ಪ್ರಧಾನಿಗೆ ಬೆದರಿಕೆ ಹಾಕಿರೋದು ತಪ್ಪು

  • Zee Media Bureau
  • Jul 1, 2022, 04:33 PM IST

ಉದಯಪುರದಲ್ಲಿ ನಡೆದ ಟೈಲರ್‌ ಹತ್ಯೆಯನ್ನು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಖಂಡಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ಧರ್ಮದ ಹೆಸರಲ್ಲಿ ಕೆಲ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ನಾನು ವೈಯಕ್ತಿಕವಾಗಿ ಇದನ್ನು ಖಂಡಿಸುತ್ತೇನೆ. ಪ್ರಧಾನಿ ಮೋದಿ ಎಲ್ಲ ಧರ್ಮದ ಸೌಹಾರ್ದತೆ ಸಭೆ ಮಾಡೋ ಅವಶ್ಯಕತೆ ಇದೆ. ಪ್ರಧಾನಿ ಹತ್ಯೆ ಮಾಡ್ತೀನಿ ಅನ್ನೋದು ತಪ್ಪು. ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ರಾಯರೆಡ್ಡಿ ಆಗ್ರಹಿಸಿದ್ದಾರೆ.

Trending News