Bigg Boss Kannada OTT: ಆರ್ಯವರ್ಧನ್‌ ಗುರೂಜಿ ಮೇಕಪ್‌ ಕಹಾನಿ..! ಇಷ್ಟು ಮೇಕಪ್‌ ಮಾಡಲು ಕಾರಣವೇನು..?

ಬಿಗ್‌ ಬಾಸ್‌ ಓಟಿಟಿ ಸೀಸನ್-1‌ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಅದರಲ್ಲೂ ಆರ್ಯವರ್ಧನ್‌ ಗುರೂಜಿ ಮೇಲೆ ಎಲ್ಲರೂ ಗಮನ ಹರಿಸುತ್ತಿದ್ದಾರೆ. ಎಲ್ಲರ ಜೊತೆ ಬೆರೆಯುತ್ತಾ, ಟಾಸ್ಕ್‌ ಬಂದಾಗ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿರುವ ಆರ್ಯವರ್ಧನ್‌ ಗುರೂಜಿ ಇದೀಗ ಹೊಸ ಅವತಾರ ತಾಳಿದ್ದಾರೆ.

Written by - Malathesha M | Edited by - Manjunath N | Last Updated : Aug 12, 2022, 04:26 PM IST
  • ಒಟ್ಟಾರೆ ಗೆಲುವಿಗಾಗಿ ಬಿಗ್‌ ಬಾಸ್‌ ಓಟಿಟಿ ಸೀಸನ್-1‌ ಸ್ಪರ್ಧಿಗಳು ಜಿದ್ದಿಗೆ ಬಿದ್ದು ಆಕ್ಟಿವ್‌ ಆಗಿದ್ದಾರೆ.
  • 16 ಸ್ಪರ್ಧಿಗಳಲ್ಲಿ ಯಾರು ಹೊರಗೆ ಹೋಗ್ತಾರೆ ಅನ್ನೋದನ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಡಿಸೈಡ್‌ ಮಾಡಲಿದ್ದಾರೆ
Bigg Boss Kannada OTT: ಆರ್ಯವರ್ಧನ್‌ ಗುರೂಜಿ ಮೇಕಪ್‌ ಕಹಾನಿ..! ಇಷ್ಟು ಮೇಕಪ್‌ ಮಾಡಲು ಕಾರಣವೇನು..? title=

ಬೆಂಗಳೂರು: ಬಿಗ್‌ ಬಾಸ್‌ ಓಟಿಟಿ ಸೀಸನ್-1‌ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಅದರಲ್ಲೂ ಆರ್ಯವರ್ಧನ್‌ ಗುರೂಜಿ ಮೇಲೆ ಎಲ್ಲರೂ ಗಮನ ಹರಿಸುತ್ತಿದ್ದಾರೆ. ಎಲ್ಲರ ಜೊತೆ ಬೆರೆಯುತ್ತಾ, ಟಾಸ್ಕ್‌ ಬಂದಾಗ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿರುವ ಆರ್ಯವರ್ಧನ್‌ ಗುರೂಜಿ ಇದೀಗ ಹೊಸ ಅವತಾರ ತಾಳಿದ್ದಾರೆ.

ಆರ್ಯವರ್ಧನ್‌ ಗುರೂಜಿ ಹೊರಗೆ ಇದ್ದಾಗಲೂ ಎಲ್ಲರ ಗಮನ ಸೆಳೆಯುತ್ತಾ, ಟ್ರೋಲರ್ಸ್‌ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು.ಇದೀಗ ಆರ್ಯವರ್ಧನ್‌ ಅವರು ಬಿಗ್‌ ಬಾಸ್‌ ಓಟಿಟಿ ಸೀಸನ್-1‌ ಸ್ಪರ್ಧಿಯಾಗಿದ್ದರೂ ಟ್ರೋಲರ್ಸ್‌ ಬಿಡುತ್ತಿಲ್ಲ. ಅಲ್ಲಿ ಏನೇ ಮಾಡಿದರೂ ಗುರೂಜಿ ಟ್ರೋಲ್‌ ಆಗೋದು ಪಕ್ಕಾ. ಅದ್ರಲ್ಲೂ ಹಿಂದೆ ಗುರೂಜಿ ಐಪಿಎಲ್‌ ಕುರಿತು ಹೇಳುತ್ತಿದ್ದ ಭವಿಷ್ಯ ಸಾಕಷ್ಟು ಟ್ರೋಲ್‌ ಆಗುತ್ತಿತ್ತು.

ಇದನ್ನೂ ಓದಿ: ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಪಡೆದವರು 17% ಮಾತ್ರ : ಸಚಿವ ಸುಧಾಕರ್‌

ಮೇಕಪ್‌ ಯಾಕೆ..?
ಈಗಾಗಲೇ ಬಿಗ್‌ ಬಾಸ್‌ ಓಟಿಟಿ ಸೀಸನ್-1‌ ಹಲವು ಎಪಿಸೋಡ್‌ ಮುಗಿಸಿ, ಎಲಿಮಿನೇಷನ್‌ ರೌಂಡ್‌ಗೆ ಕಾಲು ಇಡುತ್ತಿದೆ. ಹೀಗಾಗಿ ಟಾಸ್ಕ್‌ಗಳ ಭರಾಟೆ ಜೋರಾಗಿದ್ದು, ಗೆಲುವಿಗಾಗಿ ಎಲ್ಲರೂ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಇದೇ ರೀತಿ ಹೊಸ ಟಾಸ್ಕ್‌ಗೆ ತಕ್ಕಂತೆ ಸಿದ್ಧವಾಗಲು ಸದ್ಯ ಆರ್ಯವರ್ಧನ್‌ ಗುರೂಜಿ ಹೊಸ ಅವತಾರ ಎತ್ತಿದ್ದಾರೆ. ಇದೀಗ ಆರ್ಯವರ್ಧನ್‌ ಗುರೂಜಿಯ ಹೊಸ ಅವತಾರ ಸೋಷಿಯಲ್‌ ಮೀಡಿಯಾ ತುಂಬಾ ವೈರಲ್‌ ಆಗುತ್ತಿದೆ.‌ ಅಷ್ಟಕ್ಕೂ ಯಾಕಪ್ಪಾ ಗುರೂಜಿ ಇಷ್ಟೊಂದು ಬಣ್ಣ ಹಚ್ಚಿಕೊಂಡಿರೋದು ಅನ್ನೋ ಪ್ರಶ್ನೆಗೆ ಬಿಗ್‌ ಬಾಸ್‌ನಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ: ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ

ಒಟ್ಟಾರೆ ಗೆಲುವಿಗಾಗಿ ಬಿಗ್‌ ಬಾಸ್‌ ಓಟಿಟಿ ಸೀಸನ್-1‌ ಸ್ಪರ್ಧಿಗಳು ಜಿದ್ದಿಗೆ ಬಿದ್ದು ಆಕ್ಟಿವ್‌ ಆಗಿದ್ದಾರೆ. 16 ಸ್ಪರ್ಧಿಗಳಲ್ಲಿ ಯಾರು ಹೊರಗೆ ಹೋಗ್ತಾರೆ ಅನ್ನೋದನ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಡಿಸೈಡ್‌ ಮಾಡಲಿದ್ದಾರೆ. ಹೀಗಾಗಿ ವಾರದ ಕಥೆಗಾಗಿ ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದು, ಎಲ್ಲದಕ್ಕೂ ಉತ್ತರ ಕಿಚ್ಚ ಸುದೀಪ್‌ ಅವರ ಕಾರ್ಯಕ್ರಮ ನೀಡಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News