MS Dhoni: ಸಾಮಾನ್ಯರಂತೆ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದ ಧೋನಿ: ಕ್ಯಾಪ್ಟನ್ ಕೂಲ್ ಸರಳತೆಗೆ ಫ್ಯಾನ್ಸ್ ಫಿದಾ! ವಿಡಿಯೋ

MS Dhoni Viral video: ಧೋನಿ ದೇವಿ ದರ್ಶನಕ್ಕಾಗಿ ರಾಂಚಿಯ 700 ವರ್ಷಗಳಷ್ಟು ಹಳೆಯದಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಧೋನಿಯನ್ನು ಕಂಡ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದ್ದಾರೆ.

Written by - Bhavishya Shetty | Last Updated : Feb 7, 2024, 02:07 PM IST
    • ದೇವಿ ದರ್ಶನಕ್ಕಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ ಧೋನಿ
    • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ
    • ಧೋನಿಯನ್ನು ಕಂಡ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದ್ದಾರೆ
MS Dhoni: ಸಾಮಾನ್ಯರಂತೆ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದ ಧೋನಿ: ಕ್ಯಾಪ್ಟನ್ ಕೂಲ್ ಸರಳತೆಗೆ ಫ್ಯಾನ್ಸ್ ಫಿದಾ! ವಿಡಿಯೋ title=
ms dhoni viral video

MS Dhoni Viral video: ಮೈದಾನದಲ್ಲಿರಲಿ ಅಥವಾ ಪಬ್ಲಿಕ್’ನಲ್ಲಾಗಲಿ ಧೋನಿ ಏನೇ ಮಾಡಿದರೂ ಸದ್ದು ಮಾಡೋದು ಕನ್ಫರ್ಮ್. ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಧೋನಿ ದೇವಿ ದರ್ಶನಕ್ಕಾಗಿ ರಾಂಚಿಯ 700 ವರ್ಷಗಳಷ್ಟು ಹಳೆಯದಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಧೋನಿಯನ್ನು ಕಂಡ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದ್ದಾರೆ.

ಇದನ್ನೂ ಓದಿ: Esha Deol divorce: ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಡಿವೋರ್ಸಗೆ ಇದೇ ಮೂಲ ಕಾರಣವಂತೆ!  

ಮಾಹಿ ಸಮಯ ಸಿಕ್ಕಾಗಲೆಲ್ಲಾ ತಾಯಿಯ ದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಾರೆ. ಇದೀಗ ಮತ್ತೊಮ್ಮೆ ಧೋನಿ ದೇವೂರಿ ದೇವಸ್ಥಾನಕ್ಕೆ ತೆರಳಿ ದೇವಿ ಆಶೀರ್ವಾದ ಪಡೆದಿದ್ದಾರೆ. ಅಂದಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಧೋನಿ ದೇವಸ್ಥಾನದ ಆವರಣದಲ್ಲಿ ಮಗುವಿನೊಂದಿಗೆ ಆಟವಾಡುತ್ತಿರುವುದನ್ನು ಸಹ ಕಾಣಬಹುದು.

 

ಐಪಿಎಲ್ 2024ಕ್ಕೆ ತಯಾರಿ ಆರಂಭ:

ಧೋನಿ ಪ್ರಸ್ತುತ ಐಪಿಎಲ್ 2024ಕ್ಕೆ ತಯಾರಿ ಆರಂಭಿಸಿದ್ದಾರೆ. ರಾಂಚಿ ಸ್ಟೇಡಿಯಂನಲ್ಲಿ ಮಾಹಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಈ ಬಾರಿಯ ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಬಿಸಿಸಿಐ ಶೀಘ್ರದಲ್ಲೇ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಇನ್ನೊಂದೆಡೆ ಈ ಬಾರಿ ಧೋನಿ ತಮ್ಮ ಕೊನೆಯ ಐಪಿಎಲ್ ಅನ್ನು ಆಟಗಾರನಾಗಿ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಒಂದು ಮಗು ಮಾಡಿಕೊಂಡರೆ 62 ಲಕ್ಷ ರೂಪಾಯಿಗಳ ಬೋನಸ್! ವಿಚಿತ್ರವಾಗಿದೆ  ಈ ಕಂಪನಿ ಉದ್ಯೋಗಿಗಳಿಗೆ ನೀಡುತ್ತಿರುವ ಆಫರ್ 

CSK ನ ಸಂಪೂರ್ಣ ತಂಡ:

ಎಂಎಸ್ ಧೋನಿ (ನಾಯಕ-ವಿ.ಕೀ), ಮೊಯಿನ್ ಅಲಿ, ದೀಪಕ್ ಚಹಾರ್, ಡೆವೊನ್ ಕಾನ್ವೇ (ವಿ.ಕೀ), ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗಾರ್ಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮತಿಶಾ ಪತಿರಾನ, ಅವ್ನಿಶ್ ರಾವ್ ಅರ್ವೇಲಿ ಮಿಚೆಲ್, ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಶೇಖ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಶಾರ್ದೂಲ್ ಠಾಕೂರ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಮಹೇಶ್ ತೀಕ್ಷಣ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News