ಕೊಟ್ಟ ಮಾತನ್ನು ಉಳಿಸಿಕೊಂಡ 'ಹನುಮಾನ್'..! ಅಯೋಧ್ಯ ರಾಮಯ್ಯನಿಗೆ 2 ಕೋಟಿ ರೂ. ದೇಣಿಗೆ

Hanuman Movie : ಕೊಟ್ಟ ಮಾತಿನಂತೆ ʼಹನುಮಾನ್‌ʼ ಚಿತ್ರತಂಡ ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭಾರಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದೆ. ಇಲ್ಲಿಯವರೆಗೆ ಮಾರಾಟವಾದ ಪ್ರತಿ ಟಿಕೆಟ್‌ನಿಂದ ರೂ. 5 ರೂ. ರಾಮಮಂದಿರಕ್ಕೆ ನೀಡಲು ಸಿದ್ಧವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Written by - Krishna N K | Last Updated : Jan 21, 2024, 04:40 PM IST
  • ಕೊಟ್ಟ ಮಾತಿನಂತೆ ನಡೆದುಕೊಂಡ ʼಹನುಮಾನ್‌ʼ ಚಿತ್ರತಂಡ
  • ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭಾರಿ ದೇಣಿಗೆ
  • ತೇಜ ಸಜ್ಜಾ ನಟನೆಯ ಪ್ರಶಾಂತ್ ವರ್ಮಾ ನಿರ್ದೇಶನದ ಚಿತ್ರ
ಕೊಟ್ಟ ಮಾತನ್ನು ಉಳಿಸಿಕೊಂಡ 'ಹನುಮಾನ್'..! ಅಯೋಧ್ಯ ರಾಮಯ್ಯನಿಗೆ 2 ಕೋಟಿ ರೂ. ದೇಣಿಗೆ title=

Hanuman movie donation to Ayodhya : ಯುವ ನಟ ತೇಜ ಸಜ್ಜಾ ಅಭಿನಯದ ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಜನವರಿ 12 ರಂದು ಬಿಡುಗಡೆಯಾದ ಈ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ನಿರಂಜನ್ ರೆಡ್ಡಿ ನಿರ್ಮಿಸಿರುವ ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಈಗಾಗಲೇ ಹನುಮಾನ್‌ ಸಿನಿಮಾ 150 ಕೋಟಿ ರೂ. ಕಲೆಕ್ಷನ್‌ ಮಾಡಿದ್ದು, 200 ಕೋಟಿ ರೂ. ಗಡಿ ಮುಟ್ಟುವ ಹಾದಿಯಲ್ಲಿದೆ. ಎರಡನೇ ವಾರದಲ್ಲೂ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಭವ್ಯ ರಾಮ ಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡುವುದಾಗಿ ಚಿತ್ರತಂಡ ಘೋಷಿಸಿದೆ. ಇಲ್ಲಿಯವರೆಗೆ ಮಾರಾಟವಾದ ಪ್ರತಿ ಟಿಕೆಟ್‌ನಿಂದ 5 ರೂ. ಅನ್ನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲಿದೆ. 

ಇದನ್ನೂ ಓದಿ:ನಟಿ, ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಡಾಕ್ಟರೇಟ್‌ ಗೌರವ..! ಫೋಟೋಸ್‌ ಇಲ್ಲಿವೆ

ಚಿತ್ರಕ್ಕೆ ಮಾರಾಟವಾದ ಪ್ರತಿ ಟಿಕೆಟ್‌ನಿಂದ 5 ರೂ. ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಕೆ ನೀಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಅದರಂತೆ ಇಲ್ಲಿಯವರೆಗೆ 53,28,211 ಟಿಕೆಟ್‌ಗಳು ಮಾರಾಟವಾಗಿದ್ದು, ಅವರಿಂದ ಪಡೆದ 2,66,41,055 ರೂ.ಗಳನ್ನು ನೀಡಲಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಸಿನಿಮಾದ ಪ್ರೀಮಿಯರ್ ಶೋಗಳಿಂದ ಮಾರಾಟವಾದ 2,97,162 ಟಿಕೆಟ್‌ಗಳಿಂದ ಬಂದ 14,85,810 ರೂ. ಚೆಕ್ ಅನ್ನು ದೇಣಿಗೆ ನೀಡಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಮಾರಾಟವಾದ 53,28,211 ಟಿಕೆಟ್‌ಗಳಿಂದ ಬಂದ 2,66,41,055 ರೂ. ಹಣವನ್ನು ರಾಮ ಮಂದಿರಕ್ಕೆ ನೀಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ಅಲ್ಲದೆ, ಈ ಕುರಿತು ಪೋಸ್ಟರ್‌ ಸಹ ಬಿಡುಗಡೆಮಾಡಿದೆ.

ಇದನ್ನೂ ಓದಿ: 'ಕ್ಯಾಪ್ಟನ್ ಮಿಲ್ಲರ್ʼ ಸ್ಟೋರಿ ಸ್ವಂತದ್ದು ಅಲ್ವ..! ಕಾದಂಬರಿಯಿಂದ ಕದ್ದ ಕಥೆಯಂತೆ

ಪ್ರಶಾಂತ್ ವರ್ಮಾ ನಿರ್ದೇಶನದ ‘ಹನುಮಾನ್’ ಚಿತ್ರದಲ್ಲಿ ತೇಜ ಸಜ್ಜಾ, ಅಮೃತಾ ಅಯ್ಯರ್ ನಟಿಸಿದ್ದರು. ವರಲಕ್ಷ್ಮಿ ಶರತ್‌ಕುಮಾರ್, ವಿನಯ್ ರಾಯ್, ಗೆಟಪ್ ಶ್ರೀನು ಮತ್ತು ವೆನ್ನೆಲ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಸೆಲೆಬ್ರೆಟಿಗಳಿಂದಲೂ ಸಹ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News