Kangana Ranaut ಪ್ರಕರಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್

ಕಂಗನಾ ರಣಾವತ್ ಅವರ ಕಚೇರಿಯ ಒಂದು ಭಾಗವನ್ನು ಕಾನೂನುಬಾಹಿರವೆಂದು ಹೇಳುವ ಮೂಲಕ ಬಿಎಂಸಿ  ಕ್ರಮವನ್ನು ಜರುಗಿಸಿದ್ದು, ಇದಕ್ಕೆ ದೇವೇಂದ್ರ ಫಡ್ನವೀಸ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

Last Updated : Sep 9, 2020, 06:01 PM IST
  • ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಹಾ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್.
  • BMC ಕ್ರಮಕ್ಕೆ ಖೇದ ವ್ಯಕ್ತಪಡಿಸಿದ ಅನುಪಮ್ ಖೇರ್
  • ಬಾಂಬೆ ಹೈಕೋರ್ಟ್ ನಿಂದ ಕಂಗನಾ ರಣಾವತ್ ಗೆ ಭಾರಿ ನೆಮ್ಮದಿ.
Kangana Ranaut ಪ್ರಕರಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ title=

ನವದೆಹಲಿ: ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut) ಮುಂಬೈ ತಲುಪಿದ್ದಾರೆ. ಬಿಗಿ ಭದ್ರತೆಯ ಮಧ್ಯೆ ಅವರನ್ನು ಮುಂಬೈ ವಿಮಾನ ನಿಲ್ದಾಣದಿಂದ ಖಾರ್‌ನಲ್ಲಿರುವ ಅವರ ಮನೆಗೆ ಕರೆತರಲಾಗಿದೆ. ಇದೇ ವೇಳೆ, ವಿಮಾನ ನಿಲ್ದಾಣದ ಹೊರಗೆ ತೀವ್ರ ಕೋಲಾಹಲ ಸೃಷ್ಟಿಯಾಗಿತು. ಒಂದೆಡೆ, ಕಂಗನಾ ಅವರನ್ನು ಬೆಂಬಲಿಸಿ ಪ್ರದರ್ಶನಗಳು ನಡೆಯುತ್ತಿವೆ, ಮತ್ತೊಂದೆಡೆ, ಅವರಿಗೆ ವಿರೋಧವಾಗಿ ಪ್ರದರ್ಶನಗಳೂ ಕೂಡ ನಡೆಯುತ್ತಿವೆ. ಏತನ್ಮಧ್ಯೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಮಹಾರಾಷ್ಟ್ರದ ಇತಿಹಾಸದಲ್ಲಿ ಇದುವರೆಗೆ ಈ ರೀತಿ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.

ಅಸಮಾಧಾನ ವ್ಯಕ್ತಪಡಿಸಿದ ದೇವೇಂದ್ರ ಫಡ್ನವಿಸ್
ಕಂಗನಾ ರಣಾವತ್ ಅವರ ಕಚೇರಿಯ ಒಂದು ಭಾಗವನ್ನು ಕಾನೂನುಬಾಹಿರ ಎಂದು ಹೇಳಿ ಬಿಎಂಸಿ ಕ್ರಮ ಕೈಗೊಂಡಿದೆ. ಇದಕ್ಕೂ ಮೊದಲು ಬಿಎಂಸಿ ನೋಟಿಸ್ ಅಂಟಿಸಿ ಅಕ್ರಮ ನಿರ್ಮಾಣವನ್ನು ಮುರಿಯುವಂತೆ ಹೇಳಿದೆ ಮತ್ತು ಅಲ್ಪಾವಧಿಯಲ್ಲಿಯೇ ಬಿಎಂಸಿ ಅಧಿಕಾರಿಗಳು ಸುತ್ತಿಗೆ ಹಾಗೂ JCB ಮೂಲಕ ಕಂಗನಾ ಕಚೇರಿಯನ್ನು ತಲುಪಿ ಕಛೇರಿಯನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ  ದೇವೇಂದ್ರ ಫಡ್ನವಿಸ್ ಅವರು ನಮ್ಮ ವಿರುದ್ಧ ಮಾತನಾಡುವವರನ್ನು ದಾರಿಯಲ್ಲಿ ಹೊಡೆಯುತ್ತೇವೆ ಹಾಗೂ ಸರ್ಕಾರದ ಬೆಂಬಲದೊಂದಿಗೆ ಇದನ್ನು ಸಾಧ್ಯವಗಿಸುತ್ತೇವೆ, ಈ ರೀತಿ  ಮಹಾರಾಷ್ಟ್ರದ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ. ಸರ್ಕಾರದ ಈ ಕ್ರಮದಿಂದ ಮಹಾರಾಷ್ಟ್ರ ದೇಶದಲ್ಲಿಯೇ ತನ್ನ ಮಾನ ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ . ಇದೆ ರೀತಿ ಹಲವು ಜನರು ಟ್ವೀಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಬಾಂಬೆ ಹೈ ಕೋರ್ಟ್ ನಿಂದ ಕಂಗನಾ ರಣಾವತ್ ಗೆ ಭಾರಿ ನೆಮ್ಮದಿ
ಇಂದು ಮಧ್ಯಾಹ್ನ 12.30ರ ಸುಮಾರಿಗೆ ಚಂಡೀಗಡದಿಂದ ಮುಂಬೈಗೆ ರವಾನೆಯಾಗಿದ್ದಾರೆ. ಇದೇವೇಳೆ ಬುಧವಾರ ಕಂಗನಾ ರಣಾವತ್ ಗೆ ಭಾರಿ ನೆಮ್ಮದಿ ನೀಡಿರುವ ಮುಂಬೈ ಹೈಕೋರ್ಟ್ ಕಂಗನಾ ಅವರ ಮಣಿಕರ್ನಿಕಾ ಫಿಲಂಸ್ ಕಟ್ಟಡದ ಅಕ್ರಮಭಾಗವನ್ನು ಧ್ವಂಸಗೊಳಿಸುವಿಕೆಯ ಮೇಲೆ ತಡೆ ನೀಡಿದೆ. BMC ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಕಂಗನಾ ರಣಾವತ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.

Trending News