ಕಾನ್ಪುರ ಹಿಂಸಾಚಾರ: ಜೀ ನ್ಯೂಸ್‌ಗೆ ಲಭಿಸಿದೆ Exclusive ಸಿಸಿಟಿವಿ ಫೂಟೇಜ್‌

ಕಾನ್ಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಫೂಟೇಜ್‌ಗಳನ್ನು ಕಲೆ ಹಾಕುತ್ತಿರುವ ಪೊಲೀಸರಿಗೆ ಶುಕ್ರವಾರದ ಪ್ರಾರ್ಥನೆಯ ನಂತರ ಬೆಳಕಿಗೆ ಬಂದ ಸಂಪೂರ್ಣ ಘಟನೆಯನ್ನು ಕಲೆ ಹಾಕಿದ್ದಾರೆ. ಈ ಮಧ್ಯೆ ಸದ್ಯ ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ತನಿಖೆಯನ್ನು ಮುಂದುವರಿಸಲಾಗಿದೆ.   

Written by - Bhavishya Shetty | Last Updated : Jun 4, 2022, 12:09 PM IST
  • ಕಾನ್ಪುರ ಹಿಂಸಾಚಾರದ ಹೊಸ ಸಿಸಿಟಿವಿ ವಿಡಿಯೋ ಲಭ್ಯ
  • ಜೀ ನ್ಯೂಸ್‌ಗೆ ಲಭಿಸಿದೆ ಸಿಸಿಟಿವಿ ಫೂಟೇಜ್‌
  • ಹಿಂಸಾಚಾರ ಸಂಬಂಧ ಸಿಎಂ ಯೋಗಿ ಹೇಳಿದ್ದೇನು?
ಕಾನ್ಪುರ ಹಿಂಸಾಚಾರ: ಜೀ ನ್ಯೂಸ್‌ಗೆ ಲಭಿಸಿದೆ Exclusive ಸಿಸಿಟಿವಿ ಫೂಟೇಜ್‌ title=
Kanpur Violence

ಕಾನ್ಪುರದ ಬೇಕೆಂಗಂಜ್ ಪ್ರದೇಶದಲ್ಲಿ ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್‌ಗಳು ಹೊರಬಿದ್ದಿವೆ. ಈ ವಿಡಿಯೋಗಳು ಜೀ ನ್ಯೂಸ್‌ಗೆ ಲಭಿಸಿದ್ದು, ದೃಶ್ಯಾವಳಿಯಲ್ಲಿ ದುಷ್ಕರ್ಮಿಗಳ ಚಲನವಲನಗಳು ಸ್ಪಷ್ಟವಾಗಿ ಸೆರೆಯಾಗಿದೆ. ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೆ ಬಾಂಬ್‌ಗಳನ್ನು ಸಹ ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ, ಅಂಗಡಿಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಗೊಳಿಸಿದ್ದಾರೆ. ಇನ್ನು ಅಂಗಡಿಗಳ ಹೊರಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಹಿಂಸಾಚಾರದ ಹೊಸ ಸಿಸಿಟಿವಿ ವಿಡಿಯೋ: 
ಕಾನ್ಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಫೂಟೇಜ್‌ಗಳನ್ನು ಕಲೆ ಹಾಕುತ್ತಿರುವ ಪೊಲೀಸರಿಗೆ ಶುಕ್ರವಾರದ ಪ್ರಾರ್ಥನೆಯ ನಂತರ ಬೆಳಕಿಗೆ ಬಂದ ಸಂಪೂರ್ಣ ಘಟನೆಯನ್ನು ಕಲೆ ಹಾಕಿದ್ದಾರೆ. ಈ ಮಧ್ಯೆ ಸದ್ಯ ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ತನಿಖೆಯನ್ನು ಮುಂದುವರಿಸಲಾಗಿದೆ. 

 

 

ಇದನ್ನು ಓದಿ: ಬೇಸಿಗೆಯಲ್ಲಿ ಹಾಗಲಕಾಯಿ ತಿನ್ನೋದು ಎಷ್ಟು ಉತ್ತಮ!

ಕಾನ್ಪುರದಲ್ಲಿ ನಿನ್ನೆ ಏನಾಯಿತು?
ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರದ ಪ್ರಾರ್ಥನೆ ಮುಗಿದ ಕೂಡಲೇ ಪರೇಡ್, ನೈಸಡಕ್ ಮತ್ತು ಯತಿಮ್ಖಾನಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪ್ರಾರ್ಥನೆಯ ನಂತರ ಎರಡು ಸಮುದಾಯಗಳ ಜನರು ಮುಖಾಮುಖಿಯಾಗಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿಂಸಾಚಾರದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಯೋಗಿ ಆದಿತ್ಯನಾಥ್‌ ಸೂಚನೆ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲೂ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಸರ್ಕಾರ ಹೇಳಿದೆ. 

ಇದನ್ನು ಓದಿ: Weight Loss: ಐಸ್ ಕ್ರೀಂ-ಸಿಹಿ ತಿಂದು ತೂಕ ಇಳಿಕೆ ಮಾಡಿಕೊಂಡ ಮಹಿಳೆ!

ಕಾನ್ಪುರದ ಗಲಭೆಯ ನಂತರ ಪೊಲೀಸರು ಇಂದು ಯತೀಂಖಾನಾ ಪ್ರದೇಶದಲ್ಲಿ ರೂಟ್ ಮಾರ್ಚ್ ನಡೆಸಿದ್ದಾರೆ. ಜಾಫರ್ ಹಯಾತ್ ಎಂಬ ವ್ಯಕ್ತಿ ಹಿಂಸಾಚಾರದ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಜಾಫರ್ ಹಯಾತ್ ಆಪ್ತ ಸ್ನೇಹಿತರ ಮನೆಗಳ ಮೇಲೂ ದಾಳಿ ನಡೆಸಿ ತನಿಖೆ ನಡೆಸಲಾಗುತ್ತಿದೆ. ಗಲಭೆಗೂ ಮುನ್ನ ಹಯಾತ್ ಜಾಫರ್ ಹಶ್ಮಿ ಕೆಲವು ಧರ್ಮಗುರುಗಳೊಂದಿಗೆ ಸಭೆ ನಡೆಸಿದ್ದ ಎಂದು ತಿಳಿದುಬಂದಿದೆ. ಆ ಸಂಬಂಧ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News