ಎಣ್ಣೆ ಏಟಲ್ಲಿ ಹಿಟ್ ಅಂಡ್ ರನ್: ತಂದೆ ಮಗನ ಪ್ರಾಣ ತೆಗೆದ ಪಾಪಿಗಳು, ಮತ್ತೊಬ್ಬ ಗಂಭೀರ

ನಿನ್ನೆ ಪಬ್ ವೊಂದರಲ್ಲಿ ಪಾರ್ಟಿ ಮಾಡಿದ್ದ ನಾಲ್ವರು ಯುವಕರ ತಂಡ ಪಾರ್ಟಿ ಮುಗಿಸಿಕೊಂಡು ಕುಡಿದ ಮತ್ತಿನಲ್ಲಿ ಕಾರು ಓಡಿಸಿದ್ದಾರೆ.. ನ್ಯೂ ಬಿಇಎಲ್ ರಸ್ತೆ ಮೇಲೆ ಅತಿ ವೇಗವಾಗಿ ಹೋಗ್ತಿದ್ದ ಕಾರು ರಸ್ತೆ ಬದಿ ಕೆಲಸ ಮುಗಿಸಿಕೊಂಡು ಹೋಗ್ತಿದ್ದ ವ್ಯಕ್ತಿಗೆ ಮೊದಲು ಡಿಕ್ಕಿ ಹೊಡೆದಿದೆ.. 

Written by - VISHWANATH HARIHARA | Edited by - Yashaswini V | Last Updated : Aug 7, 2023, 02:35 PM IST
  • ಈ ವೀಕೆಂಡ್ ಬಂದ್ರೆ ಸಾಕು ಶ್ರೀಮಂತರ ಮನೆಯವ್ರ ಯುವಕರ ಆಟ ಹೆಚ್ಚು ಇರುತ್ತೆ..

    ಪಾರ್ಟಿ ಮುಗಿಸ್ಕೊಂಡು ಹೋಗೋವಾಗ ಬೆಂಗಳೂರಲ್ಲಿ ಒಂದಲ್ಲಾ ಒಂದು ಘಟನೆ ನಡೆಯುತ್ವೆ..
  • ನಿನ್ನೆ ಹೀಗೆ ಪಾರ್ಟಿ ಮುಗಿಸಿ ಜಾಲಿ ರೈಡ್ ಹೋಗಿದ್ದ ನಾಲ್ವರ ತಂಡ ಎರಡು ಜೀವವನ್ನ ತೆಗೆದಿದೆ..
ಎಣ್ಣೆ ಏಟಲ್ಲಿ ಹಿಟ್ ಅಂಡ್ ರನ್: ತಂದೆ ಮಗನ ಪ್ರಾಣ ತೆಗೆದ ಪಾಪಿಗಳು, ಮತ್ತೊಬ್ಬ ಗಂಭೀರ title=

ಬೆಂಗಳೂರು: ವೀಕೆಂಡ್ ಬಂತು ಅಂದ್ರೆ ಸಾಕು ಕೆಲ ಯುವ ಸಮೂಹ ಕುಡಿದು ಕುಪ್ಪಳಿಸೋದು ಕಾಮನ್. ಮಧ್ಯ ರಾತ್ರಿ ಕುಡಿದ ಅಮಲಿನಲ್ಲಿ ಓಡಾಡೋದ್ ಮಾಡ್ತಾರೆ.. ಆದರೆ ಮತ್ತಿನಲ್ಲಿ ಮತ್ತೊಬ್ಬರ ಜೀವ ತೆಗೀತಾರೆ.. ನಿನ್ನೆ ಸದಾಶಿವನಗರ ಲಿಮಿಟ್ಸ್ ನಲ್ಲಿ ಆಗಿರೋದು ಅದೆ.. ಕುಡಿದ ಮತ್ತಿನಲ್ಲಿ ಕಾರು ಓಡಿಸ್ತಿದ್ದವರು ಎರಡು ಜೀವ ತೆಗೆದು ಎಸ್ಕೇಪ್ ಆಗಿದ್ದಾರೆ. 

ಹೌದು, ಈ ವೀಕೆಂಡ್ ಬಂದ್ರೆ ಸಾಕು ಶ್ರೀಮಂತರ ಮನೆಯವ್ರ ಯುವಕರ ಆಟ ಹೆಚ್ಚು ಇರುತ್ತೆ.. ಪಾರ್ಟಿ  ಮುಗಿಸ್ಕೊಂಡು ಹೋಗೋವಾಗ ಬೆಂಗಳೂರಲ್ಲಿ ಒಂದಲ್ಲಾ ಒಂದು ಘಟನೆ ನಡೆಯುತ್ವೆ.. ನಿನ್ನೆ ಹೀಗೆ ಪಾರ್ಟಿ ಮುಗಿಸಿ ಜಾಲಿ ರೈಡ್ ಹೋಗಿದ್ದ ನಾಲ್ವರ ತಂಡ ಎರಡು ಜೀವವನ್ನ ತೆಗೆದಿದೆ.. ನಿನ್ನೆ ರಾತ್ರಿ ಹನ್ನೊಂದುವರೆ ಸುಮಾರಿಗೆ ಸದಾಶಿವನಗರ ಸಂಚಾರಿ ಠಾಣಾ ವ್ಯಾಪ್ತಿಯ ಇಸ್ರೋ ಸರ್ಕ್ ಬಳಿ ಹಿಟ್ ಆ್ಯಂಡ್ ರನ್ ಆಗಿದೆ.. ಕುಡಿದ ಮತ್ತಿನಲ್ಲಿ ಹಿಟ್ ಆ್ಯಂಡ್ ರನ್ ಗೆ ತಂದೆ ಮಗ ಸಾವನ್ನಪ್ಪಿದ್ರೆ ಅದೇ ಕುಟುಂಬದ ಸದಸ್ಯ ವಾಸು ಜೀವ ಮರಣದ ಮಧ್ಯೆ ಹೋರಾಡ್ತಿದ್ದಾನೆ. 

ಇದನ್ನೂ ಓದಿ- ಒಂದೇ ಹುಡುಗಿ‌ ಹಿಂದೆ ಬಿದ್ದ ಸ್ನೇಹಿತರು: ಒಬ್ಬನ ಕೊಲೆಯಲ್ಲಿ ಅಂತ್ಯವಾದ ಲವ್ ಸ್ಟೋರಿ

ನಿನ್ನೆ ಪಬ್ ವೊಂದರಲ್ಲಿ ಪಾರ್ಟಿ ಮಾಡಿದ್ದ ನಾಲ್ವರು ಯುವಕರ ತಂಡ ಪಾರ್ಟಿ ಮುಗಿಸಿಕೊಂಡು ಕುಡಿದ ಮತ್ತಿನಲ್ಲಿ ಕಾರು ಓಡಿಸಿದ್ದಾರೆ.. ನ್ಯೂ ಬಿಇಎಲ್ ರಸ್ತೆ ಮೇಲೆ ಅತಿ ವೇಗವಾಗಿ ಹೋಗ್ತಿದ್ದ ಕಾರು ರಸ್ತೆ ಬದಿ ಕೆಲಸ ಮುಗಿಸಿಕೊಂಡು ಹೋಗ್ತಿದ್ದ ವ್ಯಕ್ತಿಗೆ ಮೊದಲು ಡಿಕ್ಕಿ ಹೊಡೆದಿದೆ.. ನಂತರ ಡಿಯೋ ಸ್ಕೂಟರ್ ನಲ್ಲಿ ಹೋಗ್ತಿದ್ದ ತಂದೆ ರಘು ಮತ್ತು ಮಗ ಚಿರಂಜೀವಿಗೆ ಡಿಕ್ಕಿ ಹೊಡೆದಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.. ಇನ್ನು ಇವರ ಸಂಬಂಧಿಕ ವಾಸುಗೆ ಗಂಭೀರ ಗಾಯಗಳಾಗಿದ್ದು ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 

ಇದನ್ನೂ ಓದಿ- ವೀಕೆಂಡ್ ಮಸ್ತಿ, ಎಣ್ಣೆ ಏಟು: ಸಿಲಿಕಾನ್ ಸಿಟಿಯಲ್ಲಿ 2 ಅಪಘಾತ, ಯುವತಿಯರ ರಂಪಾಟ

ಆ್ಯಕ್ಸಿಡೆಂಟ್ ಆಗ್ತಿದ್ದಂತೆಯೇ ಅಲ್ಲಿನ ಸ್ಥಳೀಯರು ಸುತ್ತುವರೆದಿದ್ದಾರೆ.. ಆ್ಯಕ್ಸಿಡೆಂಟ್ ನಲ್ಲಿ ಜೀವ ಹೋಗ್ತಿದ್ದ ಅಪ್ಪ ಮಗನನ್ನ ಕಾಪಾಡಲು ಯತ್ನಿಸಿದ್ದಾರೆ.. ಅತ್ತ ಆ್ಯಕ್ಸಿಡೆಂಟ್ ಮಾಡಿ ಮೂವರು ಎಸ್ಕೇಪ್ ಆಗಿದ್ದು, ಅದೇ ಕಾರಿನಲ್ಲಿದ್ದ ಆಕಾಶ್ ಎಂಬುವನನ್ನ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.. ಆತ ಮಾಗಡಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನೋರ್ವರ ಮಗ ಅಂತಾ ಹೇಳಲಾಗ್ತಿದ್ದು, ಕುಡಿದ ಮತ್ತಿನಲ್ಲಿ ಕಾರು ಓಡಿಸಿರೋದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡಿರೋ ಸದಾಶಿವನಗರ ಸಂಚಾರಿ ಪೊಲೀಸರು ಆಕಾಶ್ ನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಎಸ್ಕೇಪ್ ಆಗಿರೋ ನಾಲ್ವರ ಪತ್ತೆಗೆ ಹುಡುಕಾಟ ನಡೆಸಲಾಗ್ತಿದೆ..  ಏನೇ ಹೇಳಿ ಈ ಯುವಕರ ಮೋಜು ಮಸ್ತಿಗೆ ಇಬ್ಬರ ಜೀವ ಹೋಗಿದ್ದು ಮಾತ್ರ ದುರಂತ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News