್ತು. ಕಿಚ್ಚ ಈ ಸೀಸನ್‌ನಲ್ಲಿ ನಿರೂಪಣೆ ಮಾಡುತ್ತಿಲ್ಲ ಎನ್ನುವ ಸುದ್ದಿಗೆ ತೆರೆ ಎಳೆದು ಕಿಚ್ಚಾ ಈ ಸೀಸನ್‌ನ ನಿರೂಪಣೆಗೆ ಎಂಟ್ರಿಕೊಟ್ಟಿದ್ದಾರೆ. ಸೀಸನ್‌ ಅದ್ದೂರಿಯಾಗಿ ಆರಂಭಾವಗಿದೆ, ಎರಡು ವಾರಗಳು ಸುಸೂತ್ರವಾಗಿ ಸಾಗಿದೆ, ಆದರೆ ಎರಡನೆ ವಾರದ ಪಂಚಾಯಿತಿ ಮುಗಿಸಿ ಬರುತ್ತಿದ್ದಂತೆ ಕಿಚ್ಚ ಸುದೀಪ್‌ ಶಾಕಿಂಗ್‌ ಟ್ವೀಟ್‌ ಮಾಡಿದ್ದು, ಈ ಟ್ವೀಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಕಿಚ್ಚ ಸುದೀಪ್‌ ಅವರು ಭಾನುವಾರ ದಿಢಿರನೇ ಬಿಗ್‌ಬಾಸ್‌ ಕುರಿತಾದ ಒಂದು ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ  ಇದುವೇ ನಾನು ಬಿಗ್‌ಬಾಸ್‌ಗಾಗಿ ನಿರೂಪಣೆ ಮಾಡುತ್ತಿರುವ ಕೊನೆಯ ಸೀಸನ್‌ ಎಂದು ಹೇಳಿದ್ದು, ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಕಿಚ್ಚ ಮಾತ್ರ ಈ ರೀತಿಯ ನಿರ್ಧಾರ ಏಕೆ ತೆಗೆದುಕೊಂಡರು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ.

ಸುದೀಪ್‌ ಮಾಡಿರುವ ಈ ಟ್ವೀಟ್‌ನ ಕಾವು ಇನ್ನೂ ಕಡಿಮೆಯಾಗಲೇ ಇಲ್ಲ, ಆದರೆ ಇದೀಗ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಮಾಿರುವ ಟ್ವೀಟ್‌ ಫುಲ್‌ ವೈರಲ್‌ ಆಗುತ್ತಿದೆ. 

ಹೌದು,ಸುದೀಪ್‌ ಅವರು ಟ್ವೀಟ್‌ ಮಾಡಿದ ಬೆನ್ನಲ್ಲೆ ರೂಪೇಶ್ ರಾಜಣ್ಣ ಅವರು ಸಹ ಟ್ವೀಟ್‌ ಮಾಡಿದ್ದಾರೆ, ಇದೀಗ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ಮಾಡಿರುವ ಈ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ. ಈ ಟ್ವೀಟ್‌ನಲ್ಲಿ ರೂಪೇಶ್‌ ರಾಜಣ್ಣ ಅವರು "ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ  ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು ಅಸಲಿ ವಿಷಯ ನಾಳೆ ಮಾತಾಡ್ತೀನಿ @Chakravarthy_dj" ಎಂದು ಬೆರದುಕೊಂಡಿದ್ದು, ಈ ಟ್ವೀಟ್‌ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಸುದೀಪ್‌ ಅವರು ಟ್ವೀಟ್‌ ಮಾಡಿದ ಬೆನ್ನಲ್ಲೆ ರೂಪೇಶ್‌ ರಾಜಣ್ಣ ಅವರು ಇಂತಹದ್ದೊಂದು ಟ್ವೀಟ್‌ ಮಾಡಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಈ ಒಂದು ಟ್ವೀಟ್‌ನಿಂದ ಸಾಕಷ್ಟು ಪ್ರಶ್ನೆಗಳು ಎದ್ದಿದ್ದು, ಇದರ ಹಿಂದೆ ಯಾವುದೋ ಬಲವಾದ ಕಾರಣ ಇದೆ ಎಂದು ಅಭಿಮಾನಿಳು ಗಾಬರಿ ಹೊರಹಾಕಿದ್ದಾರೆ. 
 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News