ವಲಸಿಗರಿಗೆ ಮಣೆ ಹಾಕಿದ ಜೆಡಿಎಸ್

ಈ ಹಿಂದೆ 126 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್,  56 ಕ್ಷೇತ್ರಗಳಿಗೆ ಎರಡನೇ ಪಟ್ಟಿ ಪ್ರಕಟಿಸಿದೆ. ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್-ಬಿಜೆಪಿಯಿಂದ ವಲಸೆ ಬಂದ ಬಹುತೇಕ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. 

Last Updated : Apr 21, 2018, 10:19 AM IST
ವಲಸಿಗರಿಗೆ ಮಣೆ ಹಾಕಿದ ಜೆಡಿಎಸ್ title=

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಈ ಹಿಂದೆ 126 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್, ಅಳೆದು ತೂಗಿ 56 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ತನ್ನ ಎರಡನೇ ಪಟ್ಟಿ ಪ್ರಕಟಿಸಿದೆ. 

ಇನ್ನೂ 22 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿರುವ ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್-ಬಿಜೆಪಿಯಿಂದ ವಲಸೆ ಬಂದ ಬಹುತೇಕ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಇದರ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ ಬಂಡಾಯದ ಲಾಭ ಪಡೆಯಲು ಮುಂದಾಗಿದೆ. 

ಜೆಡಿಎಸ್ ನಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಕಾಂಗ್ರೆಸ್ ವಲಸಿಗರು
ಕ್ಷೇತ್ರ  ಅಭ್ಯರ್ಥಿ 
ಹೊಸದುರ್ಗ ನಟ ಶಶಿಕುಮಾರ್‌
ಸಿ.ವಿ.ರಾಮನ್‌ನಗರ  ರಮೇಶ್‌
ಚಾಮರಾಜಪೇಟೆ ಅಲ್ತಾಫ್ ಖಾನ್‌
ರಾಯಚೂರು ಗ್ರಾಮೀಣ ರವಿ ಪಾಟೀಲ್‌
ಬೆಂಗಳೂರು ದಕ್ಷಿಣ ಪ್ರಭಾಕರ ರೆಡ್ಡಿ
ರಾಜಾಜಿನಗರ ಜೇಡರಹಳ್ಳಿ ಕೃಷ್ಣಪ್ಪ

ಬಿಜೆಪಿ ವಲಸಿಗರಿಗೂ ಮಣೆ ಹಾಕಿದ ಜೆಡಿಎಸ್

ಕ್ಷೇತ್ರ  ಅಭ್ಯರ್ಥಿ
ಭಾಲ್ಕಿ ಪ್ರಕಾಶ್‌ ಖಂಡ್ರೆ
ಚಿಕ್ಕಪೇಟೆ ಹೇಮಚಂದ್ರ ಸಾಗರ್‌
ರಾಜರಾಜೇಶ್ವರಿ ನಗರ ಎಂ. ರಾಮಚಂದ್ರ
ಮುದ್ದೇಬಿಹಾಳ ಮಂಗಳಾದೇವಿ ಬಿರಾದಾರ್‌
ಶಾಂತಿನಗರ ಶ್ರೀಧರರೆಡ್ಡಿ

 

Trending News