“ಈತನೇ ನಮ್ಮ ತಂಡದ ಶಕ್ತಿ, ಈತನಿಂದಲೇ ಭಾರತ ಫೈನಲ್ ತಲುಪಿದೆ”- ರೋಹಿತ್ ಶರ್ಮಾ ಹೀಗೆ ಹೇಳಿದ್ದು ಯಾರ ಬಗ್ಗೆ ಗೊತ್ತಾ?

World Cup 2023: ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ತಮ್ಮ ಆಟಗಾರರನ್ನು ಆಸೀಸ್ ವಿರುದ್ಧ ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆ ಆಟಗಾರರು 2007ರಿಂದ ಇದುವರೆಗೆ ಅಂದರೆ 16 ವರ್ಷಗಳಿಂದ ಕೋಚ್ ಮನದಲ್ಲಿರುವ ನೋವನ್ನು ಮರೆಮಾಚಿ, ಅಂದು ಅಂದುಕೊಂಡಿದ್ದನ್ನು ಇಂದು ಸಾಧಿಸಿ ತೋರಿಸಲು ಹೆಜ್ಜೆಯನ್ನಿಡುತ್ತಿದ್ದಾರೆ.

Written by - Bhavishya Shetty | Last Updated : Nov 18, 2023, 10:39 PM IST
    • ರಾಹುಲ್ ದ್ರಾವಿಡ್ ಅವರು 2007ರ ವಿಶ್ವಕಪ್‌’ನಲ್ಲಿ ತಂಡದ ನಾಯಕರಾಗಿದ್ದರು.
    • ಆದರೆ ಅಂದು ಭಾರತ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿತ್ತು.
    • ಆದರೆ ಅಂದು ಅಸಾಧ್ಯವಾದ ಸಾಧನೆಯನ್ನು ಇಂದು ರಾಹುಲ್ ಸಾಧ್ಯ ಮಾಡಲು ಹೊರಟಿದ್ದಾರೆ.
“ಈತನೇ ನಮ್ಮ ತಂಡದ ಶಕ್ತಿ, ಈತನಿಂದಲೇ ಭಾರತ ಫೈನಲ್ ತಲುಪಿದೆ”- ರೋಹಿತ್ ಶರ್ಮಾ ಹೀಗೆ ಹೇಳಿದ್ದು ಯಾರ ಬಗ್ಗೆ ಗೊತ್ತಾ?  title=
rohit sharma

World Cup 2023: ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು 2007ರ ವಿಶ್ವಕಪ್‌’ನಲ್ಲಿ ತಂಡದ ನಾಯಕರಾಗಿದ್ದರು. ಆದರೆ ಅಂದು ಭಾರತ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿತ್ತು. ಆದರೆ ಅಂದು ಅಸಾಧ್ಯವಾದ ಸಾಧನೆಯನ್ನು ಇಂದು ರಾಹುಲ್ ಸಾಧ್ಯ ಮಾಡಲು ಹೊರಟಿದ್ದಾರೆ.

ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ತಮ್ಮ ಆಟಗಾರರನ್ನು ಆಸೀಸ್ ವಿರುದ್ಧ ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆ ಆಟಗಾರರು 2007ರಿಂದ ಇದುವರೆಗೆ ಅಂದರೆ 16 ವರ್ಷಗಳಿಂದ ಕೋಚ್ ಮನದಲ್ಲಿರುವ ನೋವನ್ನು ಮರೆಮಾಚಿ, ಅಂದು ಅಂದುಕೊಂಡಿದ್ದನ್ನು ಇಂದು ಸಾಧಿಸಿ ತೋರಿಸಲು ಹೆಜ್ಜೆಯನ್ನಿಡುತ್ತಿದ್ದಾರೆ.

ಇದನ್ನೂ ಓದಿ: ಪ್ರಕೃತಿಯಲ್ಲೇ ಸಿಗುವ ಈ ಎರಡು ವಸ್ತು ಸಾಕು..: ಬಿಳಿಕೂದಲನ್ನು 5 ನಿಮಿಷದಲ್ಲಿ ನೈಸರ್ಗಿಕವಾಗಿ ಕಪ್ಪಾಗಿಸಬಹುದು!

ನಾಳೆಯೇ ದ್ರಾವಿಡ್ ಒಪ್ಪಂದದ ಕೊನೆಯ ದಿನ!

ಅಚ್ಚರಿ ಎನ್ನುವಂತೆ ಭಾರತೀಯ ಕೋಚ್ ಆಗಿ ಅವರ ಎರಡು ವರ್ಷಗಳ ಒಪ್ಪಂದದ ಕೊನೆಯ ದಿನವೂ ಭಾನುವಾರ ಇರಲಿದೆ. ಯುಎಇಯಲ್ಲಿ 2021 ರ ಟಿ 20 ವಿಶ್ವಕಪ್‌’ನ ಗುಂಪು ಲೀಗ್‌’ನಿಂದ ತಂಡವು ನಿರ್ಗಮಿಸಿದ ನಂತರ ಅವರ ಒಪ್ಪಂದವು ಪ್ರಾರಂಭವಾಗಿತ್ತು.

ಟೀಮ್ ಇಂಡಿಯಾದ ಯಶಸ್ಸಿನ ನಿಜವಾದ ಹೀರೋ ಇವರೇ…

2007ರ ವಿಶ್ವಕಪ್‌’ನಲ್ಲಿನ ನಿರಾಶಾದಾಯಕ ಪ್ರದರ್ಶನದ ನಂತರವೂ ಅವರು ನಾಯಕತ್ವವನ್ನು ಬಿಟ್ಟಿರಲಿಲ್ಲ. ಆದರೆ ಕೆಲವು ತಿಂಗಳ ನಂತರ ನಡೆದ ಇಂಗ್ಲೆಂಡ್‌’ನಲ್ಲಿ ಸರಣಿಯಲ್ಲಿ ಗೆಲುವು ಸಾಧಿಸಿ, ಆ ಬಳಿಕ ತಮ್ಮ ನಾಯಕತ್ವದಿಂದ ಕೆಳಗಿಳಿದರು. ಇನ್ನು ಈ ಬಾರಿ ವಿಶ್ವಕಪ್’ನಲ್ಲಿ ಭಾರತ ಗೆದ್ದರೆ ಬಿಸಿಸಿಐ ಅವರಿಗೆ ಹೊಸ ಗುತ್ತಿಗೆ ನೀಡಬಹುದು.

ಇನ್ನು ರಾಹುಲ್ ಅವರು ಕೋಚ್ ಆದಾಗ 48 ವರ್ಷ ವಯಸ್ಸಾಗಿತ್ತು. ಆದರೆ ಆ ಸಂದರ್ಭದಲ್ಲಿ 'ಸ್ಯಾಕ್ ದ್ರಾವಿಡ್' ಹ್ಯಾಶ್‌ಟ್ಯಾಗ್ ಹೆಚ್ಚು ಟ್ರೆಂಡಿಂಗ್ ಆಗಿತ್ತು. ಸಾವಿರಾರು ಟೀಕೆಗೆ ಗುರಿಯಾದರು. ಅಂದು ಯಾಕಾದ್ರೂ ಈತನನ್ನು ಆಯ್ಕೆ ಮಾಡಿದ್ದರೋ ಎಂದವರು ಇಂದು ಈತನಿಂದಲೇ ಭಾರತ ವಿಶ್ವಕಪ್ ಫೈನಲ್ ಪ್ರವೇಶಿಸಿದೆ ಅನ್ನುತ್ತಿದ್ದಾರೆ. ಇದಲ್ಲವೇ ನಿಜವಾದ ಸಾಧನೆ ಎಂದರೆ!!

ಇದನ್ನೂ ಓದಿ: ವಿಶ್ವಕಪ್ ಫೈನಲ್’ಗೆ ಭಾರತದ ಪ್ಲೇಯಿಂಗ್ 11 ಪ್ರಕಟಿಸಿದ ರೋಹಿತ್ ಶರ್ಮಾ! ಈ ಆಟಗಾರರಿಗೆ ಖಚಿತ ಸ್ಥಾನ ಎಂದ ನಾಯಕ

ರೋಹಿತ್ ಶರ್ಮಾ ಹೇಳಿಕೆ…

ರಾಹುಲ್ ದ್ರಾವಿಡ್ ಅವರ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, “ಇದುವರೆಗಿನ ನಮ್ಮ ಪಯಣದಲ್ಲಿ ರಾಹುಲ್ ದ್ರಾವಿಡ್ ಪಾತ್ರ ಬಹಳ ವಿಶೇಷವಾಗಿದೆ. ಇವರು ನಮ್ಮ ತಂಡದ ಶಕ್ತಿ, ಇವರಿಂದಲೇ ಭಾರತ ಫೈನಲ್ ತಲುಪಿದೆ. ರಾಹುಲ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕ್ರಿಕೆಟ್ ಆಡಿದ ರೀತಿ ಮತ್ತು ಇಲ್ಲಿರುವ ರೀತಿ ತದ್ವಿರುದ್ಧ. ನಮಗೆ ಅವರು ಸಂಪೂರ್ಣವಾಗಿ ಸ್ವತಂತ್ರ ನೀಡುವುದು ವಿಶೇಷವಾಗಿ ಉಲ್ಲೇಖಿಸಬೇಕಾದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News