ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಅಬ್ಬರ

  • Zee Media Bureau
  • Apr 27, 2023, 03:36 PM IST

ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಚುನಾವಣಾ ‌ಪ್ರಚಾರದ ವೇಳೆ ಹಲವು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದು, ತಾಲೂಕಿನ ದೊಡ್ಡಕಿರುಗಂಬಿ ಗ್ರಾಮದ ದಲಿತರೊಬ್ಬರ ಗುಡಿಸಿಲಿನಲ್ಲಿ ಊಟ ಮಾಡಿ ತಮ್ಮ‌ ಸರಳತೆ ಮೆರೆದಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಯಾಗಿರೋ ಪ್ರದೀಪ್ ಈಶ್ವರ್, ತಾಲೂಕಿನಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ದಿನೇ ದಿನೆ ತಮ್ಮ ವರ್ಚಸ್ಸು ಬೆಳೆಸಿಕೊಂಡು ಆರೋಗ್ಯ ಸಚಿವರಿಗೆ ಸೆಡ್ಡು ಹೊಡೆಯಲು ಸಾಕಷ್ಟು ತಯಾರಿ ನಡೆಸಿಕೊಂಡು ಬಂದಿದ್ದಾರೆ. ಇನ್ನು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಜನತೆ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದು, ಗೆಲುವಿನ ಮೆಟ್ಟಿಲಿಗೆ ಬಹಳಷ್ಟು ಹತ್ತಿರದಲ್ಲಿದ್ದಾರೆ ಪ್ರದೀಪ್ ಈಶ್ವರ್.

Trending News