ಸರ್ಕಾರದ ‘ನನ್ನ ಮೈತ್ರಿ’ ಯೋಜನೆಗೆ 'ಕಾಂತಾರ' ಸುಂದರಿ ಸಪ್ತಮಿ ಗೌಡ ರಾಯಭಾರಿ

Saptami Gowda : ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗವಾದ ಮೈತ್ರಿ ಮೆನ್ಸ್ಟುವೆಲ್‌ ಕಪ್‌ ಯೋಜನೆಯ ರಾಯಭಾರಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿಗೌಡ ಆಯ್ಕೆಯಾಗಿದ್ದಾರೆ.

Written by - Zee Kannada News Desk | Last Updated : Sep 13, 2023, 11:03 AM IST
  • ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗವಾದ ಮೈತ್ರಿ ಮೆನ್ಸ್ಟುವೆಲ್‌ ಕಪ್‌ ಯೋಜನೆಯ ರಾಯಭಾರಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿಗೌಡ ಆಯ್ಕೆ.
  • ಸರ್ಕಾರ ಮೈತ್ರಿ ಕಪ್‌ ಯೋಜನೆಯ ರಾಯಭಾರಿಯಾಗಿ ನನ್ನನ್ನು ಆಯ್ಕೆ ಮಾಡಿರುವುದು ದೊಡ್ಡ ವಿಷಯ.
  • ಮುಟ್ಟಿನ ಕಪ್‌ಗಳನ್ನು ವಿಲೇವಾರಿ ಮಾಡುವುದು ಸುಲಭದ ಸಂಗತಿ ಮತ್ತು ಈ ಮುಟ್ಟಿನ ಕಪ್‌ಗಳು ಪರಿಸರ ಸ್ನೇಹಿಯಾಗಿವೆ.
ಸರ್ಕಾರದ ‘ನನ್ನ ಮೈತ್ರಿ’ ಯೋಜನೆಗೆ 'ಕಾಂತಾರ' ಸುಂದರಿ ಸಪ್ತಮಿ ಗೌಡ ರಾಯಭಾರಿ title=

Maitri Menstrual Cup : ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮಂಗಳೂರಿನ ನೆಹರು ಮೈದಾನದಲ್ಲಿ ಮೈತ್ರಿ ಮೆನ್ಸ್ಟ್ರುವಲ್ ಕಪ್ ಯೋಜನೆಯಡಿ ವ್ಯಾಪಕ ಮುಟ್ಟಿನ ಕಪ್ ವಿತರಣೆಯನ್ನು (ಸೆ.11) ಸೋಮವಾರದಂದು ಅಧೀಕೃತವಾಗಿ ಉದ್ಘಾಟಿಸಿದರು. 

ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ 10 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಲಾಗುವುದು ಮತ್ತು ಪದವಿ ವಿದ್ಯಾರ್ಥಿನಿಯರಿಗೆ ಮೈತ್ರಿ ಮೆನ್ಸ್ಟ್ರುವಲ್ ಕಪ್ ನೀಡಲಾಗುವುದು. ಮತ್ತು ಆರಂಭದಲ್ಲಿ ದಕ್ಷಿಣ ಕನ್ನಡ ಮತ್ತು ಚಾಮಾರಾಜನಗರ ಜಿಲ್ಲೆಯ 15,000 ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ವಿತರಣೆಯ ಬಳಿಕ ರಾಜ್ಯದೆಲ್ಲೆಡೆ ಉಚಿತವಾಗಿ ವಿತರಿಸಲಾಗುವುದು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು. 

ಇದನ್ನು ಓದಿ - ಬನ್ ಟೀ ಟ್ರೈಲರ್ ರಿಲೀಸ್‌.. ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಗೆ ಕೈಗನ್ನಡಿ ಈ ಕತೆ

ಸರ್ಕಾರಿ ಮೈತ್ರಿ ಕಪ್‌ ಯೋಜನೆಯ ರಾಯಭಾರಿಯಾದ ಸಪ್ತಮಿ ಗೌಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಇಂದಿನ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ನಾವು ನೋಡುತ್ತೇವೆ ಆದರೆ ಮುಟ್ಟು ಮಹಿಳೆಯರನ್ನು ಯಾವುದೇ ಕಾರಣಕ್ಕೂ ಹಿಂದೆಳೆಯಬಾರದು. ನಾನು ಕ್ರೀಡಾಪಟು ಮತ್ತು ನನ್ನ ಶಾಲಾ ದಿನಗಳಲ್ಲಿ ನಮಗೆ ವಿತರಿಸುತ್ತಿದ್ದ ಸ್ಯಾನಿಟರಿ ಪ್ಯಾಡ್‌ಗಳ ವಿಲೇವಾರಿ ದೊಡ್ಡ ಸಮಸ್ಯೆಯಾಗುತ್ತಿತ್ತು. ಮತ್ತು ಇಂತಹ ಸಂದರ್ಭದಲ್ಲಿ ಮುಟ್ಟಿನ ಕಪ್‌ಗಳನ್ನು ವಿಲೇವಾರಿ ಮಾಡುವುದು ಸುಲಭದ ಸಂಗತಿ ಮತ್ತು ಈ ಮುಟ್ಟಿನ ಕಪ್‌ಗಳು ಪರಿಸರ ಸ್ನೇಹಿಯಾಗಿದ್ದು, ಯಾವುದೇ ಸೋರಿಕೆಯ ಭಯವಿಲ್ಲದೇ 8 ಗಂಟೆಯವರೆಗೆ ಈ ಕಪ್‌ಗಳನ್ನು ಬಳಸಬಹುದಾಗಿದೆ. 

ಸರ್ಕಾರ ಮೈತ್ರಿ ಕಪ್‌ ಯೋಜನೆಯ ರಾಯಭಾರಿಯಾಗಿ ನನ್ನನ್ನು ಆಯ್ಕೆ ಮಾಡಿರುವುದು ದೊಡ್ಡ ವಿಷಯ ಮತ್ತು ಒಂದು ಬಾರಿ ಮುಟ್ಟಿನ ಸಮಯದಲ್ಲಿ 200ಕೆಜಿಯಷ್ಟು ಸ್ಯಾನಿಟರಿ ಪ್ಯಾಡ್‌ಗಳ ತ್ಯಾಜ್ಯ ಸೃಷ್ಟಿಯಾಗುತ್ತದೆ. ಮತ್ತು ಅದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿರುವ ಮೈತ್ರಿ ಕಪ್‌ಗಳನ್ನು ಸರ್ಕಾರ ವಿತರಿಸುತ್ತಿದೆ ಮತ್ತು ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News