ಟಿ20 ವಿಶ್ವಕಪ್’ನಲ್ಲಿ ಈ ಇಬ್ಬರು ಆಟಗಾರರಿಗೆ ಸ್ಥಾನ! ಅಫ್ಘನ್ ವಿರುದ್ಧ ಗೆಲುವಿನ ಬೆನ್ನಲ್ಲೇ ರೋಹಿತ್ ಶರ್ಮಾ ಹೇಳಿಕೆ

Rohit Sharma on Yashasvi Jaiswal and Shivam Dube: ರೋಹಿತ್ ಶರ್ಮಾ ತಮ್ಮ T20 ವೃತ್ತಿಜೀವನದ 150ನೇ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಇಂದೋರ್‌’ನಲ್ಲಿ ಆಡಿದರು, ಈ ಮೂಲಕ ವಿಶ್ವ ಕ್ರಿಕೆಟ್’ನಲ್ಲಿ ನೂತನ ಮೈಲಿಗಲ್ಲನ್ನು ತಲುಪಿದ್ದಾರೆ ಕ್ಯಾಪ್ಟನ್.

Written by - Bhavishya Shetty | Last Updated : Jan 15, 2024, 06:37 AM IST
    • ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾಗೆ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು
    • ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಬಿರುಸಿನ ಇನ್ನಿಂಗ್ಸ್‌
    • ಇದರೊಂದಿಗೆ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಟಿ20 ವಿಶ್ವಕಪ್’ನಲ್ಲಿ ಈ ಇಬ್ಬರು ಆಟಗಾರರಿಗೆ ಸ್ಥಾನ! ಅಫ್ಘನ್ ವಿರುದ್ಧ ಗೆಲುವಿನ ಬೆನ್ನಲ್ಲೇ ರೋಹಿತ್ ಶರ್ಮಾ ಹೇಳಿಕೆ title=
Rohit Sharma

Rohit Sharma on Yashasvi Jaiswal and Shivam Dube: ಭಾನುವಾರ ಇಂದೋರ್‌’ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರ ಬಿರುಸಿನ ಇನ್ನಿಂಗ್ಸ್‌'ನಿಂದ ಭಾರತ ತಂಡವು ನೀಡಿದ ಗುರಿಯನ್ನು ಸುಲಭವಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಮಕರ ಸಂಕ್ರಾಂತಿ 2024ರ ರಾಶಿಫಲ: ಇಂದು ಈ ರಾಶಿಗೆ ಬರೀ ಶುಭಶಕುನವೇ…ಅದೃಷ್ಟ ತಾನಾಗೇ ಹುಡುಕಿ ಬರುತ್ತೆ

ರೋಹಿತ್ ಶರ್ಮಾ ತಮ್ಮ T20 ವೃತ್ತಿಜೀವನದ 150ನೇ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಇಂದೋರ್‌’ನಲ್ಲಿ ಆಡಿದರು, ಈ ಮೂಲಕ ವಿಶ್ವ ಕ್ರಿಕೆಟ್’ನಲ್ಲಿ ನೂತನ ಮೈಲಿಗಲ್ಲನ್ನು ತಲುಪಿದ್ದಾರೆ ಕ್ಯಾಪ್ಟನ್. ಮತ್ತೊಂದೆಡೆ ಈ ಸಂತಸದ ಸಂದರ್ಭದಲ್ಲಿ ಮಾತನಾಡಿದ ಅವರು, “ಗೆಲುವಿನಲ್ಲಿ ಖಂಡಿತವಾಗಿಯೂ ಸಂತೋಷವಿದೆ. ನಮ್ಮ ಆಟಗಾರರು ತೋರಿದ ಪ್ರದರ್ಶನ ಹೆಮ್ಮೆಯ ವಿಷಯವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ನಾವು ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿದ್ದೇವೆ” ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ತಂಡದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮತ್ತು ಶಕ್ತಿಶಾಲಿ ಆಲ್‌ ರೌಂಡರ್ ಶಿವಂ ದುಬೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಯಶಶ್ವಿ ಅವರು ಟಿ20 ಮಾತ್ರವಲ್ಲದೆ ಟೆಸ್ಟ್‌’ನಲ್ಲೂ ಏನು ಮಾಡಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ಪ್ರತಿಭೆ ಮಾತ್ರವಲ್ಲದೆ ಅವರ ಶಾಟ್ ಆಯ್ಕೆಯೂ ಅತ್ಯುತ್ತಮವಾಗಿದೆ. ಶಿವಂ ದುಬೆ ಕೂಡ ಸ್ಪಿನ್ನರ್‌’ಗಳ ಮೇಲೆ ದಾಳಿ ನಡೆಸುವ ರೀತಿ ಶ್ಲಾಘನೀಯ” ಎಂದಿದ್ದಾರೆ.

ಇದನ್ನೂ ಓದಿ: ಫಿನಾಲೆ ಸಮೀಪದಲ್ಲೇ ‘ಬಿಗ್’ ಟ್ವಿಸ್ಟ್.. 8 ಸ್ಪರ್ಧಿಗಳು ಉಳಿದಿದ್ದರೂ ಈ ವಾರ ಎಲಿಮಿನೇಷನ್ ಕ್ಯಾನ್ಸಲ್ ಆಗೋದಕ್ಕೆ ಇದುವೇ ಕಾರಣ!

ಅಂದಹಾಗೆ ಯಶಸ್ವಿ ಜೈಸ್ವಾಲ್ 34 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌’ನಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್‌’ಗಳ ಸಹಾಯದಿಂದ 68 ರನ್ ಗಳಿಸಿದರು ಎಂಬುದು ಗಮನಾರ್ಹ. ಮತ್ತೊಂದೆಡೆ, ಶಿವಂ ದುಬೆ 32 ಎಸೆತಗಳಲ್ಲಿ 63 ರನ್ ಗಳಿಸಿ ಅಜೇಯ ಅರ್ಧಶತಕವನ್ನು ಬಾರಿಸಿದರು. ಈ ಸರಣಿಯಲ್ಲಿ ಇದು ಅವರ ಎರಡನೇ ಅರ್ಧಶತಕವಾಗಿದೆ. ಈ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿದೆ. ಈ ಇಬ್ಬರು ಆಟಗಾರರ ಪರಾಕ್ರಮ ಹೀಗೆ ಮುಂದುವರೆದರೆ ಜೂನ್ ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್’ಗೆ ಆಯ್ಕೆಯಾಗೋದು ಖಚಿತ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News