ಪ್ರಭುದೇವನಿಗಾಗಿ ಸಸ್ಯಾಹಾರಿಯಾಗಿದ್ದೆ..ಆತನನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದೆ-ನಟಿ ವನಿತಾ ವಿಜಯಕುಮಾರ್

Vanitha Vijaykumar on Prabhudeva : ತಮಿಳು ಚಿತ್ರರಂಗದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ನಟಿ ವನಿತಾ ವಿಜಯಕುಮಾರ್ ವಿವಾದಗಳ ರಾಶಿಯನ್ನೇ ಹೊತ್ತುಕೊಂಡಿದ್ದಾರೆ. ಇದೀಗ ನಟಿ  ನೃತ್ಯ ನಿರ್ದೇಶಕ, ನಟ ಹಾಗೂ ನಿರ್ದೇಶಕ ಪ್ರಭುದೇವ ಕುರಿತು ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ.

Written by - Savita M B | Last Updated : Jul 25, 2023, 11:27 AM IST
  • ತಮಿಳಿನ ಜನಪ್ರಿಯ ಹಿರಿಯ ನಟ ವಿಜಯಕುಮಾರ್ ಅವರ ಪುತ್ರಿ ನಟಿ ವನಿತಾ ವಿಜಯಕುಮಾರ್.
  • ಒಂದಿಷ್ಟು ಸಿನಿಮಾಗಳ ಬಳಿಕ ನಟಿ ವನಿತಾ ವಿಜಯಕುಮಾರ್ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು
  • ನಟನೆಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ.
ಪ್ರಭುದೇವನಿಗಾಗಿ ಸಸ್ಯಾಹಾರಿಯಾಗಿದ್ದೆ..ಆತನನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದೆ-ನಟಿ ವನಿತಾ ವಿಜಯಕುಮಾರ್ title=

Vanitha Vijaykumar : ತಮಿಳಿನ ಜನಪ್ರಿಯ ಹಿರಿಯ ನಟ ವಿಜಯಕುಮಾರ್ ಅವರ ಪುತ್ರಿ ನಟಿ ವನಿತಾ ವಿಜಯಕುಮಾರ್. ಇವರ ಮೇಲೆ ವಿವಾದಗಳು ತಾವಾಗಿಯೇ ಬರುತ್ತವೋ ಅಥವಾ ಅವರೆ ಬೇಕಂತಲೇ ಮೈ ಮೇಲೆ ಎಳಿದುಕೊಳ್ಳುತ್ತಾರೋ ಗೊತ್ತಿಲ್ಲ. ತಂದೆಯ ಹಾದಿಯಿಂದಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಹಲವು ಸಿನಿಮಾಗಳಿಗೆ ನಾಯಕಿಯಾಗಿಯೂ ನಟಿಸಿದ್ದರು.

ಒಂದಿಷ್ಟು ಸಿನಿಮಾಗಳ ಬಳಿಕ ನಟಿ ವನಿತಾ ವಿಜಯಕುಮಾರ್ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಇವರು ನಟನೆಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ವೃತ್ತಿಯಲ್ಲಿ ತಕ್ಕಮಟ್ಟಿಗೆ ಯಶಸ್ಸನ್ನು ಗಳಿಸಿದರು ವೈಯಕ್ತಿಕ ಜೀವನ ಬೇರೆಯೇ ಇದೆ.

ನಟಿ ವನಿತಾ ವಿಜಯಕುಮಾರ್ ತನ್ನ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ಮಗಳ ವೈಯಕ್ತಿಕ ಬದುಕಿನ ನಿರ್ಧಾರಗಳಿಂದ ತಂದೆ ವಿಜಯಕುಮಾರ್ ಮತ್ತು ಆಕೆಯ ಸಹೋದರ ಅರುಣ್ ವಿಜಯ್ ಈ ನಟಿಯಿಂದ ದೂರವಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಟಿ ಎಷ್ಟೋ ಬಾರಿ ತಂದೆಯ ವಿರುದ್ಧವಾಗಿಯೂ ಮಾತನಾಡಿದ್ದಾರೆ. 

ಇದನ್ನೂ ಓದಿ-ನಟನಾಗಿ ಸಿನಿರಂಗಕ್ಕೆ ಕ್ಯಾಪ್ಟನ್‌ ಕೂಲ್‌ ಎಂಟ್ರಿ..! ಎಂಎಸ್‌ಡಿ ಫಸ್ಟ್‌ ಸಿನಿಮಾ ಇದೆ ನೋಡಿ..?

ದಾಂಪತ್ಯ ಜೀವನದಲ್ಲಿಯೂ ನಟಿ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ನಟಿ ಎರಡು ಬಾರಿ ವಿವಾಹವಾಗಿದ್ದರು ಅವು ತುಂಬಾ ಕೆಟ್ಟದಾಗಿ ಅಂತ್ಯಗೊಂಡಿವೆ. ಮೊದಲು ನೃತ್ಯ ನಿರ್ದೇಶಕ ರಾಬರ್ಟ್ ಮಾಸ್ಟರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು..ಆದರೆ ಅದು ಬಹಳ ದಿನ ಉಳಿಯಲಿಲ್ಲ. ನಂತರ ಪೀಟರ್‌ ಪಾಲ್ ಜೊತೆ ಮದುವೆಯಾದರೂ ಈ ಸಂಭಂದವೂ ಬೇಗನೇ ಅಂತ್ಯವಾಯ್ತು.

ಇದೀಗ ನಟಿ ವನಿತಾ ವಿಜಯ್‌ಕುಮಾರ್‌ ನೃತ್ಯ ನಿರ್ದೇಶಕ, ನಟ ಹಾಗೂ ನಿರ್ದೇಶಕ ಪ್ರಭುದೇವ ಬಗ್ಗೆ ವನಿತಾ ವಿಜಯ್‌ಕುಮಾರ್ ಅವರ ಬಗ್ಗೆ ಕೆಲವು ವಿಷಯಗಳನ್ನು ಹೊರಹಾಕಿದ್ದಾರೆ. "ನಾನು ಪ್ರಭುದೇವ ಅವರ ಅಪ್ಪಟ ಅಭಿಮಾನಿ, ಅವರನ್ನು ತುಂಬಾನೇ ಪ್ರೀತಿಸುತ್ತಿದ್ದೆ" ಎಂಬ ಹೇಳಿಕೆಯಿಂದ ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ.

"ನಾನು ಪ್ರಭುದೇವ ಅವರನ್ನು ಹುಚ್ಚರಂತೆ ಪ್ರೀತಿಸುತ್ತಿದ್ದೆ. ಅವರ ಪ್ರಿ ಸಿನಿಮಾದ ಪೋಟೋಗಳನ್ನು ನನ್ನ ಕೋಣೆಯಲ್ಲಿ ಹಾಕಿಕೊಳ್ಳುತ್ತಿದ್ದೆ. ನಾನು ಪ್ರಭುದೇವರನ್ನು ಇಷ್ಟು ಪಡುತ್ತಿದ್ದದ್ದನ್ನು ನೋಡಿ ನನ್ನ ತಂದೆ ಅವರನ್ನೇ ಮನೆಗೆ ಕರೆದುಕೊಂಡು ಬಂದಿದ್ದರು. ಪ್ರಭುದೇವ ಬರುತ್ತಾರೆಂದು ತಿಳಿದ ನಾನು ಸಂತೋಷದಿಂದ ಅವರಿಗಾಗಿ ಮಾಂಸಾಹಾರದ ಅಡುಗೆಯನ್ನು ಮಾಡಿದ್ದೆ. ಆದರೆ ಪ್ರಭುದೇವ ಅವರು ಮಾಂಸಾರವನ್ನು ಸೇವಿಸುತ್ತಿರಲಿಲ್ಲ. ಆ ವಿಷಯವನ್ನು ಕೇಳಿ ನನಗೆ ಶಾಕ್ ಆಗಿತ್ತು. ನಂತರ ಅವರಿಗೆ ಮೊಟ್ಟೆಯನ್ನು ಬೇಯಿಸಿ ಬಡಿಸಿದೆ. ಅಲ್ಲದೇ ಕೆಲವು ದಿನಗಳವರೆಗೆ ನಾನು ಸಹ ಮಾಂಸಹಾರವನ್ನು ಬಿಟ್ಟಿದ್ದೆ" ಎಂದು ಹೇಳಿದ್ದಾರೆ. 

ಇದನ್ನೂ ಓದಿ-ಈ ಸ್ಟಾರ್‌ ನಟನ ಮೊದಲ ಸಿನಿಮಾಗೆ ಕೇವಲ 250 ರೂ. ಹಣ ನೀಡಿದ್ದರಂತೆ..! ಇಂದು ಕೋಟಿಗಟ್ಟಲೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News