Prakash Raj: ದ್ವೇಷ, ಧರ್ಮಾಂಧತೆಯನ್ನು ಒದ್ದೋಡಿಸಿದ ಕರುನಾಡಿಗೆ ಧನ್ಯವಾದ -  ಪ್ರಕಾಶ್​ ರೈ !

Reacts To Karnataka Assembly Election Results: ಆಡಳಿತ ಪಕ್ಷಗಳ ವಿರುದ್ದ ಧ್ವನಿ ಎತ್ತಿದ್ದವರಲ್ಲಿ ಪ್ರಕಾಶ್‌ ರೈ ಕೂಡ ಒಬ್ಬರು. ಇದೀಗ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಸಿದ್ದಾರೆ. 

Written by - Zee Kannada News Desk | Last Updated : May 14, 2023, 04:40 PM IST
  • ರಾಜ್ಯದಲ್ಲಿ ವಿಧಾನ ಸಭೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ನಟ ಪ್ರಕಾಶ್‌ ರಾಜ್
  • ತಮ್ಮ ಅನಿಸಿಕೆಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ನಟ
  • 135 ಸೀಟುಗಳಿಂದ ಕಾಂಗ್ರೆಸ್​ ಪಕ್ಷಕ್ಕೆ ಬಹುಮತ ಬಂದ ಹಿನ್ನಲೆಯಲ್ಲಿ ಹಲವರು ಅಭಿನಂದನೆ ಸಲ್ಲಿಕೆ
Prakash Raj: ದ್ವೇಷ, ಧರ್ಮಾಂಧತೆಯನ್ನು ಒದ್ದೋಡಿಸಿದ ಕರುನಾಡಿಗೆ ಧನ್ಯವಾದ -  ಪ್ರಕಾಶ್​ ರೈ ! title=

ಬೆಂಗಳೂರು: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೂ ಮೊದಲ್ಲೆ ನಾನಾ ರೀತಿ ಚರ್ಚೆಗಳು ಬರುತ್ತಿದ್ದವು. ಚುನಾವಣೆ ಪ್ರಚಾರಕ್ಕಾಗಿ ಸಿನಿಮಾ ನಟರನ್ನು ಕರೆಯಸುವುದು ತಪ್ಪೆಂದು ಒಂದು ವರ್ಗ ವಾದಿಸಿದರೇ, ಚುನಾವಣೆ ವಿಚಾರದಲ್ಲಿ ಹಣ ಹಂಚಿಕೆ, ಭ್ರಷ್ಟ ಸರ್ಕಾರ ಎಂದು ಹೀಗೆ ಹಲವು ವಿಷಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದವು.

ಇಷ್ಟು ದಿವಸ ಇದ್ದ ಆಡಳಿತ ಪಕ್ಷಗಳ ವಿರುದ್ದ ಧ್ವನಿ ಎತ್ತಿದ್ದವರಲ್ಲಿ ಪ್ರಕಾಶ್‌ ರೈ ಕೂಡ ಒಬ್ಬರು. ವಿಚಾರಧಾರೆಯಾಗಿರುವ ಇವರು ಸಿನಿಮಾ ಮಾತ್ರವಲ್ಲದೇ ರಾಜಕೀಯ ವಿಷಯದಲ್ಲಿ ಕೆಲವೊಂದು ನಿಯಮಗಳ ವಿರುದ್ದ ನೇರವಾಗಿ ಉತ್ತರಿಸುತ್ತಿದ್ದರು. ಇದೀಗ ರಾಜ್ಯದಲ್ಲಿ ವಿಧಾನ ಸಭೆ ಫಲಿತಾಂಶ ಕುರಿತು ಪ್ರತಿಕ್ರಿಸಿದ್ದಾರೆ.

ಇದನ್ನೂ ಓದಿ: Bollywood News : ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಸಲ್ಮಾನ್ ಖಾನ್ ! ದೀದಿ ಜೊತೆ ಬಾಲಿವುಡ್ ಸ್ಟಾರ್ ಏನಿದು ಗಿಮಿಕ್?‌

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ 135 ಸೀಟು ಗಳಿಸಿ ಬಹುಮತ ಬಂದ ಹಿನ್ನಲೆಯಲ್ಲಿ ಹಲವರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇವರ ಜೊತೆಯಲ್ಲಿ ಪ್ರಕಾಶ ರೈ  ಟ್ವಿಟರ್​ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಖುಷಿ ನೀಡಿದೆ. ದ್ವೇಷ ಮತ್ತು ಧರ್ಮಾಂಧತೆಯನ್ನು ಒದ್ದೋಡಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು.  ಹಾಗೆಯೇ ಚುನಾವಣೆ ಫಲಿತಾಂಶದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ  ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್​, ಅಮಿತ್​ ಶಾ ಗಂಟು ಮೂಟೆ ಕಟ್ಟುವ ವ್ಯಂಗ್ಯ ಪೋಟೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Actress Jennifer: ನಿರ್ಮಾಪಕನ ವಿರುದ್ದ ಲೈಂಗಿಕ ಕಿರುಕುಳ ಆರೋಪ - ಕಿರುತೆರೆ ನಟಿ ಜೆನ್ನಿಫರ್

ಅಷ್ಟೇ ಅಲ್ಲದೇ  ಚುನಾವಣೆ ಫಲಿತಾಂಶ ಬಂದು 24 ಘಂಟೆ ಕಳೆದರೂ ಇನ್ನು ಹಲವಡೆ ಸಂಭ್ರಮದ ಗುಂಗಿನಲ್ಲಿದ್ದಾರೆ.  ಸಾಮಾನ್ಯ ಜನರು ಮಾತ್ರವಲ್ಲದೇ ಸ್ಯಾಂಡಲ್‌ ಟಾಲಿವುಡ್‌ ಸಿನಿ ನಟರು, ಅಕ್ಕ ಪಕ್ಕದ ರಾಜ್ಯದ ಮುಖ್ಯಂತ್ರಿಗಳು ಶುಭ ಕೋರಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News