ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರ ದೌರ್ಜನ್ಯ: ದೂರು ತೆಗೆದುಕೊಳ್ಳುತ್ತಿಲ್ಲ ಎಂದು ಮಹಿಳೆ ಕಣ್ಣೀರು !

ರಾತ್ರೋರಾತ್ರಿ ಮನೆಗೆ ನುಗ್ಗಿ ಗೂಂಡಾಗಿರಿ ಮಾಡಿರುವುದಲ್ಲದೇ ತನ್ನನ್ನೇ ಮನೆಯಿಂದ ಹೊರಹಾಕಿ ಮನೆಗೆ ಬೀಗ ಹಾಕಲಾಗಿದೆ ಎಂದು ಸೋನಾಂ ಮಿಶ್ರಾ ಎಂಬವರು ಆರೋಪಿಸಿದ್ದಾರೆ. 

Written by - VISHWANATH HARIHARA | Edited by - Ranjitha R K | Last Updated : Dec 20, 2022, 04:01 PM IST
  • ರಾತ್ರೋರಾತ್ರಿ ಮನೆಗೆ ನುಗ್ಗಿ ಗೂಂಡಾಗಿರಿ ಮಹಿಳೆ ಆರೋಪ
  • ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರ ವಿರುದ್ಧ ಆರೋಪ
  • ಠಾಣೆಯಲ್ಲಿಯೂ ದೂರು ತೆಗೆದುಕೊಳ್ಳದ ಆರೋಪ
 ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರ ದೌರ್ಜನ್ಯ: ದೂರು ತೆಗೆದುಕೊಳ್ಳುತ್ತಿಲ್ಲ ಎಂದು ಮಹಿಳೆ ಕಣ್ಣೀರು ! title=

ಬೆಂಗಳೂರು : ಒಂಟಿ ಮಹಿಳೆಯ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ದೌರ್ಜನ್ಯ ಎಸಗಿರುವ ಆರೋಪ ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರ ವಿರುದ್ಧ ಕೇಳಿ ಬಂದಿದೆ. ರಾತ್ರೋರಾತ್ರಿ ಮನೆಗೆ ನುಗ್ಗಿ ಗೂಂಡಾಗಿರಿ ಮಾಡಿರುವುದಲ್ಲದೇ ತನ್ನನ್ನೇ ಮನೆಯಿಂದ ಹೊರಹಾಕಿ ಮನೆಗೆ ಬೀಗ ಹಾಕಲಾಗಿದೆ ಎಂದು ಸೋನಾಂ ಮಿಶ್ರಾ ಎಂಬವರು ಆರೋಪಿಸಿದ್ದಾರೆ. 

ರಾತ್ರೋರಾತ್ರಿ ಮನೆಗೆ ನುಗ್ಗಿ ತಮ್ಮ ಮನೆಯೋನದ ಹೊರ ಹಾಕಲಾಗಿದೆ ಎಂದು ಆರೋಪಿಸಿ , ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರ ವಿರುದ್ಧ ಆರೋಪ ಮಾಡಿರುವ ಮಹಿಳೆ ಸೋನಾಂ ಮಿಶ್ರಾ ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ಬಂದು ಮಾಧ್ಯಮಗಳ‌ ಮುಂದೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ : ವೀರಪ್ಪನ್ ಮುಖ್ಯ ಸಹಚರ ಜ್ಞಾನಪ್ರಕಾಶ್ ರಿಲೀಸ್‌ : ಮಾನವೀಯತೆ ಆಧಾರದಲ್ಲಿ ಜಾಮೀನು..! 

ತಡರಾತ್ರಿ ರಿಚರ್ಡ್ಸ್ ಪಾರ್ಕ್ ಬಳಿಯಿರುವ ಹರ್ಮನ್ ರಿಗಾಲಿಯಾ ಅಪಾರ್ಟ್‌ಮೆಂಟಿನಲ್ಲಿರುವ ಮನೆಗೆ ನುಗ್ಗಿರುವ ಐದಾರು ಜನ ಯುವಕರು, ಏಕಾಏಕಿ ಮನೆಯಲ್ಲಿದ್ದ  ಸೋನಂ ಮಿಶ್ರಾರನ್ನ ಹೊರಕಳುಹಿಸಿ  ಮನೆಗೆ ಬೀಗ ಹಾಕಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿರುವ ಚಿನ್ನಾಭರಣ, ಹಣ ದೋಚಲಾಗಿದ್ದು, ರಾತ್ರಿಯಿಡೀ ತಾನು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿದ್ದಾರೆ. 

ಪುಲಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದರೂ ದೂರು ದಾಖಲಿಸಿಕೊಳ್ಳುತ್ತಿಲ್ಲ ಎನ್ನುವುದು ಮಹಿಳೆಯ ಆಪಾದನೆ. ಇನ್ಸ್‌ಪೆಕ್ಟರ್ ಕಿರಣ್ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಸೋನಂ ಮಿಶ್ರಾ ಆರೋಪಿಸಿದ್ದಾರೆ.

ಇದನ್ನೂ ಓದಿ : ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಸಂಪರ್ಕದಲ್ಲಿದ್ದೇನೆ; ಸಿಎಂ ಬೊಮ್ಮಾಯಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News