ವಿವಾಹಿತೆ ಜೊತೆ ಪೊಲೀಸಪ್ಪನ ಲವ್ವಿಡವ್ವಿ, ಮದುವೆಗೆ ಪಟ್ಟು ಹಿಡಿದಿದ್ದೇ ತಡ ಕಾನ್ಸ್‌ಟೇಬಲ್ ಪರಾರಿ

ವಿವಾಹಿತ ಮಹಿಳೆ ಜೊತೆ ಒಂದು ವರ್ಷ ಪ್ರೀತಿ, ಪ್ರೇಮ ಅಂತ ಸುತ್ತಾಡಿ, ಮದುವೆಗೆ ಪಟ್ಟು ಹಿಡಿದ ತಕ್ಷಣ ಕಾನ್ಸ್‌ಟೇಬಲ್ ತಲೆ ಮರೆಸಿಕೊಂಡಿರುವ ಘಟನೆ ಯಳ‌ಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ನಡೆದಿದೆ. 

Written by - Zee Kannada News Desk | Last Updated : Jun 28, 2022, 01:02 PM IST
  • ವಿವಾಹಿತೆ ಜೊತೆ ಪೊಲೀಸಪ್ಪನ ಲವ್ವಿಡವ್ವಿ
  • ಮದುವೆಗೆ ಪಟ್ಟು ಹಿಡಿದಿದ್ದೇ ತಡ ಕಾನ್ಸ್‌ಟೇಬಲ್ ಪರಾರಿ
  • ಯಳ‌ಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಘಟನೆ
ವಿವಾಹಿತೆ ಜೊತೆ ಪೊಲೀಸಪ್ಪನ ಲವ್ವಿಡವ್ವಿ, ಮದುವೆಗೆ ಪಟ್ಟು ಹಿಡಿದಿದ್ದೇ ತಡ ಕಾನ್ಸ್‌ಟೇಬಲ್ ಪರಾರಿ title=
ಕಾನ್ಸ್‌ಟೇಬಲ್ ಪರಾರಿ

ಚಾಮರಾಜನಗರ: ವಿವಾಹಿತ ಮಹಿಳೆ ಜೊತೆ ಒಂದು ವರ್ಷ ಪ್ರೀತಿ, ಪ್ರೇಮ ಅಂತ ಸುತ್ತಾಡಿ, ಮದುವೆಗೆ ಪಟ್ಟು ಹಿಡಿದ ತಕ್ಷಣ ಕಾನ್ಸ್‌ಟೇಬಲ್ ತಲೆ ಮರೆಸಿಕೊಂಡಿರುವ ಘಟನೆ ಯಳ‌ಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ನಡೆದಿದೆ. 

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೂನ್ 27 ರಿಂದ 29 ರವರೆಗೆ ವಿದ್ಯುತ್ ಕಡಿತ.. ಎಲ್ಲೆಲ್ಲಿ? ಇಲ್ಲಿ ನೋಡಿ

ಚಾಮರಾಜನಗರ ಪಟ್ಟಣ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಶಂಕರ್ ಎಂಬವರ ವಿರುದ್ಧ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 27 ವರ್ಷದ ವಿವಾಹಿತೆ ದೂರು ನೀಡಿದ್ದು, ತನ್ನ ಜೊತೆ ಸುತ್ತಾಡಿ ಈಗ ಮದುವೆ ಆಗು ಎಂದಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದು ತನಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡಿದ್ದಾರೆ. 

ಏನಿದು ಲವ್ ಕಹಾನಿ?

ವಿವಾಹಿತೆಗೆ ಈಗಾಗಲೇ ಎರಡು ಮಕ್ಕಳಿದ್ದು ಕೌಟಂಬಿಕ ಕಲಹದಿಂದಾಗಿ ತವರು ಮನೆಗೆ ವಾಪಾಸಾಗಿದ್ದಳು. ಈ ಸಮಯದಲ್ಲಿ ಕಾನ್ಸ್‌ಟೇಬಲ್ ಶಂಕರ್ ಹಳೇ ಪರಿಚಯ ಪ್ರೇಮವಾಗಿ ತಿರುಗಿಕೊಂಡಿದೆ. ಬಳಿಕ, ಕಳೆದ 1 ವರ್ಷದಿಂದ ಆಕೆಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದು, ಮದುವೆ ಆಗು ಎಂದಿದ್ದಕ್ಕೆ ಕಾನ್ಸ್‌ಟೇಬಲ್ ಒಲ್ಲೆ ಎಂದಿದ್ದಾರೆ ಎಂದು ಆರೋಪಿಸಲಾಗಿದೆ. 

ಇದನ್ನೂ ಓದಿ: ತಿದ್ದುಪಡಿ ಮಾಡಿ ಹೊಸ ಪಠ್ಯಪುಸ್ತಕ ಮುದ್ರಿಸಲು ಶಿಕ್ಷಣ ಇಲಾಖೆ ತೀರ್ಮಾನ

ಈ ಸಂಬಂಧ ಪಂಚಾಯ್ತಿ, ಹಿರಿಯರ ನಡುವೆ ಮಾತುಕತೆಯೂ ಆಗಿದ್ದು ಮದುವೆಗೆ ಕಾನ್ಸ್‌ಟೇಬಲ್ ಒಪ್ಪಿಲ್ಲ ಎಂದು ಹೇಳಲಾಗಿದೆ. ಕೊನೆಗೆ, ನ್ಯಾಯಕ್ಕಾಗಿ ವಿವಾಹಿತೆ ಯಳಂದೂರು ಠಾಣೆಗೆ ದೂರು ಕೊಟ್ಟಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಶಂಕರ್ ಪರಾರಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News