Bigg Boss: ಜೈಲಿಗೆ ಹೋಗಿ ಇತಿಹಾಸ ಸೃಷ್ಟಿಸ್ತಾರಂತೆ ತುಕಾಲಿ! ಕಳಪೆ ಪಟ್ಟ ಪಡೆದ ಸಂತುಗೆ ಪಂತು ಆಶೀರ್ವಾದ

Tukali Santosh: ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್‌ ಕೂಡ ನಡೆದಿದ್ದು, ಈ ವಾರ ತುಕಾಲಿ ಸಂತೋಷ್ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಇದಾದ ಬಳಿಕ ಕೋಪಗೊಂಡ ವರ್ತೂರ್ ಸಂತೋಷ್, ಜೈಲಿಗೆ ಹೋದವರು ಇತಿಹಾಸನೇ ಸೃಷ್ಟಿಸ್ತಾರೆ ಎನ್ನುತ್ತಾ ಗೆಳಯನನ್ನು ಕಳುಹಿಸಿ ಕೊಟ್ಟಿದ್ದಾರೆ.

Written by - Bhavishya Shetty | Last Updated : Jan 12, 2024, 08:40 PM IST
    • ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌
    • ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್‌
    • ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪ್ರೋಮೊ
Bigg Boss: ಜೈಲಿಗೆ ಹೋಗಿ ಇತಿಹಾಸ ಸೃಷ್ಟಿಸ್ತಾರಂತೆ ತುಕಾಲಿ! ಕಳಪೆ ಪಟ್ಟ ಪಡೆದ ಸಂತುಗೆ ಪಂತು ಆಶೀರ್ವಾದ title=
Tukali Santosh

Bigg Boss 10 Kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಇದೀಗ ಫಿನಾಲೆಯ ಹಾದಿಯಲ್ಲಿದೆ. ಈ ನಡುವೆಯೇ ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್‌ ಕೂಡ ನಡೆದಿದ್ದು, ಈ ವಾರ ತುಕಾಲಿ ಸಂತೋಷ್ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಇದಾದ ಬಳಿಕ ಕೋಪಗೊಂಡ ವರ್ತೂರ್ ಸಂತೋಷ್, ಜೈಲಿಗೆ ಹೋದವರು ಇತಿಹಾಸನೇ ಸೃಷ್ಟಿಸ್ತಾರೆ ಎನ್ನುತ್ತಾ ಗೆಳಯನನ್ನು ಕಳುಹಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಗೆಸ್ ಮಾಡೋಕು ಸಾಧ್ಯವಾಗದ ಈ ಸ್ಪರ್ಧಿಯೇ ಬಿಗ್ ಬಾಸ್’ನಿಂದ ಹೊರಕ್ಕೆ! ಫಿನಾಲೆ ಸಮೀಪದಲ್ಲಿ ‘ಎಲಿಮಿನೇಷನ್’ ತೂಗುಗತ್ತಿ

ಇನ್ನು ಘಟನೆಯ ಝಲಕ್ ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪ್ರೋಮೊದಲ್ಲಿ ಬಹಿರಂಗವಾಗಿದೆ.

ಪ್ರತಾಪ್, ‘ಈ ವಾರದ ಕಳಪೆ ಅನ್ನು ನಾನು ತುಕಾಲಿ ಸಂತೋಷ್‌ ಅವರಿಗೆ ಕೊಡುತ್ತೇನೆ’ ಎಂದು ಹೇಳಿದ್ದಾರೆ.  ಇವರ ಜೊತೆಗೆ ಮನೆಯ ಹಲವು ಸದಸ್ಯರು ಕೂಡ ತುಕಾಲಿ ಅವರ ಹೆಸರನ್ನೇ ಕಳಪೆಯಾಗಿ ತೆಗೆದುಕೊಂಡಿದ್ದಾರೆ, ಆದರೆ ವೋಟಿಂಗ್ ನಂತರದಲ್ಲಿ ವರ್ತೂರು ಮತ್ತು ಪ್ರತಾಪ್ ನಡುವೆ ಮಾತಿನ ಚಕಮಕಿ ನಡೆದಿದೆ.

ಇಂಥ ವೇದಿಕೆ ಸಿಕ್ಕಾಗ ಪ್ರೂವ್ ಮಾಡಿಕೊಳ್ಳಬೇಕು ಎಂದಿರುವ ವರ್ತೂರು, ನಿನ್ನನ್ನು ಯಾರೂ ನಂಬುವುದಿಲ್ಲ ಎಂದೂ ಪ್ರತಾಪ್‌ಗೆ ತಿವಿದಿದ್ದಾರೆ. ಅಷ್ಟೇ ಅಲ್ಲ, ಇಲ್ಲಿಂದ ಹೊರಗೆ ಹೋದ ಮೇಲೆ ಇತಿಹಾಸವೇ ಸೃಷ್ಟಿಯಾಗೋದು ಎಂದೂ ವರ್ತೂರು ಹೇಳಿದ್ದಾರೆ. ಹಾಗಾದರೆ ವರ್ತೂರು ಈ ಮಾತು ಹೇಳಿದ್ದು ಬಿಗ್‌ ಬಾಸ್ ಷೋ ಬಗ್ಗೆ ಹೇಳಿದ್ದಾರೋ ಅಥವಾ ಜೈಲುಪಾಲಾದ ತುಕಾಲಿ ಸಂತೋಷ್ ಬಗ್ಗೆ ಹೇಳಿದ್ದಾರೋ ತಿಳಿಯದು.

ಇದನ್ನೂ ಓದಿ: “ನಾನು 3ನೇ ಹಂತದ ಸ್ತನ ಕ್ಯಾನ್ಸರ್’ನಿಂದ ಬಳಲುತ್ತಿದ್ದೇನೆ”- ಲೈವ್ ಬಂದು ಹೇಳಿದ ಖ್ಯಾತ ನಿರೂಪಕಿ

ಒಟ್ಟಾರೆಯಾಗಿ ಈ ವಾರದ ಕಳಪೆ ಪಟ್ಟ ತುಕಾಲಿಗೆ ಸಿಕ್ಕಿದೆ. ಹಾಗಾದ್ರೆ ಉತ್ತಮ ಪಟ್ಟ ಯಾರಿಗೆ ಸಿಕ್ಕಿದೆ? ಯಾರು ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ? ಮುಂದಿನ ವಾರದ ಕ್ಯಾಪ್ಟನ್ ಯಾರಾಗಿರುತ್ತಾರೆ? ಎಂಬೆಲ್ಲಾ ಪ್ರಶ್ನೆಗಳಿಗೆ ಇವತ್ತಿನ ಎಪಿಸೋಡ್’ನಲ್ಲಿ ಉತ್ತರ ಸಿಗಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News