BBK 10: ಬಿಗ್‌ಬಾಸ್‌ ಮನೆಯ ಟಾಸ್ಕ್‌ನಲ್ಲಿ ಸಿರಿಯನ್ನು ತಳ್ಳಿದ ಸ್ನೇಹಿತ್:‌ ಪ್ರತಾಪ್ ಮೈಂಡ್ ಗೇಮ್ ಆಗಿ ಸಿರಿಯನ್ನು ಬಚಾವ್ ಮಾಡಿದ್ರ?

Bigg Boss Kannada: ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್ ಮಾತ್ರ ಸಖತ್ ಚಾಲೆಂಜಿಂಗ್ ಆಗಿದ್ದು, ಆ ಸಂದರ್ಭದಲ್ಲಿ ಸಿರಿಯನ್ನು ಎದುರಾಳಿ ತಂಡದ ಸದಸ್ಯ ಸ್ನೇಹಿತ್ ತಳ್ಳಿದ್ದರಿಂದ ಬಿದ್ದಾಗ ವೇಳೆ ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ ನಡೆದಿದೆ.

Written by - Zee Kannada News Desk | Last Updated : Nov 30, 2023, 12:19 PM IST
  • ಬಿಗ್‌ಬಾಸ್ ಮನೆಯೊಳಗೆ ಕೇಕ್ ತಿಂದು ರಸಪ್ರಶ್ನೆ ಆಟದ ಟಾಸ್ಕನಲ್ಲಿ ಮೈಕಲ್ ಕನ್ನಡದಲ್ಲಿಯೇ ಮಾತಾಡಿ ಮನೆಯ ಸದಸ್ಯರನ್ನು ಹಾಗೂ ವೀಕ್ಷಕರ ಗಮನವನ್ನು ಸೆಳೆದರು.
  • ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಿಗ್‌ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಬಾಲ್‌ ಎತ್ತಿಕೊಂಡು ಹಾಕಬೇಕು.
  • ಸ್ನೇಹಿತ್ ಕೇವಲ ಸಿರಿಯನ್ನೇ ಈ ಟಾರ್ಗೆಟ್ ಮಾಡುತ್ತಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
BBK 10: ಬಿಗ್‌ಬಾಸ್‌ ಮನೆಯ ಟಾಸ್ಕ್‌ನಲ್ಲಿ ಸಿರಿಯನ್ನು ತಳ್ಳಿದ ಸ್ನೇಹಿತ್:‌ ಪ್ರತಾಪ್ ಮೈಂಡ್ ಗೇಮ್ ಆಗಿ ಸಿರಿಯನ್ನು ಬಚಾವ್ ಮಾಡಿದ್ರ? title=

Snehith Pushed Siri in BBK Task: ಬಿಗ್‌ಬಾಸ್‌ನಲ್ಲಿ ಏನಾದರೂ ಒಂದು ಟಾಸ್ಕ್ ನಡೆಯುತ್ತಲೇ ಇರುತ್ತಿದ್ದು, ಕೆಲವೊಮ್ಮೆ ಚಾಲೆಂಜಿಂಗ್ ಅಂತ ಅನಿಸಿದರೆ, ಮತ್ತೆ ಕೆಲವೊಮ್ಮೆ ಮಸ್ತ್ ಮಜಾ ಕೊಡುತ್ತೆ. ಈಗಾಗಲೇ ದೊಡ್ಮನೆಯ ಆಟವನ್ನು ಸ್ಪರ್ಧಿಗಳು 50 ದಿನಗಳನ್ನು ಪೂರೈಸಿದ್ದರಿಂದ ಟಾಸ್ಕ್‌ನಲ್ಲಿ ಜೋಷ್‌ನಿಂದ ಭಾಗವಹಿಸುತ್ತಿದ್ದು, ಇದೀಗ ಬಿಗ್‌ಬಾಸ್ ಕೂಡ ಮನೆಯೊಳಗಿರುವ ಸ್ಪರ್ಧಿಗಳು ಟಫ್ ಆಗಿರುವ ಟಾಸ್ಕ್‌ಗಳನ್ನೇ ನೀಡುತ್ತಿದ್ದಾರೆ. ನಿನ್ನೆ ಬಿಗ್‌ಬಾಸ್ ಮನೆಯೊಳಗೆ ಬೆಳಗ್ಗೆನೇ ಕೇಕ್ ತಿಂದು ರಸಪ್ರಶ್ನೆ ಆಟದ ಟಾಸ್ಕ್ ಅನ್ನು ನೀಡಲಾಗಿದ್ದು, ಅದರಲ್ಲಿ ಮೈಕಲ್ ಕನ್ನಡದಲ್ಲಿಯೇ ಮಾತಾಡಿ ಬಿಗ್‌ಬಾಸ್ ಮನೆಯ ಸದಸ್ಯರನ್ನು ಹಾಗೂ ವೀಕ್ಷಕರ ಗಮನವನ್ನು ಸೆಳೆದಿದ್ದರು. 

ಆದರೆ, ಎರಡನೇ ಟಾಸ್ಕ್ ಮಾತ್ರ ಸಖತ್ ಚಾಲೆಂಜಿಂಗ್ ಆಗಿತ್ತು.ಬಿಗ್ ಬಾಸ್ ಮನೆಯೊಳಗಿರುವ ಸದಸ್ಯರನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿದ್ದು, ಬಳಿಕ ಅವರ ಕಾಲಿಗೆ ಹಗ್ಗ ಕಟ್ಟಿ ಬಾಲ್ ಅನ್ನು ನಂಬರ್ ಇರುವ ಜಾಗಕ್ಕೆ ಹಾಕಲಾಗಿತ್ತು. ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಿಗ್‌ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಬಾಲ್‌ ಎತ್ತಿಕೊಂಡು ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಹಾಕುತ್ತಾರೋ ಆ ತಂಡ ಗೆದ್ದಂತೆ. ಆದರೆ ಈ ಟಾಸ್ಕ್ ಸ್ಪರ್ಧಿಗಳ ಜಿದ್ದಾಜಿದ್ದಿಗೆ ಕಾರಣವಾಗಿದೆ. 

ಇದನ್ನೂ ಓದಿ: BBK 10: ಡ್ರೋನ್‌ ಪ್ರತಾಪ್‌ ಗೇಮ್‌ ಫ್ಲಾಫ್: ಕ್ಯಾಪ್ಟೆನ್ಸಿ ಓಟಕ್ಕೆ ಕಾರ್ತಿಕ್‌ ವಾಪಸ್!

ಆಟ ಶುರುವಾಗುತ್ತಲೇ ಎರಡೂ ತಂಡದ ಆಟಗಾರರೂ ಜಿದ್ದಾಜಿದ್ದಿಗೆ ಬಿದ್ದು ಆಟವಾಡಿ, ಶತಯಾಗತಾಯ ಬಾಲನ್ನು ಕಸಿದುಕೊಂಡು ಜಾಲರಿಗೆ ಹಾಕಲು ಒದ್ದಾಡುತ್ತಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಆ ವೇಳೆ ಸಿರಿಯನ್ನು ಎದುರಾಳಿ ತಂಡದ ಸದಸ್ಯ ಸ್ನೇಹಿತ್ ತಳ್ಳಿದ್ದರಿಂದ ಬಿದ್ದಿದ್ದಾರೆ. ಸಿರಿ ಬೀಳುತ್ತಿದ್ದಂತೆ ಸ್ನೇಹಿತ್ ಮೇಲೆ ಎಗರಾಡಿ, "ಇಷ್ಟೊಂದು ಫಿಜಿಕಲ್ ಆಗುವುದು ಬೇಕಾ?" ಎಂದು ಪ್ರಶ್ನಿಸಿದ್ದಾರೆ. ಸದ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್ ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ. 

ಆದರೆ, ಸ್ನೇಹಿತ್ ಕೇವಲ ಸಿರಿಯನ್ನೇ ಈ ಟಾರ್ಗೆಟ್ ಮಾಡುತ್ತಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದು, ಇದೇ ಕಾರಣ, ಈ ವಾರ ಎಲಿಮಿನೇಟ್ ಆಗಬಹುದು ಎನ್ನುವ ಪೈಕಿ ಸಿರಿ ಹಾಗೂ ಸ್ನೇಹಿತ್ ಇಬ್ಬರೂ ಇದ್ದಾರೆ. ಇತ್ತ ಪ್ರತಾಪ್ ಮೈಂಡ್ ಗೇಮ್ ಆಗಿ ಸಿರಿಯನ್ನು ಬಚಾವ್ ಮಾಡುತ್ತಿದ್ದಾರೆ ಅನ್ನೋ ಆರೋಪ ಬೇರೆಯಿದ್ದು, ಹೀಗಾಗಿ ಸ್ನೇಹಿತ್ ಪೈಪೋಟಿಗೆ ಬಿದ್ದು ಆಡುವ ಜೋಷ್‌ನಲ್ಲಿ ಸಿರಿಯನ್ನು ತಳ್ಳಿದ್ದಾರೆಂಬ ಆರೋಪ ಕೇಳಿಬರುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News