ಡ್ರೈವರ್ ಮಾತು ಕೇಳಿ 100 ಕೋಟಿ ರೂ. ಬೆಲೆ ಬಾಳುವ ಆಸ್ತಿ ಕಳೆದುಕೊಂಡ ಸ್ಟಾರ್‌ ನಟ..! 

Babloo Prithviraj : ಎರಡೂವರೆ ದಶಕಗಳ ಹಿಂದೆ ʼಸರ್ಕಲ್‌ ಇನ್ಸ್‌ಪೆಕ್ಟರ್‌ʼ ಚಿತ್ರದ ಮೂಲಕ ಪೃಥ್ವಿರಾಜ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಬಬ್ಲೂ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ನಂತರ ಶ್ರೀಕಾಳಿಕಾಂಬ ಚಿತ್ರದ ಮೂಲಕ ನಟ ಕರುನಾಡಿನ ಜನ ಮನಗೆದ್ದರು. ತದನಂತರ ಹಲವು ಚಿತ್ರಗಳಲ್ಲಿ ಖಳ ನಾಯಕ ನಟನಾಗಿ ಗುರುತಿಸಿಕೊಂಡರು.. 

Written by - Krishna N K | Last Updated : May 26, 2024, 12:34 PM IST
    • ʼಸರ್ಕಲ್‌ ಇನ್ಸ್‌ಪೆಕ್ಟರ್‌ʼ ಚಿತ್ರದ ಮೂಲಕ ಪೃಥ್ವಿರಾಜ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.
    • ಈ ಸಿನಿಮಾದಲ್ಲಿ ಬಬ್ಲೂ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು..
    • ಇದೀಗ ಪೃಥ್ವಿರಾಜ್‌ ಅವರ ಕುರಿತ ವಿಷಯವೊಂದು ಮುನ್ನೆಲೆಗೆ ಬಂದಿದೆ.
ಡ್ರೈವರ್ ಮಾತು ಕೇಳಿ 100 ಕೋಟಿ ರೂ. ಬೆಲೆ ಬಾಳುವ ಆಸ್ತಿ ಕಳೆದುಕೊಂಡ ಸ್ಟಾರ್‌ ನಟ..!  title=

Babloo Prithviraj driver : ಬಹುಭಾಷಾ ನಟ ಪೃಥ್ವಿರಾಜ್ ದಕ್ಷಿಣ ಚಿತ್ರರಂಗದಲ್ಲಿ ಹೀರೋ, ವಿಲನ್, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಇಮೇಜ್ ಗಿಟ್ಟಿಸಿಕೊಂಡಿದ್ದರು. ಕನ್ನಡ, ತೆಲುಗು, ತಮಿಳಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾದರು. ಆದರೆ ಕಾರಣಾಂತರದಿಂದ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಸಿನಿಮಾಗಳಿಗೆ ಎಂಟ್ರಿ ಕೊಡುತ್ತಿದ್ದಾರೆ. 

ಸಧ್ಯ ಸಿನಿಮಾ, ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ತೆರೆಯ ಮೇಲೆ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ರಣಬೀರ್‌ ಕಪೂರ್‌ ನಟನೆಯ ಅನಿಮಲ್‌ ಸಿನಿಮಾದಲ್ಲಿಯೂ ಸಹ ಕಾಣಿಸಿಕೊಂಡಿದ್ದರು. ಇದೀಗ ಪೃಥ್ವಿರಾಜ್‌ ಅವರ ಕುರಿತ ವಿಷಯವೊಂದು ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಆಶಿಕಾ ರಂಗನಾಥ್...ಯಾವ ಚಿತ್ರ?

‌ಈ ಖ್ಯಾತ ನಟ ಒಮ್ಮೆ ತಮ್ಮ ಡ್ರೈವರ್ ಮಾತು ಕೇಳಿ ನೂರಾರು ಕೋಟಿ ರೂ. ಬೆಲೆ ಬಾಳುವ ಆಸ್ತಿ ಬಿಟ್ಟುಕೊಟ್ಟಿದ್ದರಂತೆ. ಇದನ್ನು ಸ್ವತಃ ಪೃಥ್ವಿರಾಜ್ ಬಹಿರಂಗಪಡಿಸಿದ್ದಾರೆ. ಈ ಹಿಂದೆ ಹೈದ್ರಾಬಾದ್‌ನ ಶಂಶಾಬಾದ್‌ನಲ್ಲಿ ನೂರಾರು ಎಕರೆ ಭೂಮಿಯನ್ನು ಕೇವಲ ಹತ್ತು ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ನಾನು ನನ್ನ ಡ್ರೈವರ್ ಜೊತೆ ಸೈಟ್ ನೋಡಲು ಹೋಗಿದ್ದೆ.. 

ನನಗೆ ಸೈಟ್ ತುಂಬಾ ಇಷ್ಟವಾಯಿತು.. ತಕ್ಷಣ ಅದನ್ನು ಖರೀದಿಸಲು ಮುಂದಾದೆ. ಆದರೆ ನನ್ನ ಡ್ರೈವರ್ ನನ್ನನ್ನು ಪಕ್ಕಕ್ಕೆ ಕರೆದೊಯ್ದು, ಇದು ನಿರುಪಯುಕ್ತ ಜಾಗ.. ಈ ಜಮೀನನ್ನು ಹತ್ತು ಲಕ್ಷ ಕೊಟ್ಟು ಖರೀದಿಸುವುದು ವ್ಯರ್ಥ ಎಂದು ಹೇಳಿದ, ಅದಕ್ಕೆ ನಾನು ಆ ಜಮೀನನ್ನು ಖರೀದಿಸದೆ ಬಿಟ್ಟು ಹೋದೆ.. ಈಗ ಅಲ್ಲಿ, ಶಂಶಾಬಾದ್ ವಿಮಾನ ನಿಲ್ದಾಣ ನಿರ್ಮಾಣವಾಗಿದೆ, ಪ್ರಸ್ತುತ ಆ ಜಮೀನಿನ ಮೌಲ್ಯ ಎಕರೆಗೆ 100 ಕೋಟಿ ರೂ. ಎಂದು ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News