PM Kisan: 27 ಲಕ್ಷ ರೈತರ ಪಾವತಿ ವಿಫಲ, ನೀವೂ ಈ ತಪ್ಪು ಮಾಡುತ್ತಿದ್ದೀರಾ? ತಕ್ಷಣ ಪರಿಶೀಲಿಸಿ

PM Kisan: ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿವರ್ಷ 6,000 ರೂ.ಗಳನ್ನು ನೀಡಲಾಗುವುದು. ಈ ಯೋಜನೆಯಡಿ 9 ನೇ ಕಂತು ಮುಂದಿನ ತಿಂಗಳಿನಿಂದ ಲಭ್ಯವಾಗಲಿದೆ. ಆದರೆ ಈಗಾಗಲೇ 8 ನೇ ಕಂತಿನ ಹಣವನ್ನು ರೈತರ ಖಾತೆಗಳಿಗೆ ಹಾಕಲಾಗಿದೆ. ಆದರೆ ಇನ್ನೂ ಅನೇಕ ರೈತರಿಗೆ ಈ ಹಣ ಸಿಕ್ಕಿಲ್ಲ.

Written by - Yashaswini V | Last Updated : Jul 23, 2021, 07:03 AM IST
  • ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ 9 ನೇ ಕಂತು ಆಗಸ್ಟ್‌ನಲ್ಲಿ ಬರಲಿದೆ
  • 27 ಲಕ್ಷಕ್ಕೂ ಹೆಚ್ಚು ರೈತರ ವಹಿವಾಟು ವಿಫಲವಾಗಿದೆ
  • ಪ್ರಾಥಮಿಕ ಹಂತದಲ್ಲಿಯೇ 31 ಲಕ್ಷಕ್ಕೂ ಹೆಚ್ಚು ರೈತರ ಡೇಟಾವನ್ನು ತಿರಸ್ಕರಿಸಲಾಗಿದೆ
PM Kisan: 27 ಲಕ್ಷ ರೈತರ ಪಾವತಿ ವಿಫಲ, ನೀವೂ ಈ ತಪ್ಪು ಮಾಡುತ್ತಿದ್ದೀರಾ? ತಕ್ಷಣ ಪರಿಶೀಲಿಸಿ title=
PM Kisan Samman Nidhi Scheme

PM Kisan: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ (Pradhan Mantri Kisan Samman Nidhi) ಯೋಜನೆಯ 9 ನೇ ಕಂತು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಜುಲೈ 31 ರವರೆಗೆ  ರೈತರು 8 ನೇ ಕಂತಿನ ಹಣವನ್ನು ಪಡೆಯಲಿದ್ದಾರೆ. ಆದಾಗ್ಯೂ, ಪೇಮೆಂಟ್ ವಿಫಲವಾದ ಕಾರಣ ಲಕ್ಷಾಂತರ ರೈತರ ಖಾತೆಗೆ ಹಣ ತಲುಪಿಲ್ಲ ಎಂಬುದು ಆತಂಕದ ವಿಷಯ.

27 ಲಕ್ಷಕ್ಕೂ ಹೆಚ್ಚು ರೈತರ ಪಾವತಿ ವಿಫಲವಾಗಿದೆ:
2021 ರ ಜುಲೈ 20 ರವರೆಗೆ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, 27 ಲಕ್ಷಕ್ಕೂ ಹೆಚ್ಚು ರೈತರ ಪೇಮೆಂಟ್ ವಿಫಲವಾಗಿದೆ.  ಅಂದರೆ, ಸರ್ಕಾರವು ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಕಳುಹಿಸಿದೆ, ಆದರೆ ರೈತರ ಖಾತೆಗಳಿಗೆ ಆ ಹಣ ತಲುಪಿಲ್ಲ. ಇದಲ್ಲದೆ 1 ಕೋಟಿ 95 ಲಕ್ಷ ಪಾವತಿಗಳನ್ನು ರಾಜ್ಯ ಸರ್ಕಾರಗಳು ತಡೆಹಿಡಿದಿವೆ. ಆದರೆ 31 ಲಕ್ಷಕ್ಕೂ ಹೆಚ್ಚು ರೈತರ ಡೇಟಾವನ್ನು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯಿಂದ  (PFMS) ಪ್ರಾಥಮಿಕ ಹಂತದಲ್ಲಿಯೇ ತಿರಸ್ಕರಿಸಲಾಗಿದೆ. 12 ಕೋಟಿ 36 ಲಕ್ಷಕ್ಕಿಂತ ಹೆಚ್ಚಿನ ದತ್ತಾಂಶಗಳಲ್ಲಿ ಕೇವಲ 2 ಕೋಟಿ 81 ಲಕ್ಷವನ್ನು ಮಾತ್ರ ಸುಧಾರಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- PM Kisan : ಯಾವಾಗ ಖಾತೆ ಸೇರಲಿದೆ 9ನೇ ಕಂತು ? ಇಲ್ಲಿದೆ ಸಂಪೂರ್ಣ ಮಾಹಿತಿ

ತಿದ್ದುಪಡಿಗಾಗಿ ಹಿಂದಕ್ಕೆ ಕಳುಹಿಸಲಾಗುತ್ತಿದೆ: 
ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ  (Pradhan Mantri Kisan Samman Nidhi) ಯೋಜನೆ ಅಡಿಯಲ್ಲಿ ಕೃಷಿ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಕೆಲವು ಪರಿಶೀಲಿಸಿದ ಅರ್ಜಿಗಳಲ್ಲಿ, ಪಿಎಫ್‌ಎಂಎಸ್ ಪರವಾಗಿ ನಿಧಿ ವರ್ಗಾವಣೆಯ ಸಮಯದಲ್ಲಿ ಅನೇಕ ತಪ್ಪುಗಳು ಕಂಡುಬಂದಿವೆ, ಈ ಕಾರಣದಿಂದಾಗಿ ಪಿಎಂ ಕಿಸಾನ್ ಯೋಜನೆಯ ಕಂತು ರೈತರ ಖಾತೆಯನ್ನು ಸೇರಿಲ್ಲ. ಹಾಗಾಗಿ ಅವುಗಳನ್ನು ಸರಿಪಡಿಸಲು ಕಳುಹಿಸಲಾಗುತ್ತಿದೆ.

ತಪ್ಪನ್ನು ಹೇಗೆ ಸರಿಪಡಿಸುವುದು ಎಂದು ತಿಳಿಯಿರಿ?
ಪಿಎಂ ಕಿಸಾನ್ (PM Kisan) ಯೋಜನೆಯ 9 ನೇ ಕಂತು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ನವೆಂಬರ್ ಅಂತ್ಯದವರೆಗೆ ಈ ಕಂತಿನ ಹಣ ಎಲ್ಲಾ ರೈತರ ಖಾತೆಯನ್ನು ತಲುಪಲಿದೆ. ಆದರೆ ನೀವು ಇನ್ನೂ ಕೂಡ 8 ನೇ ಕಂತಿನ ಹಣವನ್ನು ಸ್ವೀಕರಿಸದಿದ್ದರೆ, ನಿಮ್ಮ ಡಾಕ್ಯುಮೆಂಟ್‌ನಲ್ಲಿ ಏನಾದರೂ ಕೊರತೆ ಇರಬಹುದು. ಸಾಮಾನ್ಯವಾಗಿ ಜನರು ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆಯನ್ನು ಬರೆಯುವಾಗ ತಪ್ಪು ಮಾಡುತ್ತಾರೆ. ಇದರಿಂದಾಗಿ ಅವರ ಕಂತುಗಳು ಸಿಲುಕಿಕೊಳ್ಳುತ್ತವೆ. ನೀವೂ ಕೂಡ ಈ ತಪ್ಪುಗಳನ್ನು ಮಾಡಿದ್ದರೆ, ನೀವು ಮನೆಯಲ್ಲಿಯೇ ಕುಳಿತು ಅದನ್ನು ಸರಿಪಡಿಸಬಹುದು.

ಈ ಹಂತಗಳನ್ನು ಅನುಸರಿಸಿ ಪಿಎಂ ಕಿಸಾನ್ ಯೋಜನೆಯಲ್ಲಿನ ತಪ್ಪನ್ನು ಸರಿಪಡಿಸಿ:-
1. ಪಿಎಂ ಕಿಸಾನ್ ಅವರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://pmkisan.gov.in/
2. ಅದರಲ್ಲಿ ಫಾರ್ಮರ್ ಕಾರ್ನರ್ ಗೆ ಹೋಗಿ Edit Aadhaar Details ಆಯ್ಕೆಯನ್ನು ಕ್ಲಿಕ್ ಮಾಡಿ
3. ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ತುಂಬಿಸಿ ಸಲ್ಲಿಸಿ
4. ನಿಮ್ಮ ಹೆಸರಿನಲ್ಲಿ ಏನಾದರೂ ತಪ್ಪು ಕಂಡುಬಂದಲ್ಲಿ ನೀವು ಅದನ್ನು ಆನ್‌ಲೈನ್‌ನಲ್ಲಿ ಸರಿಪಡಿಸಬಹುದು
5. ಬೇರೆ ಏನಾದರೂ ತಪ್ಪು ಇದ್ದರೆ ನಿಮ್ಮ ಅಕೌಂಟೆಂಟ್ ಮತ್ತು ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಿ
6. ಹೆಲ್ಪ್‌ಡೆಸ್ಕ್ ಆಯ್ಕೆಯ ಮೂಲಕ, ನಿಮ್ಮ ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ನೀವು ತಪ್ಪುಗಳನ್ನು ಸರಿಪಡಿಸಬಹುದು
7. ಆಧಾರ್ ಸಂಖ್ಯೆಯಲ್ಲಿ ತಿದ್ದುಪಡಿ, ಕಾಗುಣಿತದಲ್ಲಿನ ತಪ್ಪು ಮುಂತಾದ ಹಲವು ತಪ್ಪುಗಳನ್ನು ನೀವು ಸರಿಪಡಿಸಬಹುದು.

ಇದನ್ನೂ ಓದಿ-  Mera Pani Meri Virasat Yojana : ಈ ಯೋಜನೆಯ ಮೂಲಕ ರೈತರಿಗೆ ಸಿಗಲಿದೆ ₹ 7000 : ಜು. 31 ರೊಳಗೆ ನೋಂದಣಿ ಮಾಡಿಕೊಳ್ಳಿ!

ಈ ರೀತಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ:
1. ಹೆಸರನ್ನು ಪರಿಶೀಲಿಸಲು, ಮೊದಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು https://pmkisan.gov.in.
2. ಈಗ ಅದರ ಮುಖಪುಟದಲ್ಲಿ ನೀವು ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನು ನೋಡುತ್ತೀರಿ.
3. ಫಾರ್ಮರ್ಸ್ ಕಾರ್ನರ್ ವಿಭಾಗದೊಳಗೆ, ಫಲಾನುಭವಿಗಳ ಪಟ್ಟಿ ಆಯ್ಕೆಯನ್ನು ಕ್ಲಿಕ್ ಮಾಡಿ.
4. ಈಗ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
5. ಇದರ ನಂತರ ನೀವು ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ.
6. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸುತ್ತದೆ, ಇದರಲ್ಲಿ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News