BIG News: ರಾಮಾಯಣದಲ್ಲಿ ರಾವಣ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಯಶ್..!

ಕೆಜಿಎಫ್2 ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ನಡೆ ನಿಜಕ್ಕೂ ಕುತೂಹಲಕಾರಿಯಾಗಿದೆ.ಈಗಾಗಲೇ ಹಲವು ಊಹಾಪೋಹಗಳ ನಡುವೆಯೂ ಕೂಡ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಭರ್ಜರಿ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.ಇದಕ್ಕೆ ಪೂರಕವಾಗಿ ಅವರು ವಿವಿಧ ನಿರ್ದೇಶಕರ ಕಥೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಆದರೆ ಯಶ್ ಇದುವರೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

Written by - Zee Kannada News Desk | Last Updated : Jan 29, 2023, 12:09 AM IST
  • ಈಗ ಬೆಳವಣಿಗೆ ಸಂಬಂಧಿಸಿದ ಮೂಲಗಳು ಹೇಳುವಂತೆ “ಯಶ್ ಒಂದು ಚಮತ್ಕಾರವನ್ನು ಮಾಡಲು ಬಯಸುತ್ತಾರೆ
  • ಮತ್ತು ಒಂದು ನಿರ್ದಿಷ್ಟ ದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಮುಂದಿನ ನಡೆಯನ್ನು ಯೋಜಿಸುತ್ತಿದ್ದಾರೆ.
  • ಅವರು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕರಿಂದ ಐದು ಕಥೆಗಳನ್ನು ಕೇಳಿದ್ದಾರೆ
BIG News: ರಾಮಾಯಣದಲ್ಲಿ ರಾವಣ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಯಶ್..! title=
file photo

ಬೆಂಗಳೂರು: ಕೆಜಿಎಫ್2 ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ನಡೆ ನಿಜಕ್ಕೂ ಕುತೂಹಲಕಾರಿಯಾಗಿದೆ.ಈಗಾಗಲೇ ಹಲವು ಊಹಾಪೋಹಗಳ ನಡುವೆಯೂ ಕೂಡ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಭರ್ಜರಿ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.ಇದಕ್ಕೆ ಪೂರಕವಾಗಿ ಅವರು ವಿವಿಧ ನಿರ್ದೇಶಕರ ಕಥೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಆದರೆ ಯಶ್ ಇದುವರೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು  ಹಂಚಿಕೊಂಡಿಲ್ಲ.

ಇದನ್ನೂ ಓದಿ: ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಮೊಟ್ಟಮೊದಲ ಬಾರಿಗೆ ಶ್ರೀ ಶ್ರೀ ಪ್ರಶಸ್ತಿ 2023 ಪ್ರಧಾನ

ಈಗ ಪಿಂಕ್ ವಿಲ್ಲಾ ವರದಿಯ ಪ್ರಕಾರ ಮಧು ಮಂಟೇನಾ ಮತ್ತು ನಿತೇಶ್ ತಿವಾರಿ ಅವರು ಭಾರತೀಯ ಮಹಾಕಾವ್ಯ, ರಾಮಾಯಣದ ಸಿನಿಮೀಯ ರೂಪಾಂತರದಲ್ಲಿ ರಾವಣನಾಗಿ ನಟಿಸಲು ಯಶ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದೆ.

ಇದನ್ನೂ ಓದಿ: IAF Fighter Jets Crash : ಯುದ್ದ ವಿಮಾನ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮ!

ಈಗ ಬೆಳವಣಿಗೆ ಸಂಬಂಧಿಸಿದ ಮೂಲಗಳು ಹೇಳುವಂತೆ “ಯಶ್ ಒಂದು ಚಮತ್ಕಾರವನ್ನು ಸೃಷ್ಟಿಸಲು ಬಯಸುತ್ತಾರೆ ಮತ್ತು ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಮುಂದಿನ ನಡೆಯನ್ನು ಯೋಜಿಸುತ್ತಿದ್ದಾರೆ. ಅವರು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕರಿಂದ ಐದು ಕಥೆಗಳನ್ನು ಕೇಳಿದ್ದಾರೆ.ಅದರಲ್ಲಿ ಐದನೇ ಕಥೆಯಾಗಿ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರ. ಯಶ್ ಈಗಾಗಲೇ ಚಿತ್ರದ ಪೂರ್ವ ದೃಶ್ಯೀಕರಣದಿಂದ ಪ್ರಭಾವಿತರಾಗಿದ್ದಾರೆ ಮತ್ತು ರಾಮಾಯಣ ತಂಡದೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂದಿನ 2 ತಿಂಗಳೊಳಗೆ ಅವರು ತಮ್ಮ ತಕ್ಷಣದ ಮುಂದಿನ ಚಿತ್ರದ ಕುರಿತಾಗಿ ಅವರು ಘೋಷಿಸಲಿದ್ದಾರೆ ಎಂದು ಹತ್ತಿರದ ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News