ಕಿಲ್ಲರ್ ಬಿಎಂಟಿಸಿಗೆ ಬೈಕ್ ಸವಾರ ಬಲಿ

ಕಿಲ್ಲರ್ ಬಿಎಂಟಿಸಿಗೆ ಬಲಿಯಾಗಿರುವ ಬೈಕ್ ಸವಾರನನ್ನು ಶರವಣ(37) ಎಂದು ಗುರುತಿಸಲಾಗಿದ್ದು, ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Written by - VISHWANATH HARIHARA | Edited by - Yashaswini V | Last Updated : Nov 18, 2022, 08:07 AM IST
  • ಕಿಲ್ಲರ್ ಬಿಎಂಟಿಸಿಗೆ ಬೈಕ್ ಸವಾರ ಬಲಿ
  • ಬನಶಂಕರಿ ಮೇಟ್ರೋ ಸ್ಟೇಷನ್ ಬಳಿ ಘಟನೆ
  • ಬೈಕ್ ಸವಾರನ ತಲೆಯ ಮೇಲೆ‌ ಹರಿದ ಕಿಲ್ಲರ್ ಬಿಎಂಟಿಸಿ
ಕಿಲ್ಲರ್ ಬಿಎಂಟಿಸಿಗೆ ಬೈಕ್ ಸವಾರ ಬಲಿ title=
Road Accident

ಬೆಂಗಳೂರು: ಗುರುವಾರ (ನವೆಂಬರ್ 17) ರಾತ್ರಿ ‌ಬಿಎಂಟಿಸಿ ಬಸ್‌ ಹರಿದು ಬೈಕ್ ಸವಾರ‌ ಮೃತಪಟ್ಟಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಕಿಲ್ಲರ್ ಬಿಎಂಟಿಸಿಗೆ ಬಲಿಯಾಗಿರುವ ಬೈಕ್ ಸವಾರನನ್ನು ಶರವಣ(37) ಎಂದು ಗುರುತಿಸಲಾಗಿದ್ದು, ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ- Shradhha Murder Case: 25 ಹುಡುಗಿಯರ ಜೊತೆ ಸಂಬಂಧ ಬೆಳೆಸಿದ್ದ ಅಫ್ತಾಬ್.!

ಬನಶಂಕರಿ ದೇವಾಲಯ ಮುಂಭಾಗದ ಹೋಗುವಾಗ ಶರವಣ ಆಯ ತಪ್ಪಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಶರವಣ ಅವರ ತಲೆಯ ಮೇಲೆ ಹರಿದಿದ್ದು, ಬೈಕ್ ಸವಾರ ಶರವಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ- Shraddha Murder Case : ಗರ್ಭಿಣಿಯಾಗಿದ್ದಳಾ ಶ್ರದ್ಧಾ!? ಬಗೆದಷ್ಟು ಹೊರಬರುತ್ತಿದೆ ಈ ʻಪೀಸ್‌ʼವಾಲಾನ ಕುಕೃತ್ಯ!

ಈ ಕುರಿತಂತೆ ಮಾಹಿತಿ ನೀಡಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಬನಶಂಕರಿ ದೇವಾಲಯ ಮುಂಭಾಗದ ಹೋಗುವಾಗ ಶರವಣ ಆಯ ತಪ್ಪಿಬಿದ್ದಿದ್ದಾರೆ. ಆಗ ಹಿಂದೆ ಬರುತ್ತಿದ್ದ ಬಿಎಂಟಿಸಿ ಶರವಣ ಅವರ ಮೇಲೆ ಬಸ್ ಹತ್ತಿದೆ. ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News