ಡಾರ್ಲಿಂಗ್‌ ಬರ್ತಡೇಗೆ ಹೊಸ ಸಿನಿಮಾ ಪೋಸ್ಟರ್‌ ರಿಲೀಸ್‌ : ಪ್ರಭಾಸ್‌ ಫ್ಯಾನ್ಸ್‌ಗೆ ಬೇಸರ..!

ಇಂದು ಟಾಲಿವುಡ್‌ ಖ್ಯಾತ ನಟ, ಪ್ಯಾನ್‌ ಇಂಡಿಯಾ ಸ್ಟಾರ್‌ ಡಾರ್ಲಿಂಗ್ ಪ್ರಭಾಸ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಬಾಹುಬಲಿಯ ಹೊಸ ಸಿನಿಮಾ ಪೋಸ್ಟರ್ ಒಂದು ಬಿಡುಗಡೆಯಾಗಿದೆ. ಆದಿಪುರಷ ಚಿತ್ರತಂಡ ಹೊಸ ಪೋಸ್ಟರ್‌ ಬಿಡುಗಡೆ ಮಾಡುತ್ತದೆ ಅಂತ ತಿಳಿದಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗಿದೆ. ಬದಲಾಗಿ ಪ್ರಭಾಸ್‌ ಹೊಸ ಸಿನಿಮಾ ಘೋಷಣೆ ಆಗಿದೆ. ಆದರೂ ಈ ಸುದ್ದಿ ಫ್ಯಾನ್ಸ್‌ಗಳಿಗೆ ಅಸಮಾಧಾನ ಉಂಟುಮಾಡಿದೆ.

Written by - Krishna N K | Last Updated : Oct 23, 2022, 03:10 PM IST
  • ಟಾಲಿವುಡ್‌ ಖ್ಯಾತ ನಟ, ಪ್ಯಾನ್‌ ಇಂಡಿಯಾ ಸ್ಟಾರ್‌ ಡಾರ್ಲಿಂಗ್ ಪ್ರಭಾಸ್ ಹುಟ್ಟುಹಬ್ಬ
  • ಬಾಹುಬಲಿಯ ಹೊಸ ಸಿನಿಮಾ ಪೋಸ್ಟರ್ ಒಂದು ಬಿಡುಗಡೆ
  • ಪ್ರಭಾಸ್‌ ಹುಟ್ಟು ಹಬ್ಬದ ಪ್ರಯುಕ್ತ ಪ್ರಾಜೆಕ್ಟ್ ಕೆ ನಿಂದ ಮತ್ತೊಂದು ಅಪ್‌ಡೇಟ್
ಡಾರ್ಲಿಂಗ್‌ ಬರ್ತಡೇಗೆ ಹೊಸ ಸಿನಿಮಾ ಪೋಸ್ಟರ್‌ ರಿಲೀಸ್‌ : ಪ್ರಭಾಸ್‌ ಫ್ಯಾನ್ಸ್‌ಗೆ ಬೇಸರ..! title=

ಬೆಂಗಳೂರು : ಇಂದು ಟಾಲಿವುಡ್‌ ಖ್ಯಾತ ನಟ, ಪ್ಯಾನ್‌ ಇಂಡಿಯಾ ಸ್ಟಾರ್‌ ಡಾರ್ಲಿಂಗ್ ಪ್ರಭಾಸ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಬಾಹುಬಲಿಯ ಹೊಸ ಸಿನಿಮಾ ಪೋಸ್ಟರ್ ಒಂದು ಬಿಡುಗಡೆಯಾಗಿದೆ. ಆದಿಪುರಷ ಚಿತ್ರತಂಡ ಹೊಸ ಪೋಸ್ಟರ್‌ ಬಿಡುಗಡೆ ಮಾಡುತ್ತದೆ ಅಂತ ತಿಳಿದಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗಿದೆ. ಬದಲಾಗಿ ಪ್ರಭಾಸ್‌ ಹೊಸ ಸಿನಿಮಾ ಘೋಷಣೆ ಆಗಿದೆ. ಆದರೂ ಈ ಸುದ್ದಿ ಫ್ಯಾನ್ಸ್‌ಗಳಿಗೆ ಅಸಮಾಧಾನ ಉಂಟುಮಾಡಿದೆ.

ಪ್ರಭಾಸ್‌ ಹುಟ್ಟು ಹಬ್ಬದ ಪ್ರಯುಕ್ತ ಪ್ರಾಜೆಕ್ಟ್ ಕೆ ನಿಂದ ಮತ್ತೊಂದು ಅಪ್‌ಡೇಟ್ ಬಂದಿದೆ. ಚಿತ್ರತಂಡ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಪೋಸ್ಟರ್‌ನಲ್ಲಿ ಪ್ರಭಾಸ್ ಕಾಣಿಸುತ್ತಿಲ್ಲ ಬದಲಾಗಿ ಕೈ ಮಾತ್ರ ಇದ್ದು, ಅದರ ಮೇಲೆ ವೀರರು ಹುಟ್ಟುವುದಿಲ್ಲ.. ಬೆಳೆಯುತ್ತಾರೆ.. ಎಂಬ ಬರಹ ಇದೆ. ಈ ಪೋಸ್ಟರ್‌ ಅಭಿಮಾನಿಗಳ ಕುತೂಹಲಕ್ಕೆ ತಣ್ಣೀರು ಎರಚಿದೆ. ಏಕೆಂದರೆ ಪ್ರಭಾಸ್‌ ಹೊಸ ಲುಕ್‌ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದ್ರೆ ಚಿತ್ರತಂಡ ಮಾತ್ರ ಬರೀ ಕೈ ಪೋಸ್ಟರ್‌ ರೀಲಿಸ್‌ ಮಾಡಿದೆ.

ಇದನ್ನೂ ಓದಿ: Puneeth Parva : ಈ ನಟಿಯ ಕೈ ಮೇಲಿದೆ ಅಪ್ಪು ಹೆಸರಿನ ಟ್ಯಾಟೂ.! ಇದಕ್ಕಿದೆ ವಿಶೇಷ ನಂಟು

ಇನ್ನು ಪ್ರಾಜೆಕ್ಟ್‌ ಕೆ ಪೋಸ್ಟರ್ ನೋಡಿದ ಅಭಿಮಾನಿಗಳು ಪ್ರಭಾಸ್ ಸೂಪರ್ ಹೀರೋ ಆಗಿ ನಟಿಸಲಿದ್ದಾರಾ..? ಐರನ್ ಮ್ಯಾನ್ ನಂತಹ ಪಾತ್ರ ಏನಾದರೂ ಮಾಡುತ್ತಿದ್ದಾರಾ..? ಎಂದು ತಲೆಕೆಡಿಸಿಕೊಂಡಿದ್ದಾರೆ. ಏಕೆಂದರೆ ರಿಲೀಸ್‌ ಆದ ಹೊಸ ಪೋಸ್ಟರ್‌ನಲ್ಲಿ ಕೈಗೆ ಧರಿಸಿರುವ ಶೀಲ್ಡ್ ನೋಡಿದ್ರೆ, ಪ್ರಭಾಸ್‌ ಸೂಪರ್‌ ಹೀರೋ ಪಾತ್ರದಲ್ಲಿ ಕಾಣಿಸಲಿದ್ದಾರಾ ಎನ್ನು ಪ್ರಶ್ನೆ ಮೂಡುವಂತೆ ಮಾಡಿದೆ. ಆದ್ರೆ ಪೋಸ್ಟರ್‌ನಲ್ಲಿ ಬರೀ ಕೈ ಇರುವುದು ಡಾರ್ಲಿಂಗ್‌ ಫ್ಯಾನ್ಸ್‌ಗೆ ಬೇಸರ ತರಿಸಿದೆ.

ಸಧ್ಯ ಪ್ರಭಾಸ್ ಅಭಿಮಾನಿಗಳ ಭರವಸೆ ಸಲಾರ್ ತಂಡದ ಮೇಲಿದೆ. ಬಾಹುಬಲಿ ನಂತರ ಸತತ ಸೋಲು ಅನುಭವಿಸಿರುವ ಬಾಹುಲಿಗೆ ಸ್ಟಾರ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಸಿನಿಮಾ ಮತ್ತೇ ಯಶಸ್ಸು ತಂದು ಕೊಡುತ್ತೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನು ಸಲಾರ್‌ ತಂಡ ಯಾವುದಾರೂ ಅಪ್ಡೇಟ್‌ ನೀಡುತ್ತಾ ಎಂದು ಮಿಸ್ಟರ್ ಪರ್ಫೆಕ್ಟ್ ಫ್ಯಾನ್ಸ್‌ ನೋಡುತ್ತಿದ್ದಾರೆ. ಅಲ್ಲದೆ, ಹೊಸ ಪೋಸ್ಟರ್‌ ಬಿಡುಗಡೆ ಮಾಡ್ತಾರಾ ಪ್ರಶಾಂತ್‌ ನೀಲ್‌ ಎಂದು ಜಾತಕ ಪಕ್ಷಿಗಳ ಹಾಗೆ ಕುತೂಹಲದಿಂದ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News