“ನಾನ್’ಸೆನ್ಸ್.. ಇದೆಲ್ಲಾ ಮೂರ್ಖತನ, ಮೌಢ್ಯ”- ಭಾರತ ಫೈನಲ್ ಪ್ರವೇಶಿಸುತ್ತಿದ್ದಂತೆ ಸುನಿಲ್ ಗವಾಸ್ಕರ್ ತಾಳ್ಮೆ ಕಳೆದುಕೊಂಡು ಹೀಗಂದಿದ್ದೇಕೆ?

Sunil Gavaskar Statement on Pitch: 2023ರ ವಿಶ್ವಕಪ್‌’ನ ಸೆಮಿಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಬುಧವಾರ ಇದೇ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗವಾಸ್ಕರ್ ಅವರು, ಪಿಚ್ ಬದಲಾವಣೆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಆರೋಪಗಳನ್ನು ತಳ್ಳಿಹಾಕಿದರು.

Written by - Bhavishya Shetty | Last Updated : Nov 16, 2023, 05:27 PM IST
    • ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ವಿಶ್ವಕಪ್‌ ಸೆಮಿಫೈನಲ್ ಪಂದ್ಯ
    • ಶ್ರೇಷ್ಠ ಬ್ಯಾಟ್ಸ್‌’ಮನ್ ಸುನಿಲ್ ಗವಾಸ್ಕರ್ ಕಟುವಾಗಿ ಉತ್ತರ
    • ಪಿಚ್ ಬದಲಾವಣೆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಆರೋಪಗಳನ್ನು ತಳ್ಳಿಹಾಕಿದ ಗವಾಸ್ಕರ್
“ನಾನ್’ಸೆನ್ಸ್.. ಇದೆಲ್ಲಾ ಮೂರ್ಖತನ, ಮೌಢ್ಯ”- ಭಾರತ ಫೈನಲ್ ಪ್ರವೇಶಿಸುತ್ತಿದ್ದಂತೆ ಸುನಿಲ್ ಗವಾಸ್ಕರ್ ತಾಳ್ಮೆ ಕಳೆದುಕೊಂಡು ಹೀಗಂದಿದ್ದೇಕೆ? title=
Sunil Gavaskar

Sunil Gavaskar Statement: ವಾಂಖೆಡೆ ಸ್ಟೇಡಿಯಂನ ಪಿಚ್ ಅನ್ನು ಪ್ರಶ್ನಿಸುವ ಜನರಿಗೆ ಶ್ರೇಷ್ಠ ಬ್ಯಾಟ್ಸ್‌’ಮನ್ ಸುನಿಲ್ ಗವಾಸ್ಕರ್ ಕಟುವಾಗಿ ಉತ್ತರ ಕೊಟ್ಟಿದ್ದಾರೆ. 2023ರ ವಿಶ್ವಕಪ್‌’ನ ಸೆಮಿಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಬುಧವಾರ ಇದೇ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗವಾಸ್ಕರ್ ಅವರು, ಪಿಚ್ ಬದಲಾವಣೆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಆರೋಪಗಳನ್ನು ತಳ್ಳಿಹಾಕಿದರು.

ಈ ಪಂದ್ಯದಲ್ಲಿ ಭಾರತ 70 ರನ್‌’ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತ್ತು.

ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದಿದ್ದು ಶಮಿ, ಅಯ್ಯರ್, ಕೊಹ್ಲಿಯಿಂದಲ್ಲ.. ಈತನಿಂದ; ಈತನೇ ಭಾರತದ ಶಕ್ತಿ!!

ಭಾರತದ ವಿಜಯದ ನಂತರ ಪ್ರಸಾರಕರೊಂದಿಗೆ ಮಾತನಾಡಿದ ಅವರು, ಪಿಚ್ ಟ್ಯಾಂಪರಿಂಗ್ ಆರೋಪಗಳನ್ನು ಮಾಡುವವರು ಮೂರ್ಖರು. ಈ ಪಿಚ್‌ನಲ್ಲಿ 724 ರನ್ ಗಳಿಸಿದ್ದಾರೆ. ಈಗಲಾದರೂ ಈ ನಾನ್ ಸೆನ್ಸ್ ಮಾತುಗಳನ್ನು ನಿಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಗರಂ ಆಗಿ ಹೇಳಿದ್ದಾರೆ.

ಪಿಚ್ ಬಗ್ಗೆ ವಿವಾದ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೂ ಮುನ್ನ ಪಿಚ್ ಬದಲಾವಣೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಎದ್ದಿದ್ದವು. ಭಾರತ ತಂಡಕ್ಕೆ ನೆರವಾಗಲು ಬುಧವಾರದ ಪಂದ್ಯದಲ್ಲಿ ಬಳಸಿದ ಪಿಚ್’ನಲ್ಲಿಯೇ ಪಂದ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಇದಕ್ಕೂ ಮುನ್ನ ವಿಶ್ವಕಪ್‌’ನ ಸೆಮಿಫೈನಲ್ ಪಂದ್ಯವನ್ನು ಹೊಸ ಪಿಚ್‌’ನಲ್ಲಿ ಆಡಲು ನಿರ್ಧರಿಸಲಾಗಿತ್ತು.

ವಿಶ್ವಕಪ್ ಪಿಚ್‌’ಗಳನ್ನು ಸಿದ್ಧಪಡಿಸಲು ಸ್ಥಳೀಯ ಪಿಚ್ ಕ್ಯುರೇಟರ್‌’ಗಳೊಂದಿಗೆ ಕೆಲಸ ಮಾಡುತ್ತಿರುವ ಐಸಿಸಿ ಪಿಚ್ ಸಲಹೆಗಾರ ಆಂಡಿ ಅಟ್ಕಿಸನ್ ಅವರು ಪಿಚ್ ಬದಲಾವಣೆಯಿಂದ ಅಸಮಾಧಾನಗೊಂಡಿದ್ದಾರೆ ಎಂದು ಬ್ರಿಟಿಷ್ ಪತ್ರಿಕೆಯೊಂದು ವರದಿ ಮಾಡಿತ್ತು. ಈ ಬೆನ್ನಲ್ಲೇ ಸುನಿಲ್ ಗವಾಸ್ಕರ್ ಅವರು ಇಂಥಾ ಹೇಳಿಕೆ ನೀಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಗವಾಸ್ಕರ್ ಮಾತನಾಡಿದ್ದು, 'ಇದು ಬ್ಯಾಟಿಂಗ್‌’ಗೆ ಉತ್ತಮ ಪಿಚ್ ಆಗಿತ್ತು. ಸೆಮಿಫೈನಲ್ ಪಂದ್ಯದಲ್ಲಿ 730 ರನ್ ಗಳಿಸಲಾಗಿದೆ. ಪಿಚ್ ಅನ್ನು ಬದಲಾಯಿಸಲಾಗಿದೆ, ಈ ಮೂಲಕ ಭಾರತೀಯ ಬೌಲರ್‌ಗಳಿಗೆ ಸಹಾಯ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದ ಎಲ್ಲಾ ಮೂರ್ಖರು ಇನ್ಮುಂದೆ ಬಾಯಿ ಮುಚ್ಚುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಖ್ಯಾಂಶದಲ್ಲಿ ಕೊಹ್ಲಿ, ಶಮಿ ಇದ್ದರೂ… ಭಾರತ ತಂಡದ ನಿಜವಾದ ಹೀರೋ ಈತನೇ: ಇಂಗ್ಲೆಂಡ್ ಆಟಗಾರ

“ಭಾರತವನ್ನು ಟಾರ್ಗೆಟ್ ಮಾಡುವುದನ್ನು ಮೊದಲು ನಿಲ್ಲಿಸಿ. ಇದು ಸಂಪೂರ್ಣ ಅಸಂಬದ್ಧ.  ಒಂದು ವೇಳೆ ಬದಲಾವಣೆ ಮಾಡಿದ್ದರೂ ಕೂಡ ಟಾಸ್’ಗೆ ಮುನ್ನ ಮಾಡಬೇಕಿತ್ತು. ಆಮೇಲೆ ಮಾಡಲು ಸಾಧ್ಯವಾಗುವುದಿಲ್ಲ. ಒಂದು ಇನ್ನಿಂಗ್ಸ್ ನಂತರ ಅದನ್ನು ಬದಲಾಯಿಸಲಾಗುವುದಿಲ್ಲ. ಟಾಸ್ ಬಳಿಕವೂ ಬದಲಾಯಿಸಲಿಲ್ಲ. ನೀವು ಉತ್ತಮ ತಂಡವಾಗಿದ್ದರೆ, ನೀವು ಪಿಚ್‌’ನಲ್ಲಿ ಆಡುತ್ತೀರಿ ಮತ್ತು ಗೆಲ್ಲುತ್ತೀರಿ. ಪಿಚ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಈ ಪಿಚ್ ಮುಗಿಯುತ್ತಿದ್ದಂತೆ ಈಗ ಅಹಮದಾಬಾದ್ ಪಿಚ್ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಎರಡನೇ ಸೆಮಿಫೈನಲ್ ಇನ್ನೂ ನಡೆದಿಲ್ಲ. ಇದು ನಾನ್ ಸೆನ್ಸ್, ಮೌಢ್ಯ” ಎಂದು ಜರಿದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News