ರಣಬೀರ್ ಕಪೂರ್ ರಾಮನಾದರೇ ಲಕ್ಷ್ಮಣ ಯಾರು?! ರಾಮಾಯಣ ಸಿನಿಮಾ ಬಿಗ್‌ ಅಪ್ಡೇಟ್!!‌

Laxman In Ramayna: ನಿತೀಶ್ ತಿವಾರಿಯವರ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾಗಿ ಸಾಯಿಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ.. ಇದೀಗ ಈ ಸಿನಿಮಾದಲ್ಲಿ ಲಕ್ಷ್ಮಣ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ...

Written by - Savita M B | Last Updated : Aug 22, 2024, 04:45 PM IST
  • ನಿತೀಶ್ ತಿವಾರಿ ಅವರ ರಾಮಾಯಣ ಚಿತ್ರವು ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ
  • ಚಿತ್ರದ ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಾಬ್ರಾ ಅವರ ಸಂದರ್ಶನವು ವೈರಲ್ ಆಗುತ್ತಿದೆ
ರಣಬೀರ್ ಕಪೂರ್ ರಾಮನಾದರೇ ಲಕ್ಷ್ಮಣ ಯಾರು?! ರಾಮಾಯಣ ಸಿನಿಮಾ ಬಿಗ್‌ ಅಪ್ಡೇಟ್!!‌  title=

mukesh chhabra: ನಿತೀಶ್ ತಿವಾರಿ ಅವರ ರಾಮಾಯಣ ಚಿತ್ರವು ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ ಮತ್ತು ಅದರೊಂದಿಗೆ ಅದರ ತಾರಾಗಣದ ಬಗ್ಗೆಗಿನ ಚರ್ಚೆಯು ಜನರ ಗಮನವನ್ನು ಸೆಳೆದಿದೆ. ನಿತೇಶ್ ತಿವಾರಿ ಅವರ 'ರಾಮಾಯಣ' ಸದ್ಯಕ್ಕೆ ಬಾಲಿವುಡ್‌ನ ಬಹುದೊಡ್ಡ ಪ್ರಾಜೆಕ್ಟ್ ಆಗಿದ್ದು, ಆದಿಪುರುಷ ಸಿನಿಮಾ ನಂತರ, ನಿತೇಶ್ ಈ ವಿಷಯದೊಂದಿಗೆ ವಿಶೇಷವಾಗಿ ಏನು ಮಾಡಲಿದ್ದಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. 

ಈ ಎಲ್ಲದರ ನಡುವೆ, ಚಿತ್ರದ ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಾಬ್ರಾ ಅವರ ಸಂದರ್ಶನವು ವೈರಲ್ ಆಗುತ್ತಿದೆ, ಇದರಲ್ಲಿ ಅವರು ರಣಬೀರ್ ಕಪೂರ್ ರಾಮ್ ಆದ ತಕ್ಷಣ ಲಕ್ಷ್ಮಣ್ ಪಾತ್ರವನ್ನು ನಿರ್ವಹಿಸಲು ಅನೇಕ ತಾರೆಯರು ನಿರಾಕರಿಸಿದ್ದಾರೆ ಎಂದು ಹೇಳಿದರು. ಹೀಗಿರುವಾಗ ಈ ಪಾತ್ರದ ಬಗ್ಗೆ ಅವರು ಏನು ಹೇಳಿದ್ದಾರೆಂದು ಇಲ್ಲಿ ತಿಳಿಯೋಣ.

ಇದನ್ನೂ ಓದಿ-ದರ್ಶನ್‌ ಸುದೀಪ್‌ ಸ್ನೇಹದಲ್ಲಿ ಬಿರುಕು ಮೂಡಲು ಕಾರಣವಾಗಿದ್ದು ಅದೊಂದು ಹೇಳಿಕೆ! ಜೀವದ ಗೆಳೆಯರಲ್ಲಿ ಮನಸ್ಥಾಪ ತಂದ ʼಆʼ ಮಾತೇನು?!    

ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಾಬ್ರಾ ಇತ್ತೀಚೆಗೆ ರಣವೀರ್ ನೀಡಿದ ಸಂದರ್ಶನದಲ್ಲಿ ರಾಮಾಯಣದ ಕಾಸ್ಟಿಂಗ್ ಬಗ್ಗೆ ಅನೇಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂಭಾಷಣೆಯಲ್ಲಿ ಪಾತ್ರವರ್ಗದ ಬಗ್ಗೆ ಮಾತನಾಡುವಾಗ, ರಾಮ್‌ಗಾಗಿ ರಣಬೀರ್ ಅವರನ್ನು ಬಹಳ ಹಿಂದೆಯೇ ಆಯ್ಕೆ ಮಾಡಲಾಗಿದೆ.. ರಣಬೀರ್ ಜೊತೆ ಕೆಲಸ ಮಾಡುವುದು ನನ್ನ ವೃತ್ತಿ ಜೀವನದ ಅತ್ಯುತ್ತಮ ಅನುಭವ.. ರಣಬೀರ್ ಅದ್ಭುತ ನಟ ಮತ್ತು ಯಾವುದೇ ಪಾತ್ರಕ್ಕೆ ಹೊಂದಿಕೊಳ್ಳಲು ಅವರಿಗೆ ಯಾವುದೇ ತೊಂದರೆ ಇಲ್ಲ. ಲಕ್ಷ್ಮಣ್ ಪಾತ್ರಕ್ಕಾಗಿ ಆಡಿಷನ್ ನಡೆಸಲಾಯಿತು ಮತ್ತು ಟಿವಿ ಶೋಗಳಲ್ಲಿ ಕೆಲಸ ಮಾಡಿದ ಹೊಸ ನಟನನ್ನು ಆಯ್ಕೆ ಮಾಡಲಾಯಿತು. ಈ ಹೊಸ ಮುಖ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸುತ್ತಿದ್ದು, ಇದಕ್ಕಿಂತ ಉತ್ತಮವಾದ ಲಕ್ಷ್ಮಣ್ ಸಿಗಲ್ಲ ಎಂದು ಮುಖೇಶ್ ಹೇಳಿದ್ದಾರೆ. 

"ಲಕ್ಷ್ಮಣ್ ಪಾತ್ರಕ್ಕೆ ಹೊಸ ಮುಖವನ್ನು ಆಯ್ಕೆ ಮಾಡಲಾಗಿದೆ, ಏಕೆಂದರೆ ಅವರು ಹೆಚ್ಚು ಗಮನಕ್ಕೆ ಬರುವುದಿಲ್ಲ... ಲಕ್ಷ್ಮಣ್‌ ಪಾತ್ರಕ್ಕೆ ತುಂಬಾ ಒಳ್ಳೆಯ ನಟ ಸಿಕ್ಕಿದ್ದಾರೆ ಎಂದು ಮುಖೇಶ್ ಹೇಳಿದ್ದಾರೆ. ಲಕ್ಷ್ಮಣ್‌ಗಾಗಿ ಬಹಳಷ್ಟು ಜನರು ಆಡಿಷನ್ ಮಾಡಿದ್ದರು, ಆದರೆ ನಮಗೆ ಬೇಕಿದ್ದಂತಹ ವ್ಯಕ್ತಿ ಸಿಕ್ಕಿದ್ದು ಒಬ್ಬರೇ ಇದು ಬಾಲಿವುಡ್‌ನಲ್ಲಿ ಅವರ ಮೊದಲ ಚಿತ್ರವಾಗಿದೆ ಎಂದು ಹೇಳಿದ್ದಾರೆ.. 

ಇದನ್ನೂ ಓದಿ-ಸೆರಗು ಜಾರಿತು, ಮೈ ಬಿಸಿ ಹೆಚ್ಚಿತು.. ಬಿಗ್ ಬಾಸ್ ಬ್ಯೂಟಿ ಪಬ್ಲಿಕ್ ರೊಮ್ಯಾನ್ಸ್..! ವಿಡಿಯೋ ವೈರಲ್

ಅಲ್ಲದೇ 'ನಾವು ಕಾಸ್ಟಿಂಗ್ ಮಾಡಿದ ಕೊನೆಯ ಪಾತ್ರ ಇದಾಗಿದೆ.. ಯುವ ನಟನನ್ನು ಆಯ್ಕೆ ಮಾಡಿದ್ದೇವೆ, ಅವರು ಟಿವಿಯಲ್ಲಿ ಅದ್ಭುತ ಮತ್ತು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.. ಅವನಿಗಿಂತ ಉತ್ತಮವಾದ ಗುಣಲಕ್ಷಣಗಳಿರುವ ವ್ಯಕ್ತಿ ನಮಗೆ ಸಿಗುವುದಿಲ್ಲ. ನಾವು ಮೊದಲು ಸಂಪರ್ಕಿಸಿದ ಜನರು ನಿರಾಕರಿಸಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ, ಏಕೆಂದರೆ ರಾಮ ಮತ್ತು ಲಕ್ಷ್ಮಣ ಯಾವಾಗಲೂ ಒಟ್ಟಿಗೆ ಕಾಣುತ್ತಾರೆ ಹೀಗಾಗಿ ರಣಬೀರ್‌ಗೆ ಹೊಂದಿಕೊಳ್ಳುವ ಗುಣ ಬೇಕಾಗಿತ್ತು.. ಅಂತವರೇ ನಮಗೆ ಸಿಕ್ಕಿದ್ದಾರೆ.." ಎಂದು ಹೇಳಿಕೊಂಡಿದ್ದಾರೆ..  

ಮಾಧ್ಯಮ ವರದಿಗಳ ಪ್ರಕಾರ, ಲಕ್ಷ್ಮಣ್ ಪಾತ್ರಕ್ಕೆ ರವಿ ದುಬೆ ಅವರನ್ನು ಆಯ್ಕೆ ಮಾಡಲಾಗಿದೆ.. ಈಗ ಮುಖೇಶ್ ಮಾತಿನಿಂದ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ನಿಜವೇನೋ ಎನ್ನುವ ಅನುಮಾನಗಳು ಅಭಿಮಾನಿಗಳಲ್ಲಿ ಮೂಡಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News