ಮೂರು ಜಿಲ್ಲೆಗಳಲ್ಲಿಂದು ಮೋದಿ ಅಬ್ಬರ; ಕಡಲ ನಗರಿಯಲ್ಲಿ ಮೋದಿ ಅಲೆ!

ತುಮಕೂರು, ಗದಗ, ಶಿವಮೊಗ್ಗ ಜಿಲ್ಲೆಗಳಲ್ಲಿಂದು ಮೋದಿ ಮೇನಿಯಾ. ಕಡಲ ನಗರಿ ಮಂಗಳೂರಿನಲ್ಲೂ  ಮುಂದುವರೆಯಲಿದೆ ಮೋದಿ ಅಲೆ.

Last Updated : May 5, 2018, 09:20 AM IST
ಮೂರು ಜಿಲ್ಲೆಗಳಲ್ಲಿಂದು ಮೋದಿ ಅಬ್ಬರ; ಕಡಲ ನಗರಿಯಲ್ಲಿ ಮೋದಿ ಅಲೆ! title=

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದು, ತುಮಕೂರು, ಗದಗ, ಶಿವಮೊಗ್ಗ ಜಿಲ್ಲೆಗಳಲ್ಲಿಂದು ಮೋದಿ ಮೇನಿಯಾಕ್ಕೆ ವೇದಿಕೆ ಸಜ್ಜಾಗಿದೆ.

ಇಂದು ಬೆಳಿಗ್ಗೆ 11:00ಕ್ಕೆ ಹೆಲಿಕಾಫ್ಟರ್ ಮೂಲಕ ತುಮಕೂರಿಗೆ ಆಗಮಿಸಲಿರುವ ಮೋದಿ ತುಮಕೂರು, ಹಾಸನ ಹಾಗೂ ನೆಲಮಂಗಲ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ನಂತರ ಇದೇ ಮೊದಲ ಬಾರಿಗೆ ಗದಗ ಜಿಲ್ಲೆಗೆ ಮೋದಿ ತೆರಳಲಿದ್ದು, ಮಧ್ಯಾಹ್ನ 02:00ಕ್ಕೆ ಗದಗಿನ ಮುಂಡರಗಿ ರಸ್ತೆಯ ಮೈದಾನದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಬೇಟೆ ನಡೆಸಲಿದ್ದಾರೆ.

ಅಲ್ಲಿಂದ ಶಿವಮೊಗ್ಗಕ್ಕೆ ತೆರಳಲಿರುವ ಪ್ರಧಾನಿ ಸಂಜೆ 04:00ಕ್ಕೆ ಶಿವಮೊಗ್ಗದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ.

ಸಂಜೆ 06:30ಕ್ಕೆ ಕಡಲ ನಗರಿ ಮಂಗಳೂರಿನಲ್ಲಿ ಮೋದಿ ಅಲೆ ಮುಂದುವರೆಯಲಿದೆ.

Trending News