ಸದನಕ್ಕೆ ಇನ್ನೂ ಭಾರದ ಇಬ್ಬರು ಕಾಂಗ್ರೆಸ್ ಶಾಸಕರು !

    

Last Updated : May 19, 2018, 01:09 PM IST
ಸದನಕ್ಕೆ ಇನ್ನೂ ಭಾರದ ಇಬ್ಬರು ಕಾಂಗ್ರೆಸ್ ಶಾಸಕರು ! title=

ಬೆಂಗಳೂರು: ವಿಧಾನಸಭೆಯ ಕಲಾಪ ಪ್ರಾರಂಭವಾಗಿದ್ದು ಇಂದು ನೂತನವಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರಿಗೆ ಹಂಗಾಮಿ ಸ್ಪೀಕರ್ ಪ್ರಮಾಣವಚನ ಭೋದಿಸಿದರು.

ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತವನ್ನು ಸಾಬೀತುಪಡಿಸಬೇಕಾಗಿರುವುದರಿಂದ  ಇಂದಿನ ಕಲಾಪ ರಾಷ್ಟ್ರಾದ್ಯಂತ ಭಾರಿ ಕೂತುಹಲ ಕೆರಳಿಸಿದೆ. ಆದರೆ ಈಗ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಕಲಾಪ ಪ್ರಾರಂಭವಾದರೂ ಈವರೆಗೂ ಕಲಾಪಕ್ಕೆ ಬಾರದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಈ ಗೈರಾದ ಶಾಸಕರಲ್ಲಿ ಪ್ರಮುಖವಾಗಿ ಹೊಸಪೇಟೆಯ ಆನಂದ್ ಸಿಂಗ್ ಮತ್ತು ಮಸ್ಕಿ ಪ್ರತಾಪ್ ಗೌಡ ಎಂದು ಹೇಳಲಾಗಿದೆ. ಆ ಮೂಲಕ ಈಗ ಮ್ಯಾಜಿಕ್ ನಂಬರ್ ಸಂಖ್ಯೆ ಈಗ 110ಕ್ಕೆ ತಲುಪಿದೆ.

ಒಟ್ಟು 224 ಕ್ಷೇತ್ರಗಳಲ್ಲಿ 222 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.ಇದರಲ್ಲಿ ಬಿಜೆಪಿ 104,ಕಾಂಗ್ರೆಸ್ 78,ಜೆಡಿಎಸ್ 38 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

Trending News