Indian Railways, IRCTC: ಪ್ರಯಾಣಿಕರು ಈಗ ಈ 44 ರೈಲುಗಳಲ್ಲಿ ರಿಸರ್ವೇಶನ್ ಇಲ್ಲದೆಯೇ ಪ್ರಯಾಣಿಸಬಹುದು

Indian Railways, IRCTC: ಭಾರತೀಯ ರೈಲ್ವೆ ರೈಲು ಪ್ರಯಾಣಿಕರಿಗೆ ಒಟ್ಟು 44 ರೈಲುಗಳಲ್ಲಿ ಮೀಸಲಾತಿ ಇಲ್ಲದೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ, ಅಂದರೆ ಪ್ರಯಾಣಿಕರು ಈ 44 ರೈಲುಗಳಲ್ಲಿ ಮೀಸಲಾತಿ ಇಲ್ಲದೆ ಸಾಮಾನ್ಯ ಟಿಕೆಟ್‌ನಲ್ಲಿ  ಪ್ರಯಾಣಿಸಲು ನಿಮಗೆ ಸಾಧ್ಯವಾಗುತ್ತದೆ.

Written by - Yashaswini V | Last Updated : Jul 12, 2021, 09:58 AM IST
  • ರೈಲ್ವೆ ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ
  • ನಿಧಾನವಾಗಿ ರೈಲು ಹಳಿಗಳಲ್ಲಿ ಓಡಲು ಪ್ರಾರಂಭಿಸಿವೆ
  • ಈಗ ಕೆಲವು ರೈಲುಗಳನ್ನು ಪ್ರಯಾಣಿಸಲು ರಿಸರ್ವೇಶನ್ ಟಿಕೆಟ್ ಅಗತ್ಯವಿಲ್ಲ
Indian Railways, IRCTC: ಪ್ರಯಾಣಿಕರು ಈಗ ಈ 44 ರೈಲುಗಳಲ್ಲಿ ರಿಸರ್ವೇಶನ್ ಇಲ್ಲದೆಯೇ ಪ್ರಯಾಣಿಸಬಹುದು title=
ಈಗ ಈ 44 ರೈಲುಗಳಲ್ಲಿ ಮೀಸಲಾತಿ ಇಲ್ಲದೆಯೇ ಪ್ರಯಾಣಿಸಲು ಸಾಧ್ಯ!

ನವದೆಹಲಿ: Indian Railways, IRCTC- ಕರೋನಾವೈರಸ್‌ನ ಎರಡನೇ ತರಂಗದ (Coronavirus Second Wave) ಅಬ್ಬರ ಸ್ವಲ್ಪ ಇಳಿಮುಖವಾದಂತೆ ಕಾಣುತ್ತಿದೆ. ಇದರ ಬೆನ್ನಲ್ಲೇ ಇದೀಗ ರೈಲುಗಳು ಹಳಿಗಳಲ್ಲಿ ಓಡಲು ಪ್ರಾರಂಭಿಸಿವೆ. ನಾರ್ತ್ ವೆಸ್ಟರ್ನ್ ರೈಲ್ವೆ ನಿಯಮಿತವಾಗಿ ಹೊಸ ರೈಲುಗಳತ್ತ ಗಮನಹರಿಸುತ್ತಿದೆ. ಇದರೊಂದಿಗೆ ಜನಸಂದಣಿಯನ್ನು ನಿಯಂತ್ರಿಸಲು ಸಾಮಾನ್ಯ ಟಿಕೆಟ್‌ನಲ್ಲಿ ಪ್ರಯಾಣಿಸುವುದನ್ನೂ ನಿಷೇಧಿಸಲಾಗಿದೆ. ಆದರೆ ಈ ಮಧ್ಯೆ ರೈಲ್ವೆ ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ ಬರುತ್ತಿದೆ.

ಮೀಸಲಾತಿ ಇಲ್ಲದೆ ಪ್ರಯಾಣಿಸಬಹುದು:
ಅನೇಕ ರೈಲುಗಳಲ್ಲಿ (Train) ಪ್ರಯಾಣಿಕರಿಗೆ ಮೀಸಲಾತಿ (Reservation) ಇಲ್ಲದೆ ಅಂದರೆ ಸಾಮಾನ್ಯ ಟಿಕೆಟ್‌ನಲ್ಲಿ  ಪ್ರಯಾಣಿಸಲು ರೈಲ್ವೆ ಅನುಮತಿ ನೀಡಿದೆ. ಜೈಪುರ, ಜೋಧ್‌ಪುರ, ಅಜ್ಮೀರ್ ಮತ್ತು ಬಿಕಾನೆರ್ ವಿಭಾಗಗಳ 44 ಪ್ರಯಾಣಿಕ ಮತ್ತು ಡಿಎಂಯು ರೈಲುಗಳಲ್ಲಿ ಸಾಮಾನ್ಯ ಟಿಕೆಟ್ ಮೂಲಕ ಪ್ರಯಾಣಿಸಲು ರೈಲ್ವೆ ಅನುಮತಿ ನೀಡಿದೆ. ಈ 44 ರೈಲುಗಳಲ್ಲಿ ಜೈಪುರಕ್ಕೆ 7 ರೈಲುಗಳು ಚಲಿಸಲಿವೆ. ಇನ್ನು ವಾಯುವ್ಯ ರೈಲ್ವೆಯಲ್ಲಿ ಸುಮಾರು 80 ಪ್ರತಿಶತ ರೈಲುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ.

ಇದನ್ನೂ ಓದಿ - Indian Railways : 50 ರೈಲುಗಳನ್ನ ಮರುಪ್ರಾರಂಭಿಸಿದ ರೈಲ್ವೆ ಇಲಾಖೆ : ಇಲ್ಲಿದೆ ಸಂಪೂರ್ಣ ಲಿಸ್ಟ್

ಕರೋನಾದಿಂದಾಗಿ ಅನೇಕ ನಿಲ್ದಾಣಗಳನ್ನು ಮುಚ್ಚಲಾಯಿತು :
ವಾಸ್ತವವಾಗಿ, ಕರೋನಾವೈರಸ್ (Coronavirus) ಸೋಂಕು ಹರಡುವುದನ್ನು ತಡೆಗಟ್ಟಲು, ರೈಲ್ವೆ ಸಾಮಾನ್ಯ ಪ್ರಯಾಣ ಮತ್ತು ಜನಸಂದಣಿಯ ನಿಯಂತ್ರಣಕ್ಕಾಗಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ನಿಷೇಧಿಸಿತ್ತು. ಇದರೊಂದಿಗೆ, ಕರೋನಾ ತರಂಗದ ಸಮಯದಲ್ಲಿ ಅನೇಕ ನಿಲ್ದಾಣಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟವು. ಹೇಗಾದರೂ, ಸಮಯ ಕಳೆದಂತೆ ರೈಲುಗಳು ವೇಗವನ್ನು ಪಡೆದುಕೊಳ್ಳುತ್ತವೆ.

ಇದನ್ನೂ ಓದಿ - Indian Railways: Confirm ticket ಕಳೆದ ಹೋದರೆ ರೈಲು ಪ್ರಯಾಣ ಮಾಡುವುದು ಹೇಗೆ ತಿಳಿಯಿರಿ

ಅನೇಕ ಸ್ಥಳಗಳಲ್ಲಿ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ :
ಅದೇ ಸಮಯದಲ್ಲಿ, ಬಿಹಾರದಲ್ಲಿ ಪ್ರವಾಹದಿಂದಾಗಿ, ಅನೇಕ ಸ್ಥಳಗಳಲ್ಲಿ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಜುಲೈ 10 ರಿಂದ ಸಮಸ್ತಿಪುರ ದರ್ಭಂಗ ರೈಲ್ವೆ ವಿಭಾಗದ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದ್ದರೆ, ವಿಭಾಗದ ಸಾಗೌಲಿ ನರಕಟ್ಯಗಂಜ್ ರೈಲ್ವೆ ವಿಭಾಗದಲ್ಲಿ ಏಳು ದಿನಗಳವರೆಗೆ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಅಪಘಾತ ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ರೈಲುಗಳನ್ನು ರದ್ದುಪಡಿಸಲಾಗಿದೆ. ಆದರೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೆಲವು ಮಾರ್ಗಗಳ ಮೇಲ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾಯಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News