"ನನ್ನ ಮಣ್ಣು, ನನ್ನ ಹಕ್ಕು": ಕಾಟೇರ ರೈತರ ಸಾಂಗ್‌ ರಿಲೀಸ್‌!

Kaatera Update: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬಹುನಿರೀಕ್ಷಿತ ʻಕಾಟೇರʼ ಸಿನಿಮಾದ, ರೈತ ಭಾವನೆಗಳನ್ನು ಒಳಗೊಂಡ  "ನನ್ನ ಮಣ್ಣು, ನನ್ನ ಹಕ್ಕು" ಹಾಡು ಡಿಸೆಂಬರ್ 23ರಂದು ರಿಲೀಸ್‌ ಆಗಿದೆ. ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Dec 24, 2023, 09:31 AM IST
  • ಕೆಲವು ದಿನಗಳ ಹಿಂದೆ ಈ ಚಿತ್ರದಲ್ಲಿರೋ ರೈತರ ಹಾಡನ್ನ ರಿಲೀಸ್ ಮಾಡುತ್ತಾರೆಂಬ ವಿಷಯ ಹೊರ ಬಿದ್ದಿತ್ತು.
  • ನೆತ್ತರಲ್ಲಿ ನೆಂದ ಭೂಮಿ.. ಎಂದು ಶುರುವಾಗುವ ಹಾಡು ಥ್ರಿಲ್ಲಿಂಗ್ ಆಗಿದ್ದು, ನನ್ನ ಹೆಜ್ಜೆ, ನನ್ನ ಮಣ್ಣು ನನ್ನ ಹಕ್ಕು ಮೊದಲಾದ ರೈತ ಭಾವನೆಗಳನ್ನು ಒಳಗೊಂಡ ಈ ಹಾಡುಸುಂದರವಾಗಿ ಮೂಡಿಬಂದಿದೆ.
  • ಕಾಟೇರ ಸಿನಿಮಾದ ʻನನ್ನ ಮಣು, ನನ್ನ ಹಕ್ಕುʼ ಹಾಡನ್ನು ಅನಿರುದ್ಧ ಶಾಸ್ತ್ರಿ, ಮಧ್ವೇಶ ಭಾರಧ್ವಾಜ್, ಅಭಿಷೇಕ್ ಎಂ.ಆರ್, ವಿಶಾಖ್ ನಾಗಲಪುರ ಹಾಡಿದ್ದು, ಇದಕ್ಕೆ ವಿ ಹರಿಕೃಷ್ಣ ಸಂಗೀತ ಒದಗಿಸಿದ್ದಾರೆ.
"ನನ್ನ ಮಣ್ಣು, ನನ್ನ ಹಕ್ಕು": ಕಾಟೇರ ರೈತರ ಸಾಂಗ್‌ ರಿಲೀಸ್‌! title=

Farmer Song Released: ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬಹುನಿರೀಕ್ಷಿತ ʻಕಾಟೇರʼ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಇದರಲ್ಲಿ ಚಿತ್ರತಂಡ ಹೆಚ್ಚಿನ ಮಾಹಿತಿ ರಿವಿಲ್‌ ಮಾಡದೇಯಿದ್ದರೂ, ರೈತರ ಸಿನಿಮಾನೇ ಆಗಿದೆ ಎಂದು ತಿಳಿದು ಬರುತ್ತದೆ. ಕೆಲವು ದಿನಗಳ ಹಿಂದೆ ಈ ಚಿತ್ರದಲ್ಲಿರೋ ರೈತರ ಹಾಡನ್ನ ರಿಲೀಸ್ ಮಾಡುತ್ತಾರೆಂಬ ವಿಷಯ ಹೊರ ಬಿದ್ದಿತ್ತು.

ಅದರಂತೆ ಡಿಸೆಂಬರ್‌ 23 ರಂದು ರೈತರ ದಿನಾಚರಣೆಯ ಹಿನ್ನೆಲೆ, ಕಾಟೇರ ಚಿತ್ರತಂಡ ಮಂಡ್ಯದಲ್ಲಿ ದೊಡ್ಡ ಇವೆಂಟ್ ಹಮ್ಮಿಕೊಂಡು, ತಮ್ಮ ಚಿತ್ರದ ರೈತರ ಬಗೆಗಿನ ಹಾಡನ್ನ ರಿಲೀಸ್ ಮಾಡಿದೆ. ನಿನ್ನೆಯ ಕಾರ್ಯಕ್ರಮದಲ್ಲಿ ಸಕ್ಕರೆ ನಾಡಿನ  ಜನತೆ ಈ ಹಾಡು ಬಿಡುಗಡೆಗೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ರೈತರ ದಿನಾಚರಣೆಯಂದು ʻಕಾಟೇರʼ ಸ್ಪೆಷಲ್‌ ಇವೆಂಟ್‌!

ಕಾಟೇರ ಚಿತ್ರದ ನೆತ್ತರಲ್ಲಿ ನೆಂದ ಭೂಮಿ.. ಎಂದು ಶುರುವಾಗುವ ಹಾಡು ಥ್ರಿಲ್ಲಿಂಗ್ ಆಗಿದ್ದು, ನನ್ನ ಹೆಜ್ಜೆ, ನನ್ನ ಮಣ್ಣು ನನ್ನ ಹಕ್ಕು ಮೊದಲಾದ ರೈತ ಭಾವನೆಗಳನ್ನು ಒಳಗೊಂಡ ಈ ಹಾಡುಸುಂದರವಾಗಿ ಮೂಡಿಬಂದಿದೆ. ಈ ಹಾಡು ಮಸ್ತ್ ಆಗಿದ್ದು, ಲಿರಿಕ್ಸ್‌ನಷ್ಟೇ ಮ್ಯೂಸಿಕ್ ಕೂಡ ಜೋಶ್‌ನಲ್ಲಿದ್ದು, ಹಸಿವು, ಹಸಿರೇ ಉಸಿರು, ಮಣ್ಣ ಮಗ, ಕೃಷಿ, ಹಂಚಿತಿನ್ನುವ ರೈತರ ಗುಣ ಎಲ್ಲವೂ ಈ ಹಾಡಿನಲ್ಲಿ ಹೈಲೈಟ್ ಆಗಿದೆ.

ಕಾಟೇರ ಸಿನಿಮಾದ ʻನನ್ನ ಮಣು, ನನ್ನ ಹಕ್ಕುʼ ಹಾಡನ್ನು ಅನಿರುದ್ಧ ಶಾಸ್ತ್ರಿ, ಮಧ್ವೇಶ ಭಾರಧ್ವಾಜ್, ಅಭಿಷೇಕ್ ಎಂ.ಆರ್, ವಿಶಾಖ್ ನಾಗಲಪುರ ಹಾಡಿದ್ದು, ಇದಕ್ಕೆ ವಿ ಹರಿಕೃಷ್ಣ ಸಂಗೀತ ಒದಗಿಸಿದ್ದಾರೆ. ಇದಕ್ಕೆ ಪುನೀತ್ ಆರ್ಯ ಸಾಹಿತ್ಯ ಬರೆದಿದ್ದು, ಸದ್ಯ ಹಾಡು ಆನಂದ್ ಆಡಿಯೋದಲ್ಲಿ ರಿಲೀಸ್ ಮಾಡಲಾಗಿದೆ. ಚಿತ್ರದ ರೈತರ ಗೀತೆ ಬೇರೆ ಲೆವಲ್‌ ಕಿಚ್ಚು ಕಟ್ಟಿಕೊಟ್ಟಿದ್ದು, ಇದನ್ನು ಕೇಳ್ತಾ ಹೋದ್ರ ರೋಮಾಂಚನವಾಗಿ,  ಕ್ರಾಂತಿಯ ಕಿಚ್ಚು ಎದೆಯಲ್ಲಿ ಉರಿಯುತ್ತಲೇ ಹೋಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News