Indian Idol 12: ಮ್ಯೂಸಿಕಲ್ ಸಿರೀಸ್ ನಲ್ಲಿ ಕಮಾಲ್ ಮಾಡಲು ಸಜ್ಜಾದ ತ್ರಿವಳಿಗಳು..!

ಮೂವರು ಸ್ಪರ್ಧಿಗಳು ರಾಜ್ ಸುರಾನಿ ನಿರ್ದೇಶನದ ಸಂಗೀತ ಸರಣಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮೋಡಿ ಮಾಡಲಿದ್ದಾರೆ.

Written by - Puttaraj K Alur | Last Updated : Aug 19, 2021, 11:13 AM IST
  • ಮ್ಯೂಸಿಕ್ ಸಿರೀಸ್ ನಲ್ಲಿ ಕಮಾಲ್ ಮಾಡಲು ಸಜ್ಜಾದ ‘ಇಂಡಿಯನ್ ಐಡಲ್ 12’ ರಿಯಾಲಿಟಿ ಶೋನ ಮೂವರು ಸ್ಪರ್ಧಿಗಳು
  • ರಾಜ್ ಸುರಾನಿ ನಿರ್ದೇಶನದ ಸಂಗೀತ ಸರಣಿಯಲ್ಲಿ ಕಾಣಿಸಿಕೊಳ್ಳಲಿರುವ ಪವನ್ ದೀಪ್, ಅರುಣಿತಾ ಮತ್ತು ಷಣ್ಮುಖ ಪ್ರಿಯಾ
  • ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ ಸಂಗೀತ ಸರಣಿಯ ಚಿತ್ರೀಕರಣ
Indian Idol 12: ಮ್ಯೂಸಿಕಲ್ ಸಿರೀಸ್ ನಲ್ಲಿ ಕಮಾಲ್ ಮಾಡಲು ಸಜ್ಜಾದ ತ್ರಿವಳಿಗಳು..! title=
ಮ್ಯೂಸಿಕಲ್ ಸಿರೀಸ್ ನಲ್ಲಿ ಕಮಾಲ್ ಮಾಡಲಿರುವ ತ್ರಿವಳಿಗಳು

ಮುಂಬೈ: ಬಾಲಿವುಡ್ ನ ಜನಪ್ರಿಯ ಮ್ಯೂಸಿಕ್ ರಿಯಾಲಿಟಿ ಶೋ ‘ಇಂಡಿಯನ್ ಐಡಲ್ 12’(Indian Idol 12) ರಲ್ಲಿ ತಮ್ಮ ಕಂಠಸಿರಿಯಿಂದ ಗಮನ ಸೆಳೆದಿದ್ದ ಮೂವರು ಸ್ಪರ್ಧಿಗಳು ಮ್ಯೂಸಿಕಲ್ ಸಿರೀಸ್ ನಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ರಿಯಾಲಿಟಿ ಶೋ ವಿಜೇತ ಪವನ್ ದೀಪ್ ರಾಜನ್(Pawandeep Rajan), ಮೊದಲನೇ ರನ್ನರ್ ಅಪ್ ಅರುಣಿತಾ ಕಂಜಿಲಾಲ್(Arunita Kanjilal) ಮತ್ತು ಷಣ್ಮುಖ ಪ್ರಿಯಾ(Shanmukha Priya) ಅವರು ರಾಜ್ ಸುರಾನಿ ನಿರ್ದೇಶನದ ಸಂಗೀತ ಸರಣಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮೋಡಿ ಮಾಡಲಿದ್ದಾರೆ.

‘ನಾನು ಇಂಡಿಯನ್ ಐಡಲ್‌(Indian Idol Reality Show)ನ ಎಲ್ಲಾ ಪ್ರಮುಖ ಸ್ಪರ್ಧಿಗಳ ವಿಡಿಯೋ ಚಿತ್ರೀಕರಿಸಿದಾಗ ಪವನ್ ದೀಪ್, ಅರುಣಿತಾ ಮತ್ತು ಷಣ್ಮುಖ ಪ್ರಿಯಾ ಅವರ ಧ್ವನಿ ನನಗೆ ಇಷ್ಟವಾಗಿದೆ. ಈ ಮೂವರೊಂದಿಗೆ ಆಸಕ್ತಿದಾಯಕವಾಗಿರುವ ಮ್ಯೂಸಿಕಲ್ ಸಿರೀಸ್ ಹೊರತರಲು ನಿರ್ಧರಿಸಿದೆ. ಈ ಸಂಗೀತ ಸರಣಿಯನ್ನು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಿಸಲಾಗುವುದು’ ಅಂತಾ ಈ ಮ್ಯೂಸಿಕಲ್ ಸಿರೀಸ್ ನ ಸೃಜನಶೀಲ ನಿರ್ಮಾಪಕ ಮತ್ತು ನಿರ್ದೇಶಕರಾಗಿರುವ ರಾಜ್ ಸುರಾನಿ(Raj Surani) ಹೇಳಿದ್ದಾರೆ.

ಇದನ್ನೂ ಓದಿ: Kaun Banega Crorepati: ಈ ದಿನ ಆರಂಭವಾಗಲಿದೆ ‘ಕೌನ್‌ ಬನೇಗಾ ಕರೋಡ್‌ಪತಿ’ 13ನೇ ಸೀಸನ್..!

ಕುತೂಹಲಕಾರಿ ಅಂಶವೆಂದರೆ ಈ ಮ್ಯೂಸಿಕಲ್ ಸಿರೀಸ್(Musical Series)ಗೆ ಒಂದು ತಿಂಗಳ ಹಿಂದೆಯೇ ಈ ಮೂವರು ಸ್ಪರ್ಧಿಗಳು ಸಹಿ ಹಾಕಿದ್ದರು. ಆ ವೇಳೆ ‘ಇಂಡಿಯನ್ ಐಡಲ್ 12’ ಸ್ಪರ್ಧೆಯ ವಿಜೇತರು ಯಾರಾಗುತ್ತಾರೆ ಎಂಬುದರ ಬಗ್ಗೆ ಸುರಾನಿ ಚಿಂತಿಸಿರಲಿಲ್ಲ. ‘ನಾನು ರಿಯಾಲಿಟಿ ಶೋ ಮುಗಿದ ತಕ್ಷಣ ತನ್ನ ಮ್ಯೂಸಿಕ್ ವಿಡಿಯೋ ಸಿರೀಸ್ ಮುಂದುವರಿಸಲು ನಿರ್ಧರಿಸಿದೆ. ಎಲ್ಲ ಸ್ಪರ್ಧಿಗಳು ಅದ್ಭುತ ಹಾಡುಗಾರರಾಗಿದ್ದಾರೆ. ಅವರು ಸಂಗೀತ ಜಗತ್ತಿಗೆ ಕಾಲಿಡುವ ಮುನ್ನವೇ ದೊಡ್ಡ ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ಮೂವರು ಮೂಲ ಭಾರತೀಯ ರಾಕ್‌ಸ್ಟಾರ್‌ಗಳು ಅಂತಾ ಇಂದು ನಾನು ನಿಜವಾಗಿಯೂ ಭಾವಿಸುತ್ತೇನೆ’ ಎಂದು ಸುರಾನಿ ಹೇಳಿದ್ದಾರೆ.  

ರಿಯಾಲಿಟಿ ಶೋನ ಮೊದಲ ರನ್ನರ್ ಅಪ್ ಆಗಿರುವ ಅರುಣಿತಾ(Arunita Kanjilal)ಮಾತನಾಡಿ, ‘ಸಂಗೀತವನ್ನು ಮತ್ತಷ್ಟು ಕಲಿಯಲು ನಾನು ಇಂಡಿಯನ್ ಐಡಲ್ 12 ಸ್ಪರ್ಧೆಗೆ ಪ್ರವೇಶಿಸಿದೆ. ನಾನು ಇಲ್ಲಿ ಅದ್ಭುತ ಸಮಯವನ್ನು ಕಳೆದಿದ್ದೇನೆ. ರಾಜ್ ಸುರಾನಿ ಸರ್ ತುಂಬಾ ಒಳ್ಳೆಯ ವ್ಯಕ್ತಿ. ಉತ್ತಮ ಮ್ಯೂಸಿಕಲ್ ಸಿರೀಸ್ ಹೊರತರಲು ನಾವು ಪ್ರಯತ್ನಿಸುತ್ತೇವೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಈ ನಟನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರಾ Katrina Kaif ?

ಷಣ್ಮುಖ ಪ್ರಿಯಾ(Shanmukha Priya) ಮತನಾಡಿದ್ದು, ‘ಇಂಡಿಯನ್ ಐಡಲ್‌ನ ಭಾಗವಾಗಬೇಕೆಂಬುದು ನನ್ನ ಬಾಲ್ಯದ ಆಸೆಯಾಗಿತ್ತು. ರಿಯಾಲಿಟಿ ಶೋನ ಸಮಯದಲ್ಲಿ ನಾವು ಕ್ಯಾಮೆರಾ ಎದುರಿಸುವ ಅವಕಾಶ ಪಡೆದುಕೊಂಡಿದ್ದೇವೆ. ನಮಗೆ ರಾಜ್ ಸುರಾನಿ ಸರ್ ಮತ್ತು ತಂಡದವರು ಹುರುದುಂಬಿಸಿದರು. ಚೆನ್ನಾಗಿ ಹಾಡುವಂತೆ ನಮ್ಮನ್ನು ಪ್ರೋತ್ಸಾಹಿಸಿದರು ಮತ್ತು ಪ್ರೇರೇಪಿಸಿದರು. ಮ್ಯೂಸಿಕಲ್ ಸಿರೀಸ್ ಗಾಗಿ ನಾನು ಎದುರು ನೋಡುತ್ತಿದ್ದೇನೆ’ ಅಂತಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News