“ರವೀಂದ್ರ ಜಡೇಜಾಗೂ ನಮಗೂ ಯಾವುದೇ ಸಂಬಂಧವಿಲ್ಲ, ಮಾತು ಬಿಟ್ಟು ವರ್ಷಗಳೇ ಕಳೆದಿವೆ”- ಜಡ್ಡು ತಂದೆಯ ಶಾಕಿಂಗ್ ಹೇಳಿಕೆ ವೈರಲ್

Ravindra Jadeja Father Statement: ಮಾಧ್ಯಮ ವರದಿಗಳ ಪ್ರಕಾರ, ಅನಿರುದ್ಧ್ ಸಿಂಗ್ ಜಡೇಜಾ ಅವರು ತಮ್ಮ ಮಗ ರವೀಂದ್ರ ಮತ್ತು ಸೊಸೆ ರಿವಾಬಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Feb 9, 2024, 01:00 PM IST
    • ಟೀಂ ಇಂಡಿಯಾದ ಸ್ಟಾರ್ ಆಲ್‌ ರೌಂಡರ್ ರವೀಂದ್ರ ಜಡೇಜಾ
    • ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 15 ವರ್ಷಗಳನ್ನು ಪೂರೈಸಿದ ಜಡ್ಡು
    • ಆಘಾತಕಾರಿ ಸಂಗತಿಗಳನ್ನು ಬಿಚ್ಚಿಟ್ಟ ಜಡೇಜಾ ತಂದೆ ಅನಿರುದ್ಧ್ ಸಿಂಗ್
“ರವೀಂದ್ರ ಜಡೇಜಾಗೂ ನಮಗೂ ಯಾವುದೇ ಸಂಬಂಧವಿಲ್ಲ, ಮಾತು ಬಿಟ್ಟು ವರ್ಷಗಳೇ ಕಳೆದಿವೆ”- ಜಡ್ಡು ತಂದೆಯ ಶಾಕಿಂಗ್ ಹೇಳಿಕೆ ವೈರಲ್ title=
Ravindra Jadeja Father Statement

Ravindra Jadeja Father Statement: ಟೀಂ ಇಂಡಿಯಾದ ಸ್ಟಾರ್ ಆಲ್‌ ರೌಂಡರ್ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಈ ನಡುವೆ ಮಾಧ್ಯಮವೊಂದರಲ್ಲಿ ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿಂಗ್ ಜಡೇಜಾ ಹಲವು ಆಘಾತಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: “ಕೊಹ್ಲಿ-ಅನುಷ್ಕಾ 2ನೇ ಮಗು ವಿಚಾರದಲ್ಲಿ ನಾನು ಸುಳ್ಳು ಹೇಳಿದೆ"- ಯುಟರ್ನ್ ಹೊಡೆದ ಎಬಿಡಿ

ಮಾಧ್ಯಮ ವರದಿಗಳ ಪ್ರಕಾರ, ಅನಿರುದ್ಧ್ ಸಿಂಗ್ ಜಡೇಜಾ ಅವರು ತಮ್ಮ ಮಗ ರವೀಂದ್ರ ಮತ್ತು ಸೊಸೆ ರಿವಾಬಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. “ಅವರು ನಮ್ಮನ್ನು ಕರೆಯುವುದಿಲ್ಲ, ನಾವು ಸಹ ಅವರನ್ನು ಕರೆಯುವುದಿಲ್ಲ. ನಮ್ಮ ನಡುವೆ ಯಾವುದೇ ಸಂಬಂಧವಿಲ್ಲ. 5 ವರ್ಷಗಳಿಂದ ಮೊಮ್ಮಗಳ ಮುಖವನ್ನೇ ನೋಡಿಲ್ಲ” ಎಂದಿದ್ದಾರೆ ಅನಿರುದ್ಧ್.

ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, “ಮದುವೆಯಾದ ಕೆಲವು ತಿಂಗಳ ನಂತರ ರಿವಾಬಾ ಎಲ್ಲವೂ ತನ್ನದಾಗಬೇಕು ಎಂದು ಹೇಳಲು ಪ್ರಾರಂಭಿಸಿದಳು. ಅದರಲ್ಲೂ ರಿವಾಬಾ ಅವರ ತಾಯಿ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಅವರ ಹಸ್ತಕ್ಷೇಪ ಅತಿಯಾಗಿತ್ತು” ಎಂದಿದ್ದಾರೆ.

ರವೀಂದ್ರ ಜಡೇಜಾ ಅವರ ತಂದೆ 10 ವರ್ಷಗಳಿಂದ ಜಾಮ್‌ನಗರದ 2BHK ಫ್ಲಾಟ್‌’ನಲ್ಲಿ ವಾಸಿಸುತ್ತಿದ್ದಾರೆ. “ರವೀಂದ್ರನನ್ನು ಕ್ರಿಕೆಟಿಗನನ್ನಾಗಿ ಮಾಡಲು ಶ್ರಮಿಸಿದ್ದೇವೆ. ಅವನ ಸಹೋದರಿ ರವೀಂದ್ರನಿನನ್ನು ತಾಯಿಯಂತೆ ನೋಡಿಕೊಂಡಳು. ಆದರೆ ಇದೀಗ ಅವನಿಗೂ ನೈನಾಗೂ ಸಂಬಂಧವೇ ಇಲ್ಲದಂತಾಗಿದೆ” ಎಂದು ಬೇಸರ ಹೊರಹಾಕಿದರು.

ಇದನ್ನೂ ಓದಿ: Virat Kohli: ಮುರಿದುಬಿತ್ತು ವಿರಾಟ್ ಕೊಹ್ಲಿಯ 8 ವರ್ಷಗಳ ಸಂಬಂಧ! ಸುದೀರ್ಘ ಒಡನಾಟ ಅಂತ್ಯಗೊಳಿಸಲು ಕಾರಣ ಇದುವೇ…

"ಅವನು ಮದುವೆಯಾಗದಿದ್ದರೆ ಚೆನ್ನಾಗಿತ್ತು"

ಮಾಧ್ಯಮ ವರದಿಗಳ ಪ್ರಕಾರ, ಅನಿರುದ್ಧ್ ಸಿಂಗ್ ಅವರು ನಮಗೆ ನಮಗೆ ಹಣದ ಅಗತ್ಯವಿಲ್ಲ. ಫಾರ್ಮ್, ಪಿಂಚಣಿ ಮತ್ತು ಹೋಟೆಲ್‌’ಗಳು ನಮ್ಮ ಬಳಿ ಇವೆ. ಸದ್ಯ ರವೀಂದ್ರ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆಕೆಯನ್ನು ಮದುವೆಯಾಗದೇ ಇದ್ದಿದ್ದರೆ ಚೆನ್ನಾಗಿತ್ತು. ನಾವು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News