Sitara Ghattamaneni: ಸೈಬರ್‌ ಗೀಳಿಗೆ ಸಿಲುಕಿದ ಮಹೇಶ್‌ ಬಾಬು ಪುತ್ರಿ.. ಸಿತಾರ ಹೆಸರಲ್ಲಿ ಕೋಟಿ ಕೋಟಿ ವಂಚನೆ!

 Mahesh babu daughter: ನಟ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಹೆಸರಿನಲ್ಲಿ ಸೈಬರ್ ಕ್ರಿಮಿನಲ್‌ಗಳು ನಕಲಿ ಟ್ರೇಡಿಂಗ್ ಲಿಂಕ್‌ಗಳನ್ನು ಅಭಿಮಾನಿಗಳಿಗೆ ಕಳುಹಿಸಿ ವಂಚಿಸುತ್ತಿದ್ದಾರೆ ಎಂದು ವರದಿಯಾಗಿದೆ..

Written by - Savita M B | Last Updated : Feb 10, 2024, 11:34 AM IST
  • ಸೈಬರ್ ಅಪರಾಧಿಗಳು ಹೆಚ್ಚಾಗುತ್ತಿದ್ದಾರೆ.
  • ನಾನಾ ರೀತಿಯ ವಂಚನೆಗಳನ್ನು ಮಾಡಿ ಅಮಾಯಕರನ್ನು ಸುಲಿಗೆ ಮಾಡುತ್ತಿದ್ದಾರೆ.
  • ಮಹೇಶ್ ಬಾಬು ಪುತ್ರಿ ಸಿತಾರಾ ಮೇಲೆ ಸೈಬರ್ ಕ್ರಿಮಿನಲ್ ಗಳ ಕಣ್ಣು ಬಿದ್ದಿತ್ತು
Sitara Ghattamaneni: ಸೈಬರ್‌ ಗೀಳಿಗೆ ಸಿಲುಕಿದ ಮಹೇಶ್‌ ಬಾಬು ಪುತ್ರಿ.. ಸಿತಾರ ಹೆಸರಲ್ಲಿ ಕೋಟಿ ಕೋಟಿ ವಂಚನೆ!  title=

Sitara Ghattamaneni: ಸೈಬರ್ ಅಪರಾಧಿಗಳು ಹೆಚ್ಚಾಗುತ್ತಿದ್ದಾರೆ. ನಾನಾ ರೀತಿಯ ವಂಚನೆಗಳನ್ನು ಮಾಡಿ ಅಮಾಯಕರನ್ನು ಸುಲಿಗೆ ಮಾಡುತ್ತಿದ್ದಾರೆ. ಜನರ ಮುಗ್ಧತೆ, ದೌರ್ಬಲ್ಯಗಳು, ಅಗತ್ಯತೆಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.. ಹೊಸ ರೀತಿಯಲ್ಲಿ ಮೋಸ ಮಾಡುತ್ತಿದ್ದು.. ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಗಳು ಖಾಲಿಯಾಗುತ್ತಿವೆ.

ಈ ಸೈಬರ್ ಅಪರಾಧಿಗಳು ಈಗಾಗಲೇ ಹಲವು ಸೆಲೆಬ್ರಿಟಿಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದು.. ಅವರ ಹೆಸರನ್ನು ಬ್ಲಾಕ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಇತ್ತೀಚೆಗೆ ಟಾಲಿವುಡ್ ಖ್ಯಾತ ಹೀರೋ ಮಹೇಶ್ ಬಾಬು ಪುತ್ರಿ ಸಿತಾರಾ ಮೇಲೆ ಸೈಬರ್ ಕ್ರಿಮಿನಲ್ ಗಳ ಕಣ್ಣು ಬಿದ್ದಿತ್ತು. ಸದ್ಯ ಸಿತಾರ ಹೆಸರಲ್ಲಿ ಸೈಬರ್ ವಂಚನೆ ಶುರುವಾಗಿದೆ.

ಇದನ್ನೂ ಓದಿ-ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಗೊಂಡು ಸಿನಿಪ್ರಿಯರ ಮನರಂಜಿಸುತ್ತಿರುವ ಜಲಪಾತ ಸಿನಿಮಾ!

ನಟ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಹೆಸರಿನಲ್ಲಿ ಸೈಬರ್ ಕ್ರಿಮಿನಲ್‌ಗಳು ನಕಲಿ ಟ್ರೇಡಿಂಗ್ ಲಿಂಕ್‌ಗಳನ್ನು ಅಭಿಮಾನಿಗಳಿಗೆ ಕಳುಹಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಟ್ರೇಡಿಂಗ್ ಲಿಂಕ್‌ಗಳನ್ನು ಕಳುಹಿಸುವ ಮೂಲಕ ವಂಚಕರು ಹಣ ಗಳಿಸುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಈ ವಿಷಯ ಮಹೇಶ್ ಬಾಬು ತಂಡದ ಗಮನಕ್ಕೆ ಹೋಗಿದ್ದು..ತಕ್ಷಣ ಎಚ್ಚರಿಕೆ ವಹಿಸಿ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯದಲ್ಲೇ ಸೈಬರ್ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದು..ಅಲ್ಲಿಯವರೆಗೂ ಜಾಗೃತರಾಗಿರಿ ಎಂದು ಮನವಿ ಮಾಡಿದ್ದಾರೆ..

ಇದೇ ವೇಳೆ ಮಹೇಶ್ ಬಾಬು ತಂಡ ಅಭಿಮಾನಿಗಳಿಗೆ ಎಚ್ಚರಿಕೆ ನೀಡುವಂತೆ ಕೇಳಿಕೊಂಡಿದೆ.. ಸಿತಾರ ಹೆಸರಿನಲ್ಲಿರುವ ಅನುಮಾನಾಸ್ಪದ ನೋಟಿಫಿಕೇಶನ್ ಹಾಗೂ ರಿಕ್ವೆಸ್ಟ್ ಗಳಿಗೆ ಪ್ರತಿಕ್ರಿಯೆ ನೀಡಬೇಡಿ ಎಂದು ಅಭಿಮಾನಿಗಳಿಗೆ ಮಹೇಶ್ ಟೀಮ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ-ನಟ ಕಬೀರ್ ಬೇಡಿ ಆತ್ಮಕಥನಕ್ಕೆ ನಿರ್ಬಂಧ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News