ಜುಲೈ 1ರಿಂದ ಚಾರ್ಧಮ್ ಯಾತ್ರೆ ಆರಂಭ, ಆದರೆ...

ಪ್ರಯಾಣಕ್ಕಾಗಿ ಜನರು ಆಯಾ ಧಾಮದ ಜಿಲ್ಲಾಡಳಿತದಿಂದ ಅನುಮೋದನೆ ಪಡೆಯಬೇಕು. ಅನುಮೋದನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

Last Updated : Jun 29, 2020, 01:22 PM IST
ಜುಲೈ 1ರಿಂದ ಚಾರ್ಧಮ್ ಯಾತ್ರೆ ಆರಂಭ, ಆದರೆ...  title=

ಡೆಹ್ರಾಡೂನ್ :  ಚಾರ್ಧಮ್ ಯಾತ್ರೆ (Chardham Yatra)  ಪುನರಾರಂಭಿಸಲು  ಸರ್ಕಾರ ನಿರ್ಧರಿಸಿದೆ. ಕೇದಾರನಾಥ, ಬದ್ರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಪ್ರಯಾಣ ಜುಲೈ 1 ರಿಂದ ಪ್ರಾರಂಭವಾಗಲಿದೆ. ಇದಕ್ಕಾಗಿ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರಸ್ತುತ  ಉತ್ತರಾಖಂಡ (Uttrakhand)  ನಿವಾಸಿಗಳು ಮಾತ್ರ ಈ ಯಾತ್ರೆಗೆ ಸೇರಲು ಅನುಮೋದನೆ ನೀಡಲಾಗಿದೆ. ಅದರಲ್ಲೂ ಸೀಮಿತ ಸಂಖ್ಯೆಯ ಭಕ್ತರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು.

ಉತ್ತರಾಖಂಡ ಚಾರ್ ಧಮ್ ದೇವಸ್ತಾನಂ ಮಂಡಳಿಯ ಸಿಇಒ (ಉತ್ತರಾಖಂಡ ಚಾರ್ಧಂ ದೇವಸ್ತಾನಂ ಮಂಡಳಿ) ಸಿಇಒ ರವಿನಾಥ್ ರಾಮನ್ ಮಾತನಾಡಿ ರಾಜ್ಯದೊಳಗಿನ ಜನರಿಗೆ ಮಾತ್ರ ಅನುಮೋದನೆ ನೀಡಲಾಗುತ್ತಿದೆ.

ಪ್ರಯಾಣಕ್ಕಾಗಿ ಜನರು ಆಯಾ ಧಾಮದ ಜಿಲ್ಲಾಡಳಿತದಿಂದ ಅನುಮೋದನೆ ಪಡೆಯಬೇಕು. ಅನುಮೋದನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ಜಿಲ್ಲಾಡಳಿತ ವೆಬ್‌ಸೈಟ್‌ನಲ್ಲಿ ಮಾಡಬಹುದು. ಸ್ಥಳೀಯ ಆಡಳಿತದಿಂದ ಟ್ರಾವೆಲ್ ಪಾಸ್ ನೀಡಿದ ನಂತರವೇ ಜನರು ಪ್ರಯಾಣಿಸಲು ಸಾಧ್ಯವಾಗುತ್ತದೆ.

ಈವರೆಗೆ ಧಾಮ್, ಉತ್ತರಕಾಶಿ, ರುದ್ರಪ್ರಯಾಗ್, ಚಮೋಲಿಗಳಿಗೆ ಸಂಪರ್ಕ ಹೊಂದಿರುವ ಜಿಲ್ಲೆಗಳ ಸ್ಥಳೀಯ ಜನರಿಗೆ ಮಾತ್ರ ಅನುಮೋದನೆ ನೀಡಲಾಗಿದೆ. ಕಂಟೈನ್‌ಮೆಂಟ್ ವಲಯ, ಕ್ವಾರಂಟೈನ್ (Quarantine) ಕೇಂದ್ರ ಅಥವಾ ಇತರ ರಾಜ್ಯಗಳಲ್ಲಿ ಪ್ರಯಾಣಿಸಲು ಜನರಿಗೆ ಅವಕಾಶವಿರುವುದಿಲ್ಲ.

ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಭೇಟಿಗೆ ಅವಕಾಶ:
ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಭೇಟಿ ನೀಡಲು ಸಮಯವಿರುತ್ತದೆ ಎಂದು ದೇವಸ್ತಾನಂ ನಿರ್ವಹಣಾ ಮಂಡಳಿ ತಿಳಿಸಿದೆ. ದೇವಸ್ಥಾನ ಮಂಡಳಿಯು ದರ್ಶನಕ್ಕಾಗಿ ಉಚಿತ ಟೋಕನ್ ನೀಡಲಾಗುವುದು. ದರ್ಶನಕ್ಕಾಗಿ ಮೊದಲು ಟೋಕನ್ ತೆಗೆದುಕೊಳ್ಳುವುದು ಅಗತ್ಯವಾಗಿರುತ್ತದೆ. ಕೇದಾರನಾಥದಲ್ಲಿ ಒಂದು ಗಂಟೆಯಲ್ಲಿ 80 ಭಕ್ತರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗುತ್ತದೆ.

ಈಗ ಇನ್ನೂ ಸುಲಭವಾಗಲಿದೆ ಚಾರ್ಧಮ್ ಯಾತ್ರೆ

ಬದ್ರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಏಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಮೊದಲ ಹದಿನೈದು ದಿನಗಳಲ್ಲಿ ದರ್ಶನಕ್ಕಾಗಿ ತೆರೆಯಲಾಗುತ್ತದೆ. ಪೂಜಾ-ಅರ್ಚನ ಸುಮಾರು 6 ತಿಂಗಳುಗಳ ನಂತರ ನವೆಂಬರ್ ಎರಡನೇ ವಾರದಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.

ದೇಶ ಮತ್ತು ಪ್ರಪಂಚದಿಂದ ಬರುವ ಭಕ್ತರ ಸಂಖ್ಯೆ ಪ್ರತಿವರ್ಷ ಇಲ್ಲಿ ನಿರಂತರವಾಗಿ ಹೆಚ್ಚುತ್ತಿದೆ. ಈ ಧಾಮಗಳಲ್ಲಿ ಉತ್ತಮ ರಸ್ತೆ ಸಂಪರ್ಕದಿಂದಾಗಿ, ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ. 

Trending News