Vijayalakshmi Darshan : ಕೆಟ್ಟ ಘಳಿಗೆ ಹೋಗಿ.. ಸತ್ಯ ಮೇಲುಗೈ ಸಾಧಿಸಲಿದೆ..! ವಿಜಯಲಕ್ಷ್ಮಿ ದರ್ಶನ್‌

Vijaya lakshmi Darshan post : ನಟ ದರ್ಶನ್‌ ಬಂಧನ ಹಿನ್ನೆಲೆ ಅವರ ಅಭಿಮಾನಿಗಳು ನೋವು ಅನುಭವಿಸುತ್ತಿದ್ದಾರೆ. ಕೆಲವರು ಜೈಲಿನ ಹೊರಗಡೆ ನಿಂತು ಅವರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇನ್ನೂ ಕೆಲವರು ಅತಿರೇಕದ ವರ್ತನೆ ತೋರಿ ಪೊಲೀಸರ ಲಾಠಿ ಏಟಿನ ರುಚಿ ಅನುಭವಿಸುತ್ತಿದ್ದಾರೆ.. ಇದರ ಬೆನ್ನಲ್ಲೆ ವಿಜಯಲಕ್ಷ್ಮಿ ದರ್ಶನ್‌ ಅವರು ಪೋಸ್ಟ್‌ ಒಂದು ಹಂಚಿಕೊಂಡಿದ್ದಾರೆ..

Written by - Krishna N K | Last Updated : Jun 26, 2024, 07:45 PM IST
    • ಹೊರಗಿನ ಪರಿಸ್ಥಿತಿ ಬಗ್ಗೆ ಅವರಿಗೆ ನಾನು ತಿಳಿಸಿದ್ದೀನಿ.
    • ಅಭಿಮಾನಿಗಳನ್ನ ಶಾಂತವಾಗಿ ಇರುವಂತೆ ದರ್ಶನ್ ಕೇಳಿಕೊಂಡಿದ್ದಾರೆ.
    • ದರ್ಶನ್‌ ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಪೋಸ್ಟ್‌
Vijayalakshmi Darshan : ಕೆಟ್ಟ ಘಳಿಗೆ ಹೋಗಿ.. ಸತ್ಯ ಮೇಲುಗೈ ಸಾಧಿಸಲಿದೆ..! ವಿಜಯಲಕ್ಷ್ಮಿ ದರ್ಶನ್‌  title=
Vijayalakshmi Darshan

Vijaya lakshmi Darshan : ದರ್ಶನ್‌ ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ʼನಿಮಗೆಲ್ಲ ಗೊತ್ತಿದೆ ಅಭಿಮಾನಿಗಳನ್ನ ದರ್ಶನ್ ಎಷ್ಟು ಪ್ರೀತಿ ಮಾಡುತ್ತಾರೆ ಅಂತ, ಇಂಥಹ ದುಃಖದ ಸಮಯದಲ್ಲಿ ನಾವು ಅವರಿಂದ ದೂರ ಇರುವಂತೆ ಆಗಿದೆ, ಹೊರಗಿನ ಪರಿಸ್ಥಿತಿ ಬಗ್ಗೆ ಅವರಿಗೆ ನಾನು ತಿಳಿಸಿದ್ದೀನಿ, ಅಭಿಮಾನಿಗಳನ್ನ ಶಾಂತವಾಗಿ ಇರುವಂತೆ ದರ್ಶನ್ ಕೇಳಿಕೊಂಡಿದ್ದಾರೆ. ನಿಮ್ಮ ಅಭಿಮಾನದ ಬಗ್ಗೆ ಕೇಳಿ ಭಾವುಕರಾಗಿದ್ದಾರೆ ಎಂದು ಪ್ಯಾನ್ಸ್‌ಗೆ ವಿಜಯಲಕ್ಷ್ಮಿ ತಿಳಿಸಿದ್ದಾರೆ..

ಅಲ್ಲದೆ, ನನಗೆ ಗೊತ್ತಿದೆ ಮುಂದೆ ನನ್ನ ಪತಿಗೆ ಒಳ್ಳೆಯ ದಿನಗಳು ಬರುತ್ತೆ. ಆದರೆ ತಾವು ಈ ಪ್ರಕರಣದಿಂದ‌ ಯಾವುದೇ ಉದ್ವೇಗಕ್ಕೆ‌‌ ಒಳಗಾಗಬೇಡಿ. ನಿಮ್ಮ ಶಾಂತ ಸ್ವಭಾವವೇ ನಮ್ಮ‌ ದೊಡ್ಡ ಶಕ್ತಿ. ಈ ಕೆಟ್ಟ ಘಳಿಗೆಯೂ ಹೋಗಲಿದೆ.. ಸತ್ಯ ಮೇಲುಗೈ ಸಾಧಿಸಲಿದೆ ಎಂದು ಹೇಳಿದ್ದಾರೆ..

ಇದನ್ನೂ ಓದಿ: ರೇಣುಕಾಸ್ವಾಮಿ ವಿಚಾರದಲ್ಲಿ ದರ್ಶನ್ ದುಡುಕಿದ್ರು, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಬೇಕು..! ನಟಿ ಶೃತಿ ಹೇಳಿಕೆ

ದರ್ಶನ್ ನಿಮ್ಮನ್ನ ಎಷ್ಟು ಪ್ರೀತಿ ಮಾಡ್ತಾರೆ ಅನ್ನೋದು ನನಗೆ ಗೊತ್ತು, ಇಂಥಾ ಕಷ್ಟಕರ ಸನ್ನಿವೇಶವನ್ನ‌ ಎದುರಿಸುತ್ತಿರುವುದು ದುರದೃಷ್ಟಕರ. ಸದ್ಯಕ್ಕೆ ಅವರಿಂದ ಅಂತರ ಕಾಯ್ದುಕೊಳ್ಳುವ ಪರಿಸ್ಥಿತಿ ಇದೆ. ನಾನು ಅವರ ಜೊತೆ ಹೊರಗಿನ ಪರಿಸ್ಥಿತಿ ಬಗ್ಗೆ ವಿವರವಾಗಿ ಮಾತಾಡಿದ್ದೇನೆ. ಎಲ್ಲಾ ವಿಚಾರಗಳನ್ನ ತಿಳಿದು ದರ್ಶನ್ ಮನ‌ ಕಲಕಿತು ಅಂತ ವಿಜಯಲಕ್ಷ್ಮಿಯವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಎಲ್ಲಾ ಅಭಿಮಾನಿಗಳು ಶಾಂತಿ ಕಾಪಾಡಬೇಕು ಎಂದು‌ ಮನವಿ ಮಾಡಿದ್ದಾರೆ.

ನಮ್ಮ ದೇಶದ ನ್ಯಾಯಾಂಗದ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಇದೆ. ಮುಂದೆ ಒಳ್ಳೆ ದಿನಗಳು ಬರಲಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಅವರನ್ನ ತೇಜೋವಧೆ ಮಾಡಲಾಗುತ್ತಿದೆ. ಅವರನ್ನ ತಾಯಿ ಚಾಮುಂಡೇಶ್ವರಿ ‌ನೋಡಿಕೊಳ್ಳುತ್ತಾಳೆ. ಕಷ್ಟದ ಸಮಯದಲ್ಲಿ‌ ನಿಮ್ಮ‌ ಬೆಂಬಲವನ್ನ‌ ನಿರೀಕ್ಷಿಸುತ್ತಿದ್ದೇನೆ ಎಂದು ವಿಜಯಲಕ್ಷ್ಮಿ ದರ್ಶನ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News