10 ಎಸೆತಕ್ಕೆ 3 ವಿಕೆಟ್ ಢಮಾರ್…! ಜಡೇಜಾ ಸ್ಪಿನ್ನಿಂಗ್ ಅರ್ಥವಾಗದೆ ಕಂಗಾಲಾದ ಕಾಂಗಾರೂ ಪಡೆ

Ravindra Jadeja, India vs Australia: ಭಾರತ ತಂಡ ODI ವಿಶ್ವಕಪ್’ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ರೋಹಿತ್ ಶರ್ಮಾ ನಾಯಕತ್ವದ ತಂಡ ಚೆನ್ನೈನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಆಗಮಿಸಿದೆ.

Written by - Bhavishya Shetty | Last Updated : Oct 8, 2023, 07:09 PM IST
    • ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತು
    • ಟೀಂ ಇಂಡಿಯಾದ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ
    • ಆಸ್ಟ್ರೇಲಿಯಾದ ಇನ್ನಿಂಗ್ಸ್‌’ನ ಅಂತ್ಯದ ನಂತರ ಮಾತನಾಡಿದ ರವೀಂದ್ರ ಜಡೇಜಾ
10 ಎಸೆತಕ್ಕೆ 3 ವಿಕೆಟ್ ಢಮಾರ್…! ಜಡೇಜಾ ಸ್ಪಿನ್ನಿಂಗ್ ಅರ್ಥವಾಗದೆ ಕಂಗಾಲಾದ ಕಾಂಗಾರೂ ಪಡೆ title=
Ravindra Jadeja

Ravindra Jadeja, India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬಲಿಷ್ಠ ಆಲ್’ರೌಂಡರ್ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ: ಈ ಬಾರಿ ವಿಶ್ವಕಪ್ ಟ್ರೋಫಿ ಗೆಲ್ಲೋದು ಈ ತಂಡವೆಂದು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

ಭಾರತ ತಂಡ ODI ವಿಶ್ವಕಪ್’ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ರೋಹಿತ್ ಶರ್ಮಾ ನಾಯಕತ್ವದ ತಂಡ ಚೆನ್ನೈನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಆಗಮಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಓಪನಿಂಗ್ ಮಾಡಿದರು. ಆದರೆ ಖಾತೆ ತೆರೆಯದೆ ಇನಿಂಗ್ಸ್‌’ನ ಮೂರನೇ ಓವರ್‌’ನ ಎರಡನೇ ಎಸೆತದಲ್ಲಿ ಮಾರ್ಷ್ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ನಂತರ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಜೊತೆಯಾಟವಾಡಿ ರನ್ ಸೇರಿಸಲು ಮುಂದಾದರು.

ಜಡೇಜಾ ಮಾಸ್ಟರ್-ಕ್ಲಾಸ್:

ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಇನಿಂಗ್ಸ್’ನ 28ನೇ ಓವರ್’ಗೆ ಬಾಲ್’ನ್ನು ಸ್ಪಿನ್ನರ್ ರವೀಂದ್ರ ಜಡೇಜಾಗೆ ನೀಡಿದರು. ಮೊದಲ ಎಸೆತದಲ್ಲಿ ಸ್ಟೀವ್ ಸ್ಮಿತ್ ಅವರನ್ನು ಬೌಲ್ಡ್ ಮಾಡಿದರು. 71 ಎಸೆತಗಳನ್ನು ಎದುರಿಸಿದ ಸ್ಮಿತ್ 5 ಬೌಂಡರಿಗಳ ನೆರವಿನಿಂದ 46 ರನ್ ಸೇರಿಸಿದ್ದರು.

ಒಂದು ಓವರ್‌’ನಲ್ಲಿ 2 ವಿಕೆಟ್:

ಇದಾದ ಬಳಿಕ ಜಡೇಜಾ ತಮ್ಮ ಮುಂದಿನ (30ನೇ) ಓವರ್‌’ನಲ್ಲಿ 2 ವಿಕೆಟ್ ಪಡೆದರು. ಎರಡನೇ ಎಸೆತದಲ್ಲಿ ಕೆಎಲ್ ರಾಹುಲ್‌’ಗೆ ಕ್ಯಾಚ್ ನೀಡಿ ಮಾರ್ನಸ್ ಲ್ಯಾಬುಸ್ಚಾಗ್ನೆ (27) ವಿಕೆಟ್ ಒಪ್ಪಿಸಿದರು. ಲಬುಸ್ಚಾಗ್ನೆ 41 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 27 ರನ್ ಸೇರಿಸಿದರು. ಡಿಆರ್‌ಎಸ್‌ ಕೂಡ ತೆಗೆದುಕೊಂಡರೂ ನಿರ್ಧಾರ ಬೌಲರ್‌ ಪರವಾಗಿತ್ತು. ನಂತರ ಅಲೆಕ್ಸ್ ಕ್ಯಾರಿ (0) ಅವರನ್ನು ನಾಲ್ಕನೇ ಎಸೆತದಲ್ಲಿ ಜಡೇಜಾ ಎಲ್ಬಿಡಬ್ಲ್ಯುಗೆ ಔಟ್ ಮಾಡಿದರು. ಈ ಮೂಲಕ 30 ಓವರ್‌’ಗಳ ನಂತರ ಆಸ್ಟ್ರೇಲಿಯಾ ಸ್ಕೋರ್ 5 ವಿಕೆಟ್‌’ಗೆ 119 ರನ್ ಆಗಿತ್ತು.

ಇದನ್ನೂ ಓದಿ: Zodiac Signs: ಇತರರ ಯಶಸ್ಸನ್ನು ಕಂಡು ಭಾರೀ ಅಸೂಯೆ ಪಡ್ತಾರಂತೆ ಈ ರಾಶಿಯವರು!

ರವೀಂದ್ರ ಜಡೇಜಾ ಹೇಳಿಕೆ:

ಆಸ್ಟ್ರೇಲಿಯಾದ ಇನ್ನಿಂಗ್ಸ್‌’ನ ಅಂತ್ಯದ ನಂತರ ರವೀಂದ್ರ ಜಡೇಜಾ ಮಾತನಾಡಿ, “ನಾನು ಐಪಿಎಲ್‌’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌’ಕೆ) ಪರ ಆಡುತ್ತೇನೆ. ಆದ್ದರಿಂದ ನನಗೆ ಇಲ್ಲಿನ ಪರಿಸ್ಥಿತಿಗಳು ಚೆನ್ನಾಗಿ ತಿಳಿದಿವೆ. ಚೆನ್ನೈ ಪ್ರೇಕ್ಷಕರು ಯಾವಾಗಲೂ ನಮ್ಮ ಕ್ರಿಕೆಟ್ ಅನ್ನು ಬೆಂಬಲಿಸುತ್ತಾರೆ, ಅವರು ಉತ್ತಮ ಸಂಖ್ಯೆಯಲ್ಲಿ ಬರುತ್ತಾರೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News