ರಾಷ್ಟ್ರಗೀತೆ ಹಾಡಿ ಕಬ್ಬಡಿಗೆ ಚಾಲನೆ ಕೊಟ್ರು ರಿಷಭ್: ಕಾಂತಾರ ಕಾಂತಾರ ಎಂದು ಕೂಗಿದ ಫ್ಯಾನ್ಸ್

ಬಿಡುಗಡೆಗೊಂಡು ಸೂಪರ್ ಹಿಟ್ ಆಗಿ ದೇಶದ ಇತರ ಭಾಷೆಗಳಿಗೆ ಡಬ್‌ ಆಗಿ ಮಿಂಚುತ್ತಿದೆ ಕಾಂತಾರ ಸಿನಿಮಾ. ಈ ನಡುವೆ ಇಂದು ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು.

Written by - VISHWANATH HARIHARA | Edited by - Manjunath N | Last Updated : Oct 16, 2022, 11:04 PM IST
  • ಗಣ್ಯರನ್ನು, ಪ್ರಖ್ಯಾತರನ್ನು ಇದಕ್ಕಾಗಿ ಕರೆಸಲಾಗುತ್ತದೆ.
  • ಪ್ರಸ್ತುತ ಈಗ ಇಡೀ ದೇಶ ಕಾಂತಾರದ ಕ್ರೇಜ್‌ನಲ್ಲಿದೆ.
  • ಇದರ ಸೂತ್ರಧಾರಿಯಾದ ರಿಷಭ್‌ ರಾಷ್ಟ್ರಗೀತೆ ಹಾಡಿಸಿ ಸೂಪರ್‌ ಸಂಡೇ ಮ್ಯಾಚ್‌ಗಳಿಗೆ ಚಾಲನೆ ನೀಡಲಾಯಿತು.
ರಾಷ್ಟ್ರಗೀತೆ ಹಾಡಿ ಕಬ್ಬಡಿಗೆ ಚಾಲನೆ ಕೊಟ್ರು ರಿಷಭ್: ಕಾಂತಾರ ಕಾಂತಾರ ಎಂದು ಕೂಗಿದ ಫ್ಯಾನ್ಸ್ title=

ಬೆಂಗಳೂರು: ಬಿಡುಗಡೆಗೊಂಡು ಸೂಪರ್ ಹಿಟ್ ಆಗಿ ದೇಶದ ಇತರ ಭಾಷೆಗಳಿಗೆ ಡಬ್‌ ಆಗಿ ಮಿಂಚುತ್ತಿದೆ ಕಾಂತಾರ ಸಿನಿಮಾ. ಈ ನಡುವೆ ಇಂದು ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು.

ದೇಶೀಯ ಮಣ್ಣಿನ ಸೊಗಡಿನ ಕ್ರೀಡೆ ಕಬಡ್ಡಿಯ ಭಾನುವಾರದ ಪಂದ್ಯಗಳಿಗೆ ಚಾಲನೆ ನೀಡಲು ನೀಡಿದರು. ರಾಷ್ಟ್ರಗೀತೆ ಹಾಡಿ ಕಬಡ್ಡಿಗೆ ಬೂಸ್ಟ್‌ ನೀಡಿದರು.ಪ್ರತಿದಿನದ ಕಬಡ್ಡಿ ಪಂದ್ಯಗಳಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಚಾಲನೆ ನೀಡುವುದು ಪಿಕೆಎಲ್‌ನ ವಾಡಿಕೆ.

ಇದನ್ನೂ ಓದಿ: Ration Cardholder: ದೇಶದ ಕೋಟ್ಯಾಂತರ ಪಡಿತರ ಚೀಟಿ ಧಾರಕರಿಗೊಂದು ಸಂತಸದ ಸುದ್ದಿ

ಗಣ್ಯರನ್ನು, ಪ್ರಖ್ಯಾತರನ್ನು ಇದಕ್ಕಾಗಿ ಕರೆಸಲಾಗುತ್ತದೆ. ಪ್ರಸ್ತುತ ಈಗ ಇಡೀ ದೇಶ ಕಾಂತಾರದ ಕ್ರೇಜ್‌ನಲ್ಲಿದೆ. ಇದರ ಸೂತ್ರಧಾರಿಯಾದ ರಿಷಭ್‌  ರಾಷ್ಟ್ರಗೀತೆ ಹಾಡಿಸಿ ಸೂಪರ್‌ ಸಂಡೇ ಮ್ಯಾಚ್‌ಗಳಿಗೆ ಚಾಲನೆ ನೀಡಲಾಯಿತು. ರಿಷಭ್ ಪಂಚೆ ಧರಿಸಿ ತಮ್ಮ ಸಿನಿಮಾ ಪ್ರಮೋಷನ್ ಗೆ ತೆರಳುತ್ತಿದ್ದಾರೆ.‌

ಇದನ್ನೂ ಓದಿ: SBI ಗ್ರಾಹಕರಿಗೆ ದೀಪಾವಳಿಯ ಧಮಾಕ ಗಿಫ್ಟ್: ಠೇವಣಿ ಬಡ್ಡಿ ದರದಲ್ಲಿ ಬಂಪರ್ ಏರಿಕೆ

ಇಂದು ಸಹ ಕಬ್ಬಡಿ ಅಂಕಣಕ್ಕೆ ಪಂಚೆ ಧರಿಸಿ ಬಂದು ಗಮನ ಸೆಳೆದರು. ನೆರೆದಿದ್ದ ಪ್ರೇಕ್ಷಕರು ರಿಷಭ್ ಕಂಡು ಪುಳಕಿತಗೊಂಡರು.ಆದರೆ ಬೆಂಗಳೂರು ತಂಡ ಯೋಧಸ್ ವಿರುದ್ಧ ಸೋಲುಂಡಿತು. ಮತ್ತೊಂದು ಪಂದ್ಯದಲ್ಲಿ ಯುಮುಂಬಾ ವಿರುದ್ಧ ಪುಣೇರಿ ಪಲ್ಟನ್ ಗೆದ್ದು ಬೀಗಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News