ಸಿಲಿಕಾನ್ ಸಿಟಯಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು..!

Crime News: ಅದು ಸರಿಸುಮಾರಿ ರಾತ್ರಿ 9:30 ರ ಸಮಯ.. ನಗರದ ಗಾಯಿತ್ರಿ ನಗರದ ಏಳನೇ ಕ್ರಾಸ್ ನಲ್ಲಿ ಜನ ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿದ್ರು.. ಈ ವೇಳೆ ಅಲ್ಲಿಗೆ ಬಂದ ನೀಲಿ ಬಣ್ಣದ ಐಟ್ವೆಟಿ ಕಾರ್ ಒಂದು ಕ್ಷಣ ಎಲ್ಲರನ್ನೂ ಭಯಭೀತರನ್ನಾಗಿ ಮಾಡಿತ್ತು.. 

Written by - Yashaswini V | Last Updated : Jun 27, 2023, 09:42 AM IST
  • ನಶೆಯಲ್ಲಿ ಕಾರ್ ಅಡ್ಡಾದಿಡ್ಡಿ ಡ್ರೈವ್.. 25ಕ್ಕೂ ಅಧಿಕ ವಾಹನ ಜಖಂ..!
  • ಕಾರ್ ನಲ್ಲಿ ಬಂದ ಈ ಇಬ್ಬರು ಯುವಕರಿಂದ ಪುಂಡಾಟ
  • ಬೇಕಾ ಬಿಟ್ಟಿ ಡ್ರೈವ್ ಮಾಡಿ ಗಾಡಿಗಳ ಜಖಂ ಮಾಡಿದ ಪುಂಡರಿಗೆ ಧರ್ಮದೇಟು
ಸಿಲಿಕಾನ್ ಸಿಟಯಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು..! title=

Bengaluru Crime News: ರಾತ್ರಿ ಸಮಯ.. ಊಟ ಮುಗಿಸಿದ ಏರಿಯಾ ಜನ ಹೊರಗಡೆ ವಾಕಿಂಗ್ ಗೆ ಅಂತ ಬಂದಿದ್ರು.. ಇತ್ತ ಅಂಗಡಿಗಳ ಮಾಲೀಕರು ಅಂಗಡಿ ಬಾಗಿಲು ಮುಚ್ಚಿ ಮನೆ ಕಡೆ ಹೊಗೊ ತಯಾರಿಯಲ್ಲಿದ್ರು.. ಆದ್ರೆ ಈ ವೇಳೆ ಏರಿಯಾಗೆ ಎಂಟ್ರಿ ಕೊಟ್ಟ ಕಾರ್ ಎಲ್ಲರನ್ನೂ ಒಂದು ಕ್ಷಣ ದಂಗು ಬಡಿಸಿತ್ತು..

ಸಿಲಿಕಾನ್ ಸಿಟಯಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು: 
ಹೌದು, ಅದು ಸರಿಸುಮಾರಿ ರಾತ್ರಿ 9:30 ರ ಸಮಯ.. ನಗರದ ಗಾಯಿತ್ರಿ ನಗರದ ಏಳನೇ ಕ್ರಾಸ್ ನಲ್ಲಿ ಜನ ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿದ್ರು.. ಈ ವೇಳೆ ಅಲ್ಲಿಗೆ ಬಂದ ನೀಲಿ ಬಣ್ಣದ ಐಟ್ವೆಟಿ ಕಾರ್ ಒಂದು ಕ್ಷಣ ಎಲ್ಲರನ್ನೂ ಭಯಭೀತರನ್ನಾಗಿ ಮಾಡಿತ್ತು.. ಎದ್ವಾತದ್ವ ಡ್ರೈವಿಂಗ್ ಮಾಡಿದ ಚಾಲಕ ಸಿಕ್ಕ ಸಿಕ್ಕ ಗಾಡಿಗಳಿಗೆ ಡಿಕ್ಕಿ ಹೊಡೆದು ವಾಹನಗಳ ಜಖಂ ಗೊಳಿಸಿದ್ದ.

ಇದನ್ನೂ ಓದಿ- Crime News : ಚಲಿಸುತ್ತಿದ್ದ ಆಟೋದಲ್ಲಿ ಕತ್ತು ಸೀಳಿ ಪ್ರೇಯಸಿಯ ಕಗ್ಗೊಲೆ

ನಶೆಯಲ್ಲಿ ಕಾರ್ ಅಡ್ಡಾದಿಡ್ಡಿ ಡ್ರೈವ್.. 25ಕ್ಕೂ ಅಧಿಕ ವಾಹನ ಜಖಂ..!
25ಕ್ಕೂ ಹೆಚ್ಚು ವಾಹನಗಳನ್ನು ಡ್ಯಾಮೇಜ್ ಮಾಡಿದ್ದು ಕಾರ್ ಚಲಾಯಿಸಿದ ಯುವಕನಂತೆ.. ಈ ಹಿಂದೆ ಇದೇ ಏರಿಯಾದ ನಿವಾಸಿಯಾಗಿದ್ದ ಈತ ಇತ್ತೀಚೆಗೆ ಸುಬ್ರಮಣ್ಯ ನಗರಕ್ಕೆ ಶಿಫ್ಟ್ ಆಗಿದ್ದನಂತೆ.. ಬಳಿಕ ನಿನ್ನೆ ರಾತ್ರಿ ತನ್ನ ಗೆಳೆಯನ ಜೊತೆಗೂಡಿದ ಈತ ಎಣ್ಣೆಯೋ ಗಾಂಜಾವೋ ತಿಳಿದಿಲ್ಲ‌.. ಆದ್ರೆ ಒಟ್ನಲ್ಲಿ ನಶೆಯಲ್ಲಿ ತೇಲಿಕೊಂಡು ಬಂದು ಏರಿಯಾದಲ್ಲಿದ್ದ 12ಕ್ಕೂ ಅಧಿಕ ಕಾರ್, 10ಕ್ಕೂ ಅಧಿಕ ಬೈಕ್ ಗಳಿಗೆ ಡಿಕ್ಕಿ ಹೊಡೆದು ಪುಂಡಾಟ ಮೆರೆದಿದ್ದಾನೆ..

ಇದನ್ನೂ ಓದಿ- ಭೀಕರ ರಸ್ತೆ ಅಪಘಾತ: ಓರ್ವನ ಮೃತ್ಯು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮೂರು ಮಂದಿ

ಇನ್ನು ಯಾವಾಗ ಕಾರ್ ನಲ್ಲಿ ಬಂದ ಈ ಇಬ್ಬರು ಯುವಕರ ಪುಂಡಾಟ ಹೆಚ್ಚಾಯ್ತೋ ಕೊನೆಗೆ ಸ್ಥಳೀಯರೇ ಗಾಡಿಯನ್ನು ಚೇಸ್ ಮಾಡಿ ಹಿಡಿದಿದ್ದಾರೆ. ಬಳಿಕ ಬೇಕಾ ಬಿಟ್ಟಿ ಡ್ರೈವ್ ಮಾಡಿ ಗಾಡಿಗಳ ಜಖಂ ಮಾಡಿದ ಈತನಿಗೆ ಧರ್ಮದೇಟು ಕೊಟ್ಟು ಮಲ್ಲೇಶ್ವಂ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು ಮೇಲ್ನೋಟಕ್ಕೆ ನಶೆಯಲ್ಲಿ ಈ ಕೃತ್ಯ ಎಸಗಿರೊದು ಪತ್ತೆಯಾಗಿದ್ದು, ಹುಡುಗಿ ವಿಚಾರಕ್ಕೆ ತಲೆ ಕೆಟ್ಟು ಈ ರೀತಿ ಕೃತ್ಯ ಎಸಗಿರೋ ಶಂಕೆ ಸಹ ವ್ಯಕ್ತವಾಗಿದೆ. ಸದ್ಯ ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಮಲ್ಲೇಶ್ವರಂ ಪೊಲೀಸರು ಪುಂಡಾಟ ಮೆರೆದ ಇಬ್ಬರು ಯುವಕರ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News