ಬಾಲಿವುಡ್‌ ಮಂದಿ ಜೊತೆ ರಿಷಬ್‌ : ಗುಟ್ಟು ಬಿಟ್ಟು ಕೊಡದ ಶೆಟ್ಟಿ...!

ದಿ ಡಿವೈನ್‌ ಬ್ಲಾಕ್ಬಸ್ಟರ್‌ ಕಾಂತಾರ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲವೆಲ್‌ನಲ್ಲಿ ರಿಷಬ್‌ ಶೆಟ್ಟಿ ಮಿಂಚುತ್ತಿದ್ದಾರೆ. ವಿಶ್ವದಾದ್ಯಂತ ಕಾಂತಾರಕ್ಕೆ ಉತ್ತಮ ವಿಮರ್ಶಾತ್ಮಕ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಬಾಲಿವುಡ್‌ ಮಂದಿ ಜೊತೆ ರಿಷಬ್‌ ಒಡನಾಟ ಹೆಚ್ಚಾಗಿದ್ದು, ಬಿಗ್‌ ಬಜೆಟ್‌ ಸಿನಿಮಾದಲ್ಲಿ ಶೆಟ್ರು ಬ್ಯುಸಿಯಾಗ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ರಿಷಬ್‌ ಶೇರ್‌ ಮಾಡಿಕೊಂಡಿರುವ ಫೋಟೋ ಒಂದು ಅಂತಹದ್ದೇ ಅನುಮಾನಕ್ಕೆ ಕಾರಣವಾಗಿದೆ.

Written by - Krishna N K | Last Updated : Dec 12, 2022, 06:41 PM IST
  • ಕಾಂತಾರ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲವೆಲ್‌ನಲ್ಲಿ ರಿಷಬ್‌ ಶೆಟ್ಟಿ ಮಿಂಚುತ್ತಿದ್ದಾರೆ
  • ಬಾಲಿವುಡ್‌ ಮಂದಿ ಜೊತೆ ರಿಷಬ್‌ ಒಡನಾಟ ಹೆಚ್ಚಾಗಿದೆ
  • ದೀಗ ರಿಷಬ್‌ ಶೇರ್‌ ಮಾಡಿಕೊಂಡಿರುವ ಫೋಟೋ ಒಂದು ಅಂತಹದ್ದೇ ಅನುಮಾನಕ್ಕೆ ಕಾರಣವಾಗಿದೆ
ಬಾಲಿವುಡ್‌ ಮಂದಿ ಜೊತೆ ರಿಷಬ್‌ : ಗುಟ್ಟು ಬಿಟ್ಟು ಕೊಡದ ಶೆಟ್ಟಿ...! title=

Rishab shetty : ದಿ ಡಿವೈನ್‌ ಬ್ಲಾಕ್ಬಸ್ಟರ್‌ ಕಾಂತಾರ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲವೆಲ್‌ನಲ್ಲಿ ರಿಷಬ್‌ ಶೆಟ್ಟಿ ಮಿಂಚುತ್ತಿದ್ದಾರೆ. ವಿಶ್ವದಾದ್ಯಂತ ಕಾಂತಾರಕ್ಕೆ ಉತ್ತಮ ವಿಮರ್ಶಾತ್ಮಕ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಬಾಲಿವುಡ್‌ ಮಂದಿ ಜೊತೆ ರಿಷಬ್‌ ಒಡನಾಟ ಹೆಚ್ಚಾಗಿದ್ದು, ಬಿಗ್‌ ಬಜೆಟ್‌ ಸಿನಿಮಾದಲ್ಲಿ ಶೆಟ್ರು ಬ್ಯುಸಿಯಾಗ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ರಿಷಬ್‌ ಶೇರ್‌ ಮಾಡಿಕೊಂಡಿರುವ ಫೋಟೋ ಒಂದು ಅಂತಹದ್ದೇ ಅನುಮಾನಕ್ಕೆ ಕಾರಣವಾಗಿದೆ.

ಹೌದು, ಬಾಲಿವುಡ್‌ ಮತ್ತು ಕಾಲಿವುಡ್‌ ಸ್ಟಾರ್‌ಗಳ ಜೊತೆ ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಫೋಟೋ ನೋಡಿದರ ನೆಟ್ಟಿಗರು ಒಂದು ತಿಳಿಯದೆ ತಲೆ ಕೆರೆದುಕೊಳ್ಳುತ್ತಿದ್ದಾರೆ. ಇಷ್ಟೇಲ್ಲ ಸ್ಟಾರ್‌ ನಟರ ಒಳಗೊಂಡ ಸಿನಿಮಾದಲ್ಲಿ ರಿಷಬ್‌ ನಟಿಸುತ್ತಿದ್ದಾರಾ ಅಂತ ಕನ್ಪೂಸ್‌ ಆಗಿದ್ದಾರೆ. ಆದ್ರೆ ಮ್ಯಾಟರ್‌ ಬೇರೆನೇ ಇದೆ.

ಇದನ್ನೂ ಓದಿ: ಚಿರು ʼವಾಲ್ಟೇರ್ ವೀರಯ್ಯʼ ಚಿತ್ರದಲ್ಲಿ ಮಾಸ್‌ ಮಹಾರಾಜ..! ಫ್ಯಾನ್ಸ್‌ಗೆ ಡಬಲ್‌ ಧಮಾಕ 

ಸಾಲು ಸಾಲು ಸಂದರ್ಶನಗಳಲ್ಲಿ ಬ್ಯುಸಿಯಾಗಿರುವ ಕಾಂತಾರ ಫೇಮ್‌ ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಇದೀಗ, ಫಿಲಂ ಕ್ಯಾಂಪೆನೀಯನ್‌ ಪ್ರಸ್ತುತ ಪಡಿಸುವು ದಿ ಆಕ್ಟರ್ಸ್‌ ಅಡ್ಡ 2022 ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ರಿಷಬ್‌ ಅಷ್ಟೇ ಅಲ್ಲದೆ, ಈ ಶೋದಲ್ಲಿ, ಬಾಲಿವುಡ್‌ ಸ್ಟಾರ್‌ ನಟರಾದ, ಅನಿಲ್‌ ಕಪೂರ್‌, ವಿದ್ಯಾಬಾಲನ್‌, ಆಯುಷ್ಮಾನ್‌, ರಾಜಕುಮಾರ್‌ ರಾವ್‌, ವರುಣ್‌ ಧವನ್‌, ವಿಜಯ್‌ ವರ್ಮಾ, ಶೀಬಾ, ಜಾನ್ವಿ ಕಪೂರ್‌, ಅನುಪಮಾ ಚೋಪ್ರಾ, ದುಲ್ಕರ್ ಸಲ್ಮಾನ್ ಭಾಗಿಯಾಗಿದ್ದರು. ಸದ್ಯ ಕಾರ್ಯಕ್ರಮ ಗ್ರುಪ್‌ ಫೋಟೋವನ್ನು ರಿಷಬ್‌ ಅವರು ಹಂಚಿಕೊಂಡಿದ್ದಾರೆ.

ಇನ್ನು  ಕಾಂತಾರ ಯಶಸ್ಸಿನ ನಂತರ ರಿಷಬ್‌ ಶೆಟ್ಟಿ ತಮ್ಮ ಮುಂದಿಯ ಸಿನಿಮಾ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಇದೀಗ ಕಾಂತಾರ ಓಟಿಟಿಯಲ್ಲಿ ಉತ್ತಮ ಪ್ರದರ್ಶನ ಪಡೆಯುತ್ತಿದೆ. ಕಾಂತಾರವನ್ನು ಹೊಂಬಾಳೆ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ಅವರು ನಿರ್ಮಾಣ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ರಿಷಬ್‌ ಶೆಟ್ಟಿ ನಟಿಸಿದ್ದಾರೆ. ಕಿಶೋರ್‌, ಸಪ್ತಮಿಗೌಡ, ಅಚ್ಯುತ್‌ಕುಮಾರ್‌ ಸೇರಿದಂತೆ ಅದ್ಭುತ ಕಲಾವಿದರು ಕಾಂತಾರದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News