ಒಂದೇ ಹುಡುಗಿ ಮೇಲೆ ಇಬ್ಬರಿಗೆ ಲವ್: ಎಣ್ಣೆ ಏಟಲ್ಲಿ ಸ್ನೇಹಿತನನ್ನೇ ಕೊಂದ ಪಾಪಿ..!

ಆಗಾಗ ಇಬ್ಬರ ನಡುವೆ ಗಲಾಟೆಯಾಗುತಿತ್ತು. ಅಂತೆಯೇ ಮೊನ್ನೆ ಮದ್ಯ ಸೇವಿಸಿ ಇಬ್ಬರು ಮನೆಯಲ್ಲಿರುವಾಗ ಹುಡುಗಿಯ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಮಾತಿನ ಚಕಮಕಿ ಶುರುವಾಗಿದೆ‌.‌ ‌ನಶೆಯಲ್ಲಿದ್ದ ಗೌತಮ್, ಸನುನನ್ನ‌ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ.

Written by - VISHWANATH HARIHARA | Last Updated : Apr 26, 2023, 01:10 PM IST
  • ಅಸ್ಸಾಂ ಮೂಲದ ಇಬ್ಬರು ಸ್ನೇಹಿತರು ಕಳೆದ ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು.
  • ಹುಳಿಮಾವಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.
  • ಮೃತ ಸನು ಉರಂಗ್ ಅರಕೆರೆ ಬಳಿ ಗುರುಗಾರ್ಡನ್ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ.‌
ಒಂದೇ ಹುಡುಗಿ ಮೇಲೆ ಇಬ್ಬರಿಗೆ ಲವ್: ಎಣ್ಣೆ ಏಟಲ್ಲಿ ಸ್ನೇಹಿತನನ್ನೇ ಕೊಂದ ಪಾಪಿ..! title=

ಬೆಂಗಳೂರು: ಒಂದೇ ಹುಡುಗಿಯನ್ನ ಪ್ರೀತಿಸುತ್ತಿದ್ದ ಇಬ್ಬರ ನಡುವೆ ಜಗಳವಾಗಿ ಸ್ನೇಹಿತನನ್ನೇ ಯುವಕನೊಬ್ಬ ಕೊಂದು ಮುಗಿಸಿದ್ದಾನೆ.  ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಮೊನ್ನೆ ರಾತ್ರಿ ಘಟನೆ ನಡೆದಿದೆ. ಸ್ನೇಹಿತನನ್ನ ಕುತ್ತಿಗೆ ಬಿಗಿದು ಹತ್ಯೆ ಮಾಡಿ ಕಟ್ಟಡದಿಂದ ತಳ್ಳಿ ಸಹಜ ಸಾವು ಎಂದು ಬಿಂಬಿಸಲು ಹೋಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ‌.

ಸನು ಉರಂಗ್ ಎಂಬಾತನನ್ನು  ಕೊಲೆಗೈದ ಆರೋಪದಡಿ ಗೌತಮ್ ತಟಿ (26) ಎಂಬುವನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ‌.  ಅಸ್ಸಾಂ ಮೂಲದ ಇಬ್ಬರು ಸ್ನೇಹಿತರು ಕಳೆದ ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಹುಳಿಮಾವಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಮೃತ ಸನು ಉರಂಗ್ ಅರಕೆರೆ ಬಳಿ ಗುರುಗಾರ್ಡನ್ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ.‌ ಆರೋಪಿ ಗೌತಮ್ ಅದೇ ಏರಿಯಾದಲ್ಲಿ ಬೇರೊಂದು ಹೊಟೇಲ್ ನಲ್ಲಿ ಕೆಲಸ‌ ಮಾಡುತ್ತಿದ್ದ. ಆದರೆ ಇವರಿಬ್ಬರೂ ಅಸ್ಸಾಂನಲ್ಲಿ ಒಂದೇ ಹುಡುಗಿಯನ್ನು ಇಬ್ಬರು ಪ್ರೀತಿಸುತ್ತಿದ್ದರು. 

ಇದನ್ನೂ ಓದಿ- Crime News: ರ್ಯಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ: ಚಲಿಸುತ್ತಿದ್ದ ಬೈಕ್’ನಿಂದ ಜಿಗಿದು ಗಾಯ

ಇದೇ ವಿಚಾರಕ್ಕೆ ಆಗಾಗ ಇಬ್ಬರ ನಡುವೆ ಗಲಾಟೆಯಾಗುತಿತ್ತು. ಅಂತೆಯೇ ಮೊನ್ನೆ ಮದ್ಯ ಸೇವಿಸಿ ಇಬ್ಬರು ಮನೆಯಲ್ಲಿರುವಾಗ ಹುಡುಗಿಯ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಮಾತಿನ ಚಕಮಕಿ ಶುರುವಾಗಿದೆ‌.‌ ‌ನಶೆಯಲ್ಲಿದ್ದ ಗೌತಮ್, ಸನುನನ್ನ‌ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ನಂತರ ಆತಂಕಗೊಂಡ ಆರೋಪಿ ಮಧ್ಯರಾತ್ರಿ 2 ಗಂಟೆವರೆಗೂ ಕಾದು ಯಾರು ಇಲ್ಲದ ಸಮಯ ನೋಡಿ  ತನ್ನ ಮನೆಯ ಎರಡನೇ ಮಹಡಿಯಿಂದ ಮೃತದೇಹವನ್ನ ಕೆಳಗೆ ನೂಕಿದ್ದಾನೆ. ಕೊಲೆ ಕೃತ್ಯವನ್ನ ಮರೆಮಾಚಿ ಕಟ್ಟಡದಿಂದ‌ ಕುಡಿದ ನಶೆಯಲ್ಲಿ ಬಿದ್ದು ಸಾವವನ್ನಪ್ಪಿದ್ದಾನೆ ಎಂದು ಬಿಂಬಿಸಲು ಆರೋಪಿ ಮುಂದಾಗಿದ್ದಾನೆ.‌ ಆದರೆ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. 

ಇದನ್ನೂ ಓದಿ- OMG: ಬಾಲಕಿಯ ಕೊರಳಲ್ಲಿದ್ದ ಚಿನ್ನದ ಸರವನ್ನೇ ನುಂಗಿದ ಖದೀಮ

ಆರಂಭದಲ್ಲಿ ಇದು ಆಕಸ್ಮಿಕ ಸಾವು ಎಂದು ಭಾವಿಸಿದ್ದ ಪೊಲೀಸರು ಮೃತದೇಹವನ್ನ‌‌ ಕೂಲಂಕುಶವಾಗಿ ಪರಿಶೀಲಿಸಿದಾಗ ದೇಹದ‌‌‌ ಮೇಲೆ ಪರಚಿರುವ ಗುರುತು ಪತ್ತೆಯಾಗಿತ್ತು‌. ಎಫ್ ಎಸ್ ಎಲ್ ತಂಡ ಸಹ ಸ್ಥಳಕ್ಕೆ ಬಂದು ತಪಾಸಣೆ ನಡೆಸಿತ್ತು. ಆರೋಪಿ ಗೌತಮ್‌ನನ್ನ ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ನಾನೇ ಕೊಂದಿದ್ದು ಅಂತಾ ಒಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗೌತಮ್ ನನ್ನ ಬಂಧಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News