ಪಿಎಂ ಕಿಸಾನ್: ಈ ರೈತರಿಂದ ಸರ್ಕಾರ ಹಣ ವಾಪಸ್ ಪಡೆಯಲಿದೆ, ನಿಮಗೆ ನೋಟಿಸ್ ಬಂದಿದೆಯಾ? ಇಲ್ಲಿ ಪರಿಶೀಲಿಸಿ!

PM Kisan Samman Nidhi Yojana: ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಸರ್ಕಾರವು ರೈತರಿಗೆ ವಾರ್ಷಿಕ 6,000 ರೂ. ಈ ಹಣವನ್ನು ರೈತರಿಗೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಈಗ ಈ ಯೋಜನೆಯ ಲಾಭವನ್ನು ಅಕ್ರಮವಾಗಿ ಪಡೆಯುತ್ತಿರುವ ರೈತರು ಇದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. (Business News In Kannada)  

Written by - Nitin Tabib | Last Updated : Dec 19, 2023, 08:22 PM IST
  • ಈ ಯೋಜನೆಯ ಲಾಭ ಪಡೆದುಕೊಳ್ಳಲು ಅನರ್ಹರಾಗಿರುವ ರೈತರು ಮತ್ತು ಈಗಾಗಲೇ ಯೋಜನೆಯ ಹಣ ಪಡೆದುಕೊಂಡವರು
  • ಇದೀಗ ಹಣ ಮರುಪಾವತಿಸಬೇಕಾಗಲಿದೆ ಎಂದು ಸರ್ಕಾರ ಹೇಳಿದೆ.
  • ಒಂದು ವೇಳೆ ಹಣ ವಾಪಸ್ ನೀಡದಿದ್ದರೆ, ಅಂತಹ ರೈತರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿದೆ.
ಪಿಎಂ ಕಿಸಾನ್: ಈ ರೈತರಿಂದ ಸರ್ಕಾರ ಹಣ ವಾಪಸ್ ಪಡೆಯಲಿದೆ, ನಿಮಗೆ ನೋಟಿಸ್ ಬಂದಿದೆಯಾ? ಇಲ್ಲಿ ಪರಿಶೀಲಿಸಿ! title=

ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಸರ್ಕಾರ ರೈತರಿಗೆ ವಾರ್ಷಿಕವಾಗಿ 6000 ರೂ.ಗಳನ್ನು ನೀಡುತ್ತದೆ. ಈ ಹಣವನ್ನು ರೈತರಿಗೆ ಒಟ್ಟು ಮೂರು ಕಂತುಗಳಲ್ಲಿ ಪಾವತಿಸಲಾಗುತ್ತದೆ. ಇದೀಗ ಅಕ್ರಮವಾಗಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿರುವ ರೈತರು ಅದಕ್ಕೆ ತಕ್ಕ ಫಲ ಪಡೆದುಕೊಳ್ಳಲಿದ್ದಾರೆ. ಹೌದು, ಸರ್ಕಾರದ ನಿರ್ದೇಶನಗಳ ಹಿನ್ನೆಲೆ ಈ ಯೋಜನೆಯ ತಪ್ಪು ಲಾಭ ಪಡೆದ ಅಂತಹ ಅನರ್ಹ ರೈತರಿಂದ ಯೋಜನೆಯ ಸಂಪೂರ್ಣ ಹಣವನ್ನು ಹಿಂಪಡೆಯಲಾಗುವುದು ಎನ್ನಲಾಗಿದೆ. (Business News In Kannada)

ಪಿಎಂ ಕಿಸಾನ್ ಯೋಜನೆ ರೈತರಿಗೆ ಆರ್ಥಿಕ ನೆರವು ಒದಗಿಸುವ ಒಂದು ಯೋಜನೆಯಾಗಿದೆ. ಈ ಯೋಜನೆಯಲ್ಲಿ ರೈತರಿಗೆ ರೂ. 2000 ಕಾಂತಿನ ಪ್ರಕಾರ ವಾರ್ಷಿಗವಾಗಿ ಒಟ್ಟು ಮೂರು ಕಂತುಗಳಲ್ಲಿ ಒಟ್ಟು 6000 ರೂ.ಗಳನ್ನು ಒದಗಿಸಲಾಗುತ್ತದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರಿಗೆ ತುಂಬಾ ಉಪಯುಕ್ತ ಯೋಜನೆ ಸಾಬೀತಾಗಿದೆ. ಇದೀಗ ಆಕ್ರಮವಾಗಿ ಈ ಯೋಜನೆಯಿಂದ ಹಣ ಪಡೆದವರಿಗೆ ಇದೀಗ ಸರ್ಕಾರ ತಕ್ಕ ಶಾಸನ ಮಾಡಲಿದೆ. ಬಿಂದ್ ಗೆ ಸೇರಿದ ಸುಮಾರು 202 ರೈತರಿಗೆ ಹಣ ಹಿಂದಿರುಗಿಸುವಂತೆ ಸರಕಾರ ನೋಟಿಸ್ ಕಳುಹಿಸಿದೆ. 

ಇದನ್ನೂ ಓದಿ-ಹೊಸ ವರ್ಷಾರಂಭಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ಹೆಚ್ಚಾಯ್ತು ತುಟ್ಟಿಭತ್ಯೆ!

ರೈತರಿಗೆ ಹಣ ಹಿಂತಿರುಗಿಸಲು ಹೇಳಿದ ಸರ್ಕಾರ
ಈ ಯೋಜನೆಯ ಲಾಭ ಪಡೆದುಕೊಳ್ಳಲು ಅನರ್ಹರಾಗಿರುವ ರೈತರು ಮತ್ತು ಈಗಾಗಲೇ ಯೋಜನೆಯ ಹಣ ಪಡೆದುಕೊಂಡವರು ಇದೀಗ ಹಣ ಮರುಪಾವತಿಸಬೇಕಾಗಲಿದೆ ಎಂದು ಸರ್ಕಾರ ಹೇಳಿದೆ. ಒಂದು ವೇಳೆ ಹಣ ವಾಪಸ್ ನೀಡದಿದ್ದರೆ, ಅಂತಹ ರೈತರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿದೆ. ಬಿಂದ್ ಗೆ ಸೇರಿದ 55, ತಾಜಾಣಿಪುರದ 68 ಕತರಾಹಿಯ 20, ಜಹಾನಾದ 11, ಉತ್ತರತು ನ 18 ಲೋಡಿಪುರದ 16 ರೈತರಿಗೆ ಈಗಾಗಲೇ ಸರ್ಕಾರ ನೋಟಿಸ್ ಕಳುಹಿಸಿದ್ದು, ಹಣ ವಾಪಸ್ ನೀಡುವಂತೆ ಸರ್ಕಾರ ಸೂಚಿಸಿದೆ. 

ಇದನ್ನೂ ಓದಿ-ಇಂದಿನಿಂದ ಅಗ್ಗದದ ದರದಲ್ಲಿ ಚಿನ್ನ ಮಾರಾಟ ಆರಂಭ, ಈ ಸುವರ್ಣಾವಕಾಶ ತಪ್ಪಿಸಿಕೊಳ್ಳಬೇಡಿ!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ರೈತರಿಗೆ ಮೂರು ಕಂತುಗಳಲ್ಲಿ ವಾರ್ಷಿಕವಾಗಿ ಡಿಬಿಟಿ ಮೂಲಕ ಖಾತೆಗೆ ವಾರ್ಷಿಕವಾಗಿ ರೂ.6000 ವರ್ಗಾವಣೆ ಮಾಡಲಾಗುತ್ತದೆ. ಪ್ರತಿಯೊಂದು ಕಂತಿನಲ್ಲಿ ಅರ್ಹ ರೈತರಿಗೆ ರೂ. 2000 ಸಿಗುತ್ತದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News