MP Renukacharya : ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರನ ಶವ ಪತ್ತೆ!

ಹೊನ್ನಾಳಿ ಮತ್ತು ನ್ಯಾಮತಿ ಮಧ್ಯದಲ್ಲಿರುವ ಭದ್ರಾ ಕಾಲುವೆಯಲ್ಲಿ‌ ಕಾರು ಪತ್ತೆಯಾಗಿದೆ. ಅದ್ರಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ. 

Written by - Zee Kannada News Desk | Last Updated : Nov 3, 2022, 05:31 PM IST
  • ಶಾಸಕ ಎಂಪಿ ರೇಣುಕಾಚಾರ್ಯ
  • ಸಹೋದರನ ಪುತ್ರ ಚಂದ್ರಶೇಖರ ನಾಪತ್ತೆ ಪ್ರಕರಣ
  • ಭದ್ರಾ ಕಾಲುವೆಯಲ್ಲಿ‌ ಕಾರು ಪತ್ತೆಯಾಗಿದೆ
MP Renukacharya : ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರನ ಶವ ಪತ್ತೆ! title=

ದಾವಣಗೆರೆ : ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ ನಾಪತ್ತೆ ಪ್ರಕರಣಕ್ಕೆ ಸಂಭಂದಿಸಿದಂತೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಹೊನ್ನಾಳಿ ಮತ್ತು ನ್ಯಾಮತಿ ಮಧ್ಯದಲ್ಲಿರುವ ಭದ್ರಾ ಕಾಲುವೆಯಲ್ಲಿ‌ ಕಾರು ಪತ್ತೆಯಾಗಿದೆ. ಅದ್ರಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ. 

ಭದ್ರಾ ನಾಲೆ ಬಳಿ ಚಂದ್ರು ಕಾರಿನ ಅವಶೇಷಗಳು ಪತ್ತೆಯಾಗಿದ್ದವು. ಇದರ ಅನುಮಾನದಿಂದ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರ ದೌಡಾಯಿಸಿ, ನೀರಿನಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿ ನಾಲೆಯಿಂದ ಕಾರು ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ಹೊರತೆಗೆದ ಕಾರಿನ ಹಿಂಭಾಗದ ಸೀಟಿನಲ್ಲಿ ಚಂದ್ರು ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ರೆ, ಪೊಲೀಸರು ಇನ್ನೂ ಯಾವುದು ನಿಖರ ಮಾಹಿತಿ ನೀಡಿಲ್ಲ. 

ಅಣ್ಣನ ಮಗನನ್ನು ಕಳೆದುಕೊಂಡ ನೋವಿನಲ್ಲಿರುವ ರೇಣುಕಾಚಾರ್ಯ ಅವರು ಕಣ್ಣೀರು ಹಾಕುತ್ತ ಚಂದ್ರು ಚಂದ್ರು ಎಂದು ಗೋಳಾಡುತ್ತಿದ್ದಾರೆ.  ಕಳೆದ ಭಾನುವಾರದಿಂದ ನಾಪತ್ತೆಯಾಗಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News