Kantara Chapter 1: ಚಿತ್ರೀಕರಣಕ್ಕೂ ಮುನ್ನವೇ ಕಾಂತಾರ ಪ್ರೀಕ್ವೆಲ್‌ ಭಾರಿ ಮೊತ್ತಕ್ಕೆ ಓಟಿಟಿಗೆ ಮಾರಾಟ!

Kantara Prequel OTT Rights: ಚಂದನವನದ ಡಿವೈನ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದಿರುವ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿಯ ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಒಟಿಟಿ ರೈಟ್ಸ್‌ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.  

Written by - Zee Kannada News Desk | Last Updated : Mar 19, 2024, 08:44 PM IST
  • ಕಾಂತಾರ ಪ್ರೀಕ್ವೆಲ್‌ ಶೂಟಿಂಗ್‌ ಪ್ರಾರಂಭವಾಗುವ ಮುನ್ನವೇ ಈ ಸಿನಿಮಾದ ಒಟಿಟಿ‌ ರೈಟ್ಸ್ ದೊಡ್ಡ ಮೊತ್ತಕ್ಕೆ ಅಮೆಜಾನ್​ ಪ್ರೈಮ್ ಸಂಸ್ಥೆ ಪಾಲಾಗಿದೆ.
  • ಕಾಂತಾರ ಪ್ರೀಕ್ವೆಲ್‌ 100 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಹೊಂಬಾಳೆ ಬ್ಯಾನರ್‌ನ ಬಹುನಿರೀಕ್ಷಿತ ಚಿತ್ರವಾಗಿದ್ದು, ಇದು ಏಳು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ.
  • ಈಗಾಗಲೇ ಕಾಂತಾರ ಚಾಪ್ಟರ್‌ ಟೀಸರ್​ ಕೂಡ ರಿಲೀಸ್ ಆಗಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
Kantara Chapter 1: ಚಿತ್ರೀಕರಣಕ್ಕೂ ಮುನ್ನವೇ ಕಾಂತಾರ ಪ್ರೀಕ್ವೆಲ್‌ ಭಾರಿ ಮೊತ್ತಕ್ಕೆ ಓಟಿಟಿಗೆ ಮಾರಾಟ! title=

Kantara Chapter 1 OTT Rights Sold: ಸ್ಯಾಂಡಲ್‌ವುಡ್‌ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಅಭಿನಯಿಸಿ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಸಿನಿಮಾದ ಓಟಿಟಿ ರೈಟ್ಸ್‌ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ. ಕಾಂತಾರ ಪ್ರೀಕ್ವೆಲ್‌ ಶೂಟಿಂಗ್‌ ಪ್ರಾರಂಭವಾಗುವ ಮುನ್ನವೇ ಈ ಸಿನಿಮಾದ ಒಟಿಟಿ‌ ರೈಟ್ಸ್ ದೊಡ್ಡ ಮೊತ್ತಕ್ಕೆ  ಅಮೆಜಾನ್​ ಪ್ರೈಮ್ ಸಂಸ್ಥೆ ಪಾಲಾಗಿದೆ.

 
 
 
 

 
 
 
 
 
 
 
 
 
 
 

A post shared by prime video IN (@primevideoin)

‘ಕಾಂತಾರ’ ಸಿನಿಮಾ 2022 ರಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಈ ಚಿತ್ರ ಕೇವಲ 15 ರಿಂದ 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದರೂ 400 ಕೋಟಿ ಕಲೆಕ್ಷನ್‌  ಮಾಡಿತ್ತು.  ಆದರೆ  ಇದೀಗ ಕಾಂತಾರ ಪ್ರೀಕ್ವೆಲ್‌  100 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ಹೊಂಬಾಳೆ ಬ್ಯಾನರ್‌ನ  ಬಹುನಿರೀಕ್ಷಿತ ಚಿತ್ರವಾಗಿದ್ದು, ಇದು ಏಳು ಭಾಷೆಗಳಲ್ಲಿ ಒಟ್ಟಿಗೆ ರಿಲೀಸ್‌ ಆಗಲಿದೆ.

ಇದನ್ನೂ ಓದಿ: ಮಹಿಳಾಪ್ರಧಾನ ʼತಪಸ್ಸಿʼ ಸಿನಿಮಾದಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್..!

ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಕಾಂತಾರ ಚಾಪ್ಟರ್​ 1 ಮುಹೂರ್ತ ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ನೆರವೇರಿದೆ. ಕಾಂತಾರ ಸಿನಿಮಾದ ಮುಹೂರ್ತ ಕೂಡ ಅದೇ ದೇವಸ್ಥಾನದಲ್ಲಿ ನಡೆದಿದೆ. ಸದ್ಯ ‘ಕಾಂತಾರ: ಎ ಲೆಜೆಂಡ್ ಭಾಗ 1’ ಪ್ರಿಕ್ವೆಲ್  ಚಿತ್ರದ ಕೆಲಸಗಳು ಈಗಾಗಲೇ ಶುರುವಾಗಿದ್ದು, ಇದರಲ್ಲಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಈಗಾಗಲೇ ಕಾಂತಾರ ಚಾಪ್ಟರ್‌ ಟೀಸರ್​ ಕೂಡ ರಿಲೀಸ್ ಆಗಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಇನ್ನೂ ಈ ಚಿತ್ರದ ಫಸ್ಟ್​ ಲುಕ್‌ನಲ್ಲಿ ರಿಷಬ್‌ ಶೆಟ್ಟಿ ಒಂದು ಕೈಯಲ್ಲಿ ತ್ರಿಶೂಲ ಹಿಡಿದು, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದುಕೊಂಡು ಬೆಚ್ಚಿಬೀಳಿಸುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೆ ಈ ನಟ ಇದು ಬೆಳಕಲ್ಲ ದರ್ಶನ ಎನ್ನುವ ಡೈಲಾಗ್ ಕೇಳಿ ಅಭಿಮಾನಿಗಳು ಬೆರಗಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News