ಮಹೇಶ್‌ ಬಾಬು ಸಿನಿಮಾದಲ್ಲಿ ಸೇದುವ ಬೀಡಿ ಬಗ್ಗೆ ನಿಮ್ಗೆ ಗೊತ್ತೆ..! ಇದು ಅಂತಿಂತ ಬಿಡಿ ಅಲ್ಲ ಗುರು

Mahesh Babu guntur kaaram : ʼಗುಂಟೂರ್‌ ಖಾರʼ ಸಿನಿಮಾ ಮಿಶ್ರ ವಿಮರ್ಶೆಗಳನ್ನು ಪಡೆದಿದ್ದರೂ ಸಹ ಮಹೇಶ್ ಬಾಬು ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು. ರಗಡ್‌ ಲುಕ್‌ನಲ್ಲಿ ಮಹೇಶ್‌ ಬಾಬು ನೋಡಿ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಸಧ್ಯ ಚಿತ್ರದಲ್ಲಿ ಮಹೇಶ್‌ ಸೇರಿದ ಬೀಡಿ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದ್ದು, ಈ ಕುರಿತು ಸ್ವತಃ ಅವರೇ ಸ್ಪಷ್ಟತೆ ನೀಡಿದ್ದಾರೆ.

Written by - Krishna N K | Last Updated : Jan 17, 2024, 01:54 PM IST
  • ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ ಚಿತ್ರ 'ಗುಂಟೂರ್ ಖಾರ'.
  • 'ಗುಂಟೂರ್ ಖಾರ' ಚಿತ್ರ ಜನವರಿ 12 ರಂದು ರಿಲೀಸ್‌ ಆಯಿತು.
  • ಈಗಾಗಲೇ ಈ ಸಿನಿಮಾ 94 ಕೋಟಿ ರೂ. ಗಳಿಕೆ ಕಂಡಿದೆ.
ಮಹೇಶ್‌ ಬಾಬು ಸಿನಿಮಾದಲ್ಲಿ ಸೇದುವ ಬೀಡಿ ಬಗ್ಗೆ ನಿಮ್ಗೆ ಗೊತ್ತೆ..! ಇದು ಅಂತಿಂತ ಬಿಡಿ ಅಲ್ಲ ಗುರು title=

Mahesh Babu : ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಮತ್ತು ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ 'ಗುಂಟೂರ್ ಖಾರ' ಚಿತ್ರ ಜನವರಿ 12 ರಂದು ರಿಲೀಸ್‌ ಆಯಿತು. ಈಗಾಗಲೇ ಈ ಸಿನಿಮಾ 94 ಕೋಟಿ ರೂ. ಗಳಿಕೆ ಕಂಡಿದೆ. ಇದೀಗ ಚಿತ್ರದ ಕುರಿತು ಮಾತನಾಡುವಾಗ ಮಹೇಶ್‌ ಬಾಬು ನೀಡಿದ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹೌದು.. ಸುಮಾರು 150 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಆಕ್ಷನ್ ಜಾನರ್‌ ಸಿನಿಮಾ ಮೊದಲಿಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದ್ರೆ ಈ ಚಿತ್ರ ಕೆಲವೊಂದಿಷ್ಟು ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಯಿತು. ಮೂಲಗಳ ಪ್ರಕಾರ ಇಲ್ಲಿಯವರೆಗೆ ಈ ಸಿನಿಮಾ ಬರೋಬ್ಬರಿ 94 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ.

ಇದನ್ನೂ ಓದಿ:ʼಹನುಮಾನ್‌ʼ ಅಬ್ಬರಕ್ಕೆ ಸ್ಟಾರ್‌ ನಟರ ಸಿನಿಮಾಗಳೇ ಧೂಳಿಪಟ..! 100 ಕೋಟಿ ಕ್ಲಬ್‌ ಸೇರಿದ ಚಿತ್ರ

‘ಗುಂಟೂರ್ ಖಾರ’ ಚಿತ್ರದಲ್ಲಿ ನಟ ಮಹೇಶ್ ಬಾಬು ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದುದ್ದಕ್ಕೂ ಬೀಡಿ ಸೇದಿದ್ದು ದೊಡ್ಡ ವಿವಾದವಾಗಿತ್ತು. ಈ ಕುರಿತು ಕೇಳಿ ಬಂದ ಪ್ರಶ್ನೆಗಳಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಸ್ಪಷ್ಟನೆ ನೀಡಿದ್ದು, ತಾವು ಸೇದಿದ್ದ ಬೀಡಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಗುಂಟೂರು ಖಾರಂನಲ್ಲಿ ನಾನು ಬಳಸುತ್ತಿದ್ದ ಬೀಡಿ ಸಾಮಾನ್ಯ ಬೀಡಿ ಅಲ್ಲ, ಅದು ದಾಲ್ಚಿನ್ನಿ ಎಲೆಯಿಂದ ಮಾಡಿದ ಆಯುರ್ವೇದ ಬೀಡಿ, ಚಿತ್ರೀಕರಣ ಪ್ರಾರಂಭವಾದಾಗ, ನನಗೆ ಮೊದಲ ಬಾರಿಗೆ ಮೂಲ ಬೀಡಿಯನ್ನು ನೀಡಲಾಯಿತು, ಅದನ್ನು ಬಳಸಿದ ತಕ್ಷಣ ನನಗೆ ತಲೆನೋವು ಬಂತು. ಈ ವಿಚಾರ ನಿರ್ದೇಶಕರಿಗೂ ತಿಳಿಯಿತು ಎಂದರು.

ಇದನ್ನೂ ಓದಿ:ರಾಮ್ ಚರಣ್ ಬೇಬಿ ಜೊತೆ ಅಲ್ಲು ಅರ್ಜುನ್ ಮಗಳ ಕ್ಯೂಟ್‌ ಡ್ಯಾನ್ಸ್..! ವಿಡಿಯೋ ಇಲ್ಲಿದೆ

ಅಲ್ಲದೆ, ಅದಕ್ಕಿಂತ ಹೆಚ್ಚಾಗಿ ನಾನು ಆ ಬೀಡಿಯನ್ನು ನಾನು ಬಳಸಲಾರೆ ಎಂದು ಹೇಳಿದೆ, ಆಗ ಅವರು ಈ ಆಯುರ್ವೇದ ಬೀಡಿಯನ್ನು ಕೊಟ್ಟರು. ಅದನ್ನು ಬಳಸುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಖಚಿತಪಡಿಸಿದ ನಂತರವೇ ನಾನು ಅದನ್ನು ಬಳಸಿದ್ದೇನೆ. ನನಗೆ ಧೂಮಪಾನ ಮಾಡುವ ಅಭ್ಯಾಸವಿಲ್ಲ, ಅಲ್ಲದೆ ಅದನ್ನು ನಾನು ಪ್ರೋತ್ಸಾಹಿಸುವುದಿಲ್ಲ ಎಂದು ನಟ ಮಹೇಶ್ ಬಾಬು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News