Afghanistan Crisis: ಅಫ್ಘಾನ್ ಉಗ್ರರು ರಷ್ಯಾಕ್ಕೆ ಬರುವುದು ಬೇಡವೆಂದ ಪುಟಿನ್..!

ಅಫ್ಘಾನಿಸ್ತಾನದ ಸಂಘರ್ಷವು ನೇರವಾಗಿ ರಷ್ಯಾದ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ ಅಂತಾ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

Written by - Puttaraj K Alur | Last Updated : Aug 22, 2021, 06:56 PM IST
  • ಆರಂಭದಿಂದಲೂ ಅಫ್ಘಾನಿಸ್ತಾನದಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಹಸ್ತಕ್ಷೇಪವನ್ನು ಪುಟಿನ್ ವಿರೋಧಿಸಿದ್ದಾರೆ
  • ‘ನಿರಾಶ್ರಿತರ ಸೋಗಿನಲ್ಲಿ ಅಫ್ಘಾನ್ ಉಗ್ರರು ರಷ್ಯಾಗೆ ವಲಸೆ ಬರುವುದಕ್ಕೆ ನಾನು ಇಷ್ಟಪಡುವುದಿಲ್ಲ’ ಎಂದ ಪುಟಿನ್
  • ಇಡೀ ದೇಶವನ್ನೇ ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ತಾಲಿಬಾನ್ ಉಗ್ರರು ಹೊಸ ಸರ್ಕಾರ ರಚಿಸುವಲ್ಲಿ ಬ್ಯುಸಿಯಾಗಿದ್ದಾರೆ
Afghanistan Crisis: ಅಫ್ಘಾನ್ ಉಗ್ರರು ರಷ್ಯಾಕ್ಕೆ ಬರುವುದು ಬೇಡವೆಂದ ಪುಟಿನ್..! title=
ಪಾಶ್ಚಾತ್ಯ ರಾಷ್ಟ್ರಗಳ ಪ್ರಸ್ತಾಪವನ್ನು ಪುಟಿನ್‌ ಟೀಕಿಸಿದ್ದಾರೆ (Photo Courtesy: Zee News)

ನವದೆಹಲಿ: ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಫ್ಘಾನಿಸ್ತಾನ(Afghanistan Crisis)ವನ್ನೇ ಕಬ್ಜಾ ಮಾಡಿಕೊಂಡಿರುವ ತಾಲಿಬಾನ್(Taliban) ಉಗ್ರರು ಹೊಸ ಸರ್ಕಾರ ರಚಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಮಕ್ಕಳು, ಮಹಿಳೆಯರು ಸೇರಿದಂತೆ ಅಫ್ಘಾನ್ ಪ್ರಜೆಗಳ ರಕ್ಷಣೆಗೆ ವಿಶ್ವದ ನಾಯಕರು ಒಂದಾಗಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಮಧ್ಯೆ ನಿರಾಶ್ರಿತರ ಸೋಗಿನಲ್ಲಿ ಅಫ್ಘಾನ್ ಪ್ರಜೆಗಳು ರಷ್ಯಾಗೆ ಬರುವುದು ಬೇಡವೆಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಅಫ್ಘಾನಿಸ್ತಾನ(Afghanistan)ದಲ್ಲಿ ಉಂಟಾಗಿರುವ ಸಂಘರ್ಷವು ನೇರವಾಗಿ ರಷ್ಯಾದ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ ಅಂತಾ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಹೇಳಿದ್ದಾರೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ನೆರೆಯ ಮಧ್ಯ ಏಷ್ಯಾ ದೇಶಗಳಿಗೆ ಅಫ್ಘಾನ್ ನಿರಾಶ್ರಿತರನ್ನು ಸ್ಥಳಾಂತರ ಮಾಡುವ ಕೆಲ ಪಾಶ್ಚಾತ್ಯ ರಾಷ್ಟ್ರಗಳ ಪ್ರಸ್ತಾಪವನ್ನು ಪುಟಿನ್‌ ಟೀಕಿಸಿದ್ದಾರೆ.

ಇದನ್ನೂ ಓದಿ: ಯುಎಸ್ ಪಾಕಿಸ್ತಾನಕ್ಕೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸಲಿ-ಆಫ್ಘಾನ್ ಪಾಪ್ ತಾರೆ

‘ನಿರಾಶ್ರಿತರ ಸೋಗಿನಲ್ಲಿ ಅಫ್ಘಾನ್ ಉಗ್ರರು ರಷ್ಯಾಗೆ ವಲಸೆ ಬರುವುದಕ್ಕೆ ನಾನು ಇಷ್ಟಪಡುವುದಿಲ್ಲ’ ಎಂದು ಪುಟಿನ್(Vladimir Putin) ಹೇಳಿದ್ದಾರೆಂದು ವರದಿಯಾಗಿದೆ. ಆರಂಭದಿಂದಲೂ ಅಫ್ಘಾನಿಸ್ತಾನದಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಹಸ್ತಕ್ಷೇಪವನ್ನು ಪುಟಿನ್ ವಿರೋಧಿಸಿದ್ದಾರೆ. ಹೀಗಾಗಿ ಅಫ್ಘಾನ್ ಉಗ್ರರು ರಷ್ಯಾಗೆ ಬರುವುದು ಬೇಡ ಅಂತಾ ಕಟುವಾಗಿ ಹೇಳಿದ್ದಾರೆ.

ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ನಿಯೋಜಿಸಿದ್ದ ತನ್ನ ಭದ್ರತಾ ಪಡೆಗಳನ್ನು ಅಮೆರಿಕ(United States)ಹಿಂದಕ್ಕೆ ಪಡೆಯುತ್ತಿದೆ. ಹೀಗಾಗಿ ದೇಶದಲ್ಲಿ ಮೇಲುಗೈ ಸಾಧಿಸಿರುವ ತಾಲಿಬಾನ್ ಭಯೋತ್ಪಾದಕರು ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿದೆ. ಕಾಬೂಲ್ ಮೇಲೆ ತಾಲಿಬಾನ್ ಹಿಡಿತ ಸಾಧಿಸುತ್ತಿದ್ದಂತೆಯೇ ಅಧ್ಯಕ್ಷ ಅಶ್ರಫ್ ಘನಿ ದೇಶಬಿಟ್ಟು ಪಲಾಯನ ಮಾಡಿದ್ದು, ದುಬೈನಲ್ಲಿ ಆಶ್ರಯ ಪಡೆದಿದ್ದಾರೆ.

ಇದನ್ನೂ ಓದಿ: "ಆಫ್ಘಾನಿಸ್ತಾನಕ್ಕೆ ನಾವು ಬದ್ಧ, ಸಾಧ್ಯವಾದಲ್ಲಿ ತಾಲಿಬಾನ್ ಜೂತೆಗೂ ಕಾರ್ಯನಿರ್ವಹಿಸುತ್ತೇವೆ"

ಅಫ್ಘಾನಿಸ್ತಾದನಲ್ಲಿ ರಕ್ತಪಾತ ತಪ್ಪಿಸಲು ತಾವು ದೇಶ ತೊರೆದಿರುವುದಾಗಿ ಘನಿ ಹೇಳಿಕೊಂಡಿದ್ದರು. ಸದ್ಯ ಇಡೀ ದೇಶವನ್ನೇ ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ತಾಲಿಬಾನ್ ಉಗ್ರರು ಹೊಸ ಸರ್ಕಾರ ರಚಿಸುವಲ್ಲಿ ಬ್ಯುಸಿಯಾಗಿದ್ದಾರೆ. ಶರಿಯಾ ಕಾನೂನಿನಡಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವುದಾಗಿ ಈಗಾಗಲೇ ತಾಲಿಬಾನ್ ಘೋಷಿಸಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ತಾಲಿಬಾನ್ ಆಡಳಿತ(Taliban Govt.) ಜಾರಿಯಾದರೆ ತಮಗೆ ಉಳಿಗಾಲವಿಲ್ಲವೆಂದು ಭೀತಿಗೊಳಗಾಗಿರುವ ಸಾವಿರಾರು ಅಫ್ಘಾನ್ ಪ್ರಜೆಗಳು ದೇಶ ತೊರೆಯುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News