Death Threat To Salman Khan: 'ಸಲ್ಮಾನ್ ಖಾನ್ ನನ್ನು ಹತ್ಯೆಗೈಯುತ್ತೇವೆ' ಗೋಲ್ದಿ ಗ್ಯಾಂಗ್ಸ್ಟರ್ ಓಪನ್ ಚಾಲೆಂಜ್, ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

Death Threat To Salman Khan: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಕಳೆದ ಹಲವು ತಿಂಗಳುಗಳಿಂದ ಹೆಚ್ಚಿನ ಭದ್ರತೆಯಲ್ಲಿ ಕಳೆಯಬೇಕಾದ ಸ್ಥಿತಿ ಬಂದೊದಗಿದೆ. ಏಕೆಂದರೆ ಸಲ್ಮಾನ್ ಜೀವಕ್ಕೆ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್‌ನಿಂದ ಅಪಾಯ ಎದುರಾಗಿದೆ. ಇದೀಗ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗೋಲ್ಡಿ ಬ್ರಾರ್ ತಮ್ಮ ರಕ್ತಸಿಕ್ತ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ.  

Written by - Nitin Tabib | Last Updated : Jun 26, 2023, 07:49 PM IST
  • ತನ್ನ ಗುರಿ ಸಲ್ಮಾನ್ ಖಾನ್‌ಗಿಂತಲೂ ಹೆಚ್ಚಿನಾದ್ದಾಗಿದೆ ಎಂದು ಬ್ರಾರ್ ಸ್ಪಷ್ಟಪಡಿಸಿದ್ದಾರೆ.
  • “ಇದು ಕೇವಲ ಸಲ್ಮಾನ್ ಖಾನ್ ಬಗ್ಗೆ ಅಲ್ಲ. ನಾವು ಜೀವಂತವಾಗಿರುವವರೆಗೆ ನಮ್ಮ ಎಲ್ಲಾ ಶತ್ರುಗಳ ವಿರುದ್ಧ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ.
  • ಸಲ್ಮಾನ್ ಖಾನ್ ಪ್ರಾಥಮಿಕ ಗುರಿಯಾಗಿದ್ದಾರೆ ಮತ್ತು ಯಶಸ್ವಿಯಾಗುವವರೆಗೂ ತಾನು ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇರುವುದಾಗಿ ಬ್ರಾರ್ ಒತ್ತಿ ಹೇಳಿದ್ದಾನೆ.
Death Threat To Salman Khan: 'ಸಲ್ಮಾನ್ ಖಾನ್ ನನ್ನು ಹತ್ಯೆಗೈಯುತ್ತೇವೆ' ಗೋಲ್ದಿ ಗ್ಯಾಂಗ್ಸ್ಟರ್ ಓಪನ್ ಚಾಲೆಂಜ್, ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ title=

Death Threat To Salman Khan: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಕಳೆದ ಹಲವು ತಿಂಗಳುಗಳಿಂದ ಹೆಚ್ಚಿನ ಭದ್ರತೆಯಲ್ಲಿ ಕಳೆಯಬೇಕಾದ ಸ್ಥಿತಿ ಬಂದೊದಗಿದೆ. ಏಕೆಂದರೆ ಸಲ್ಮಾನ್ ಜೀವಕ್ಕೆ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್‌ನಿಂದ ಅಪಾಯ ಎದುರಾಗಿದೆ. ಇದೀಗ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗೋಲ್ಡಿ ಬ್ರಾರ್ ತಮ್ಮ ರಕ್ತಸಿಕ್ತ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ.  ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಇತ್ತೀಚೆಗೆ ನಟ ಸಲ್ಮಾನ್ ಖಾನ್ ತನ್ನ ಹಿಟ್ ಲಿಸ್ಟ್‌ನಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾನೆ.

ಪಂಜಾಬಿ ಗಾಯಕ-ರಾಜಕಾರಣಿ ಸಿಧು ಮುಸೇವಾಲಾ ಅವರ ಹತ್ಯೆಗೂ ಗೋಲ್ಡಿ ಬ್ರಾರ್ ಗ್ಯಾಂಗ್ ಕಾರಣ ಎನ್ನಲಾಗಿದೆ. ಸಂದರ್ಶನದಲ್ಲಿ, ಗೋಲ್ಡಿ ಇದೀಗ ಅಂತಹ ಅನೇಕ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ಸಲ್ಮಾನ್ ಖಾನ್ ತನ್ನ ಆಪ್ತ ಸಹಾಯಕನಿಗೆ ಬಂದ ಬೆದರಿಕೆ ಇಮೇಲ್‌ಗೆ ಸಂಬಂಧಿಸಿದಂತೆ ಪೊಲೀಸರನ್ನು ಸಂಪರ್ಕಿಸಿದ ನಂತರ ಈ ಬಹಿರಂಗಪಡಿಸುವಿಕೆ ಮುನ್ನೆಲೆಗೆ ಬಂದಿದೆ.

ಸಂದರ್ಶನದಲ್ಲಿ ಮಾತನಾಡಿರುವ ಗೋಲ್ಡಿ ಬ್ರಾರ್, "ನಾವು ಅವನನ್ನು ಕೊಲ್ಲುತ್ತೇವೆ, ನಾವು ಅವನನ್ನು ಖಂಡಿತವಾಗಿ ಕೊಲ್ಲುತ್ತೇವೆ" ಎಂದು ಹೇಳುವ ಮೂಲಕ ಕೃತ್ಯವನ್ನು ನಡೆಸುವ ತನ್ನ ದೃಢನಿರ್ಧಾರವನ್ನು ಒತ್ತಿ ಹೇಳಿದ್ದಾನೆ. ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಸಂದರ್ಶನವನ್ನು ಉಲ್ಲೇಖಿಸಿದ ಗೋಲ್ದಿ, ಅದರಲ್ಲಿ ಬಿಷ್ಣೋಯ್ ಸಲ್ಮಾನ್ ಖಾನ್ ನನ್ನು  ಕೊಲ್ಲುವುದು ತನ್ನ ಜೀವನದ ಗುರಿ ಎಂದು ಹೇಳಿದ್ದಾನೆ. "ಬಾಬಾ ದಯೆ ತೋರುವಾಗ ಮಾತ್ರ ದಯೆಯನ್ನು ತೋರುತ್ತಾರೆ" ಎಂದು ಗೋಲ್ದಿ ಹೇಳಿದ್ದಾನೆ. 

ಇದನ್ನೂ ಓದಿ-Adipurush: 'ರಾಮಾಯಣ-ಕುರಾನ್ ಗಳಂತಹ ಗ್ರಂಥಗಳನ್ನು ಬಿಟ್ಟುಬಿಡಿ', ಆದಿಪುರುಷ್ ನಿರ್ಮಾಪಕರಿಗೆ ಹೈಕೋರ್ಟ್ ಛೀಮಾರಿ

ತನ್ನ ಗುರಿ ಸಲ್ಮಾನ್ ಖಾನ್‌ಗಿಂತಲೂ ಹೆಚ್ಚಿನಾದ್ದಾಗಿದೆ ಎಂದು ಬ್ರಾರ್ ಸ್ಪಷ್ಟಪಡಿಸಿದ್ದಾರೆ.  “ಇದು ಕೇವಲ ಸಲ್ಮಾನ್ ಖಾನ್ ಬಗ್ಗೆ ಅಲ್ಲ. ನಾವು ಜೀವಂತವಾಗಿರುವವರೆಗೆ ನಮ್ಮ ಎಲ್ಲಾ ಶತ್ರುಗಳ ವಿರುದ್ಧ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಸಲ್ಮಾನ್ ಖಾನ್ ಪ್ರಾಥಮಿಕ ಗುರಿಯಾಗಿದ್ದಾರೆ ಮತ್ತು ಯಶಸ್ವಿಯಾಗುವವರೆಗೂ ತಾನು ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇರುವುದಾಗಿ  ಬ್ರಾರ್ ಒತ್ತಿ ಹೇಳಿದ್ದಾನೆ. 

ಇದನ್ನೂ ಓದಿ-Bollywood News: ರೇಖಾಗೆ ಹಿಂದಿ ಚಿತ್ರೋದ್ಯಮದಲ್ಲಿ ಬ್ರೇಕ್ ನೀಡಿದ ಚಿತ್ರ ನಿರ್ಮಾಪಕ ಕುಲ್ಜೀತ್ ಪಾಲ್ ಇನ್ನಿಲ್ಲ

“ಸಲ್ಮಾನ್ ಖಾನ್ ನಮ್ಮ ಗುರಿ, ಅದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ಪ್ರಯತ್ನಿಸುತ್ತಲೇ ಇರುತ್ತೇವೆ ಮತ್ತು ನಾವು ಯಶಸ್ವಿಯಾದಾಗ ನಿಮಗೆ ತಿಳಿಯುತ್ತದೆ." ಸಲ್ಮಾನ್ ಖಾನ್ ಅವರ ಆಪ್ತ ಸಹಾಯಕ ಪ್ರಶಾಂತ್ ಗುಂಜಾಲ್ಕರ್ ಅವರು ಸ್ವೀಕರಿಸಿದ ಬೆದರಿಕೆ ಇಮೇಲ್‌ಗೆ ಪ್ರತಿಕ್ರಿಯೆಯಾಗಿ ಮಾರ್ಚ್‌ನಲ್ಲಿ ಮುಂಬೈ ಪೊಲೀಸರು ದರೋಡೆಕೋರರಾದ ​​ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.  ಸಲ್ಮಾನ್ ಖಾನ್ ಜೊತೆ ಮಾತನಾಡಲು ದರೋಡೆಕೋರ ಗೋಲ್ಡಿ ಬ್ರಾರ್ ಅವರ ಬಯಕೆಯನ್ನು ಇಮೇಲ್ ವ್ಯಕ್ತಪಡಿಸಿದೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರ ಸಂದರ್ಶನವನ್ನು ಉಲ್ಲೇಖಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Trending News