ಇವರು ಚಿರಂಜೀವಿ ಮತ್ತು ರಾಮ್ ಪೋತಿನೇನಿ ಅವರೊಂದಿಗೆ ಕೆಲಸ ಮಾಡಿದ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ; ಯಾರೆಂದು ಗುರುತಿಸಿ

keerthy suresh : ಮಲಯಾಳಿ ಮತ್ತು ತಮಿಳು ಮಿಶ್ರಿತ ಕುಟುಂಬದಿಂದ ಬಂದ ಈ ಪ್ರತಿಭಾನ್ವಿತ ನಟಿ  ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಸದ್ಯ ಸಿನಿರಂಗದಲ್ಲಿ ಅತ್ಯಂತ ಬೇಡಿಕೆಯುಳ್ಳ ನಟಿ ಇವರು. ಹಾಗಾದ್ರೆ ಯಾರು ಈ ಚಿತ್ರದಲ್ಲಿರುವ ನಟಿ ಅಂತೀರಾ...ಮುಂದೆ ಓದಿ..

Written by - Savita M B | Last Updated : Aug 11, 2023, 08:42 PM IST
  • ಸ್ಟಾರ್‌ಗಳೊಂದಿಗೆ ತೆರೆ ಹಂಚಿಕೊಂಡ ಈ ನಟಿ
  • ಈ ನಟಿ 2013 ರಲ್ಲಿ ಅವರು ಮಲಯಾಳಂನ ಗೀತಾಂಜಲಿ ಚಿತ್ರದ ಮೂಲಕ ತಮ್ಮ ಸಿನಿಪಯಣವನ್ನು ಆರಂಭಿಸಿದರು.
  • ತಮಿಳಿನಲ್ಲಿ ಇವರ ಮೊದಲ ಸಿನಿಮಾ ಎನ್ನ ಮಾಯಂ.
ಇವರು ಚಿರಂಜೀವಿ ಮತ್ತು ರಾಮ್ ಪೋತಿನೇನಿ ಅವರೊಂದಿಗೆ ಕೆಲಸ ಮಾಡಿದ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ; ಯಾರೆಂದು ಗುರುತಿಸಿ  title=

South Actress Keerthi Suresh : ಸುರಾಜ್ ವೆಂಜರಮೂಡು, ರಾಮ್ ಪೋತಿನೇನಿ, ಚಿರಂಜೀವಿ, ಕಾರ್ತಿ, ದುಲ್ಕರ್ ಸಲ್ಮಾನ್ ಮುಂತಾದ ಪ್ರಸಿದ್ಧ ಸ್ಟಾರ್‌ಗಳೊಂದಿಗೆ ತೆರೆ ಹಂಚಿಕೊಂಡ ಈ ನಟಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, SIIMA ಪ್ರಶಸ್ತಿಗಳು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳು, ಮತ್ತು ಸೌತ್‌ ನ ಗೌರವಾನ್ವಿತ ಪ್ರಶಸ್ತಿಗಳನ್ನು ಮಡಿಗೇರಿಸಿಕೊಂಡಿದ್ದಾರೆ. ಹಾಗಾದರೇ ಯಾರು ಆ ನಟಿ ಅಂತೀರಾ..ಇಲ್ಲಿದೆ ನೋಡಿ ಡಿಟೇಲ್ಸ್‌..

ನಿರ್ಮಾಪಕ ಜಿ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಜಿ ಸುರೇಶ್ ಅವರ ಪುತ್ರಿ ಕೀರ್ತಿ ಸುರೇಶ್.‌ ಹೌದು ಆ ಪುಟ್ಟ ಮಗು ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್.‌ ಈ ನಟಿ 2013 ರಲ್ಲಿ ಅವರು ಮಲಯಾಳಂನ ಗೀತಾಂಜಲಿ ಚಿತ್ರದ ಮೂಲಕ ತಮ್ಮ ಸಿನಿಪಯಣವನ್ನು ಆರಂಭಿಸಿದರು. ಈ ಚೊಚ್ಚಲ ಸಿನಿಮಾ ಕೀರ್ತಿ ಸುರೇಶ್‌ ಅವರಿಗೆ SIIMA ಪ್ರಶಸ್ತಿಯನ್ನು ತಂದುಕೊಟ್ಟಿತು ಮತ್ತು ಸ್ಟಾರ್‌ಡಮ್‌ಗೆ ಪ್ರಯಾಣಕ್ಕೆ ಭದ್ರ ಭುನಾದಿಯನ್ನು ಒದಗಿಸಿತು. 

 
 
 
 

 
 
 
 
 
 
 
 
 
 
 

A post shared by Keerthy Suresh (@keerthysureshofficial)

ಇದನ್ನೂ ಓದಿ-Jailer Collections: ಜೈಲರ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಬಾಕ್ಸ್ ಆಫೀಸ್ ನಲ್ಲಿ ತಲೈವಾ ಹವಾ!

ಮಲಯಾಳಂ ನಿಂದ ನಟಿ ಕೀರ್ತಿ ಸುರೇಶ್‌ ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಕ್ಕೂ ಕಾಲಿಟ್ಟರು. ತಮಿಳಿನಲ್ಲಿ ಇವರ ಮೊದಲ ಸಿನಿಮಾ ಎನ್ನ ಮಾಯಂ. ಈ ಚಿತ್ರದಲ್ಲಿ ಕೀರ್ತಿ ಅವರ ಅಭಿನಯವು ಮನ್ನಣೆಯನ್ನು ಗಳಿಸಿತು.

ನಂತರ ನಾಗ್ ಅಶ್ವಿನ್ ಅವರ ಜೀವನಚರಿತ್ರೆಯ ನಾಟಕದಲ್ಲಿ ಮಹಾನಟಿಯಲ್ಲಿ ನಟಿ ಸಾವಿತ್ರಿಯ ಪಾತ್ರಕ್ಕೆ ಕೀರ್ತಿಸುರೇಶ್‌ ಜೀವತುಂಬಿದರು. ಇದೇ ಅವರ ಸಿನಿ ಜೀವನಕ್ಕೆ ಬಿಗ್‌ಬ್ರೇಕ್‌ ನೀಡಿತು. ಸಾಕಷ್ಟು ಮೆಚ್ಚುಗೆಯನ್ನು ಗಳಿಸಿ, 2018 ರಲ್ಲಿ ಅತ್ಯುತ್ತಮ ನಟಿಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡರು. 

ಹೀಗೆ ತನ್ನ ಯಶಸ್ಸಿನ ಸರಣಿಯನ್ನು ಮುಂದುವರೆಸುತ್ತಾ, ಕೀರ್ತಿ ಸುರೇಶ್ ಇಂದು (ಆಗಸ್ಟ್ 11) ಬಿಡುಗಡೆಯಾದ ಚಿರಂಜೀವಿಯವರ ಭೋಲಾ ಶಂಕರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇವರ ಅಭಿಮಾನಿಗಳು ಇವರ ಮುಂದಿನ ಸಿನಿಮಾಗಿ ಕಾತುರದಿಂದ ಕಾಯುತ್ತಿದ್ದಾರೆ.  

ಇದನ್ನೂ ಓದಿ-ಟ್ರೇಲರ್ ನಲ್ಲೇ ಗಮನ ಸೆಳೆದ "ಕ್ಷೇತ್ರಪತಿ", ಆಗಸ್ಟ್ 18 ರಂದು ತೆರೆಗೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News