Darshan : ಏನಿದು ದರ್ಶನ್ 'ಏಕಾಂಗಿ' ಟ್ವೀಟ್?.."ಬೀ ಅಲೋನ್ ಟು ಬಿ ಹ್ಯಾಪಿ" ಎಂದಿದ್ದೇಕೆ ಡಿಬಾಸ್‌..?

Darshan Tweet : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಸೋಷಿಯಲ್‌ ಮಿಡಿಯಾಗಳಲ್ಲಿ ಹೆಚ್ಚು ಸಕ್ರಿಯವಾಗಿರುವುದಿಲ್ಲ. ಅಲ್ಲದೇ ಅವರು ಅನಗತ್ಯವಾಗಿ ಯಾವುದೇ ಪೋಸ್ಟ್‌ ಅಥವಾ ಟ್ವೀಟ್‌ ಮಾಡುವುದಿಲ್ಲ. ಇದೀಗ ದರ್ಶನ್‌ ಸದ್ಯ ವಿಭಿನ್ನವಾಗಿ ಟ್ವೀಟ್ ಮಾಡಿದ್ದು, ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.  

Written by - Savita M B | Last Updated : Aug 29, 2023, 03:06 PM IST
  • ಇತ್ತೀಚೆಗೆ ದರ್ಶನ್‌ ಮೇಲಿಂದ ಮೇಲೆ ಟ್ವೀಟ್‌ ಮಾಡುತ್ತಿದ್ದಾರೆ.
  • ಕಳೆದೆರಡು ದಿನಗಳಿಂದ ದರ್ಶನ್ ಗೊಂದಲ ಸೃಷ್ಟಿಸುವಂತಹ ಟ್ವೀಟ್‌ ಮಾಡುತ್ತಿದ್ದಾರೆ
  • ಸದ್ಯ ದರ್ಶನ್‌ ತಮ್ಮದೊಂದು ಸ್ಟೈಲಿಶ್‌ ಪೋಟೋ ಹಾಕಿ ಅದರ ಮೇಲೆ ಏಕಾಂಗಿ ಎಂದು ಬರೆದುಕೊಂಡಿದ್ದಾರೆ
Darshan : ಏನಿದು ದರ್ಶನ್ 'ಏಕಾಂಗಿ' ಟ್ವೀಟ್?.."ಬೀ ಅಲೋನ್ ಟು ಬಿ ಹ್ಯಾಪಿ" ಎಂದಿದ್ದೇಕೆ ಡಿಬಾಸ್‌..? title=

D Boss : ಇತ್ತೀಚೆಗೆ ದರ್ಶನ್‌ ಮೇಲಿಂದ ಮೇಲೆ ಟ್ವೀಟ್‌ ಮಾಡುತ್ತಿದ್ದಾರೆ. ಅದರಲ್ಲೂ ಕಳೆದೆರಡು ದಿನಗಳಿಂದ ದರ್ಶನ್ ಗೊಂದಲ ಸೃಷ್ಟಿಸುವಂತಹ ಟ್ವೀಟ್‌ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ದರ್ಶನ್‌ ಅವರು ಟ್ವೀಟ್‌ ಮಾಡುವ ಮೂಲಕ  ಮಾಧ್ಯಮಗಳೊಂದಿಗಿನ ಮುನಿಸನ್ನು ಸರಿಪಡಿಸಿಕೊಂಡಿದ್ದಾರೆ. 

ಇದಲ್ಲದೇ ಸ್ಯಾಂಡಲ್‌ವುಡ್‌ ಮಂದಿಗೆ ಇನ್ನೊಂದು ಖುಷಿ ವಿಚಾರವೆಂದರೆ ದರ್ಶನ್‌ ಮತ್ತೆ ತನ್ನ ಕುಚಿಕು ಜೊತೆ ಮುನಿಸು ಮರೆತು ಒಂದಾಗ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೇ ಸಮಯದಲ್ಲಿ ದರ್ಶನ್‌ "ಏಕಾಂಗಿ" ಎಂದು ಟ್ವೀಟ್‌ ಮಾಡಿ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. 

ಇದನ್ನೂ ಓದಿ-ಬಿಗ್ ಬಾಸ್ ನಿರೂಪಣೆಗೆ ಈ ಖ್ಯಾತ ನಟನ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಅಷ್ಟಕ್ಕೂ ಆ ಟ್ವೀಟ್‌ನಲಿ ಅಂತದ್ದೇನಿದೆ ಅಂತೀರಾ...ಕಳೆದ ಎರಡು ದಿನಗಳ ಹಿಂದೆ "ಕಾಲಾಯ ತಸ್ಮಯ್ ನಮಃ.." ಎಂದು ಟ್ವೀಟ್‌ ಮಾಡಿರುವ ದರ್ಶನ್‌ ನಿನ್ನೆ  (ಆಗಸ್ಟ್ 28) ರಂದು ಏಕಾಂಗಿ ಚಿತ್ರದ ಹಾಡನ್ನು ಬರೆದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಸಾಕಷ್ಟು ಚರ್ಚೆ ಮತ್ತು ಗೊಂದಲಗಳನ್ನು ಸೃಷ್ಟಿಸುತ್ತಿದೆ. 

ಸದ್ಯ ದರ್ಶನ್‌ ತಮ್ಮದೊಂದು ಸ್ಟೈಲಿಶ್‌ ಪೋಟೋ ಹಾಕಿ ಅದರ ಮೇಲೆ ಏಕಾಂಗಿ ಚಿತ್ರದ " ಬಿ ಅಲೋನ್ ಟು ಬಿ ಹ್ಯಾಪ್.. ಬಿ ಹ್ಯಾಪಿ ಟು ಬಿ ಅಲೋನ್.. ವಿಥ್ ಮೈ ಸೆಲೆಬ್ರೆಟೀಸ್" ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್‌ ನೋಡಿದ ಫ್ಯಾನ್ಸ್‌ ಸಖತ್‌ ಕನ್‌ಫ್ಯೂಸ್‌ ಆಗಿರೋದಂದತೂ ಸುಳ್ಳಲ್ಲ. 

ಇನ್ನು ಇತ್ತೀಚೆಗೆ ದರ್ಶನ್‌ ಮತ್ತು ಸುದೀಪ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸಲ್ಲಿ ಮತ್ತೆ ಒಂದಾಗುವ ಭರವಸೆ ಮೂಡಿಸಿದ್ದರು. ಈ ಬೆನ್ನಲ್ಲೇ ದರ್ಶನ್‌ ಅವರ ಟ್ವೀಟ್‌ ಮತ್ತೇನೋ ಸಂದೇಶ ನೀಡಿದೆ. ಇನ್ನು ಸುಮಲತಾ ಅವರ ಸಮ್ಮುಖದಲ್ಲಿ ದಚ್ಚು-ಕಿಚ್ಚ ಒಂದಾಗ್ತಾರೆ ಎನ್ನುವ ಮಾತುಗಳು ಸಹ ಸ್ಯಾಂಡಲ್‌ವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. 

ಇದನ್ನೂ ಓದಿ-ಯಶ್‌ ರನ್ನು ಭಾವ ಎನ್ನುವ ಶ್ರೀಲೀಲಾ.. ಈ ಸಂಬಂಧದ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News