/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ (Inida vs Australia) ಸರಣಿ ಗೆಲುವು ತೃಪ್ತಿಕರವಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ. ವಿರಾಟ್ ಈ ಗೆಲುವನ್ನು ಕೊನೆಯ ಸರಣಿಯ ಸೋಲಿನ ನಂತರದ ಪುನರಾಗಮನ ಎಂದು ಕರೆದರು. ಈ ಸರಣಿಯಲ್ಲಿ ಮೊದಲ ಪಂದ್ಯವನ್ನು ಕೆಟ್ಟದಾಗಿ ಸೋತ ನಂತರ, ಟೀಮ್ ಇಂಡಿಯಾ ಉತ್ತಮ ಪುನರಾಗಮನವನ್ನು ಮಾಡಿತು ಮತ್ತು ಕಳೆದ ಎರಡು ಪಂದ್ಯಗಳಲ್ಲಿ ಅದ್ಭುತ ಜಯವನ್ನು ದಾಖಲಿಸಿತು.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಅಬ್ಬರದ ಆಟದ ಮೂಲಕ ಬೆಂಗಳೂರಿನಲ್ಲಿ ತಂಡದ ಗೆಲುವಿನ ಭರವಸೆಯನ್ನು ಉಳಿಸಿಕೊಂಡರು. ಪಂದ್ಯದಲ್ಲಿ, ರೋಹಿತ್ ಅದ್ಭುತ ಶತಕವನ್ನು ಬಾರಿಸಿ ಏಳು ವಿಕೆಟ್‌ಗಳು ಮತ್ತು 15 ಎಸೆತಗಳು ಬಾಕಿ ಇರುವಾಗಲೇ  287 ರನ್‌ಗಳನ್ನು ಕಲೆ ಹಾಕಿ ಪಂದ್ಯದ ಜೊತೆಗೆ, ಸರಣಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

ಪಂದ್ಯದ ಬಳಿಕ ಮಾತನಾಡಿದ ವಿರಾಟ್, "ನಾವಿಬ್ಬರೂ ಅನುಭವಿಗಳು, ಇಂದು ನಮಗೆ ಆಟಗಾರ ಶಿಖರ್ ಅವರ ಅನುಭವ ಕಡಿಮೆ ಇತ್ತು". ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಶಿಖರ್ ಧವನ್ ಗಾಯಗೊಂಡಿದ್ದರು. ಈ ಕಾರಣದಿಂದಾಗಿ ಕೆಎಲ್ ರಾಹುಲ್, ರೋಹಿತ್ ಅವರೊಂದಿಗೆ ಟೀಮ್ ಇಂಡಿಯಾದ ಇನ್ನಿಂಗ್ಸ್ ಪ್ರಾರಂಭಿಸಿದರು ಎಂದವರು ತಿಳಿಸಿದರು.

"ನಾವು ಉತ್ತಮ ಆರಂಭಕ್ಕೆ ಇಳಿದಿದ್ದೇವೆ, ಕೆ.ಎಲ್. ರಾಹುಲ್ ಔಟ್ ಆದಾಗ ಪರಿಸ್ಥಿತಿ ನಿರ್ಣಾಯಕವಾಗಿತ್ತು. ಏಕೆಂದರೆ ಚೆಂಡು ಉರುಳುತ್ತಿತ್ತು, ಜೊತೆಗೆ ತಡವಾಗಿ ಬರುತ್ತಿತ್ತು. ಅಲ್ಲಿಯೇ ಅನುಭವ ಕೆಲಸಕ್ಕೆ ಬರುತ್ತದೆ. ನಾವು (ರೋಹಿತ್ ಮತ್ತು ನಾನು) ಪಾಲುದಾರಿಕೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಮಾತನಾಡಿದ್ದೆವು ಮತ್ತು ಆಸ್ಟ್ರೇಲಿಯಾಕ್ಕೆ ವಿಕೆಟ್‌ಗಳು ಬೇಕಾಗಿದ್ದವು. ನಾವು ಅವರಿಗೆ ವಿಕೆಟ್ ನೀಡದಿದ್ದರೆ, ನಂತರ ನಾವು ಪ್ರತಿ ಓವರ್‌ಗೆ 7-8 ರನ್‌ಗಳೊಂದಿಗೆ ಗುರಿಯನ್ನು ಬೆನ್ನಟ್ಟಬಹುದು ಎಂದು ಯೋಚಿಸಿದ್ದೆವು. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಖಚಿತವಾಗಿ ತಿಳಿದಿತ್ತು ಎಂದು ವಿರಾಟ್ ಸರಣಿ ಗೆಲುವಿನ ವಿಶೇಷ ಕಾರಣ ಬಿಚ್ಚಿಟ್ಟರು.

ತಮ್ಮ ತಂಡದ ಇನ್ನಿಂಗ್ಸ್ ತೃಪ್ತಿ ನೀಡಿದ ಎಂದು ತಿಳಿಸಿದ ವಿರಾಟ್, ನಾವು ಕಳೆದ 4-5 ವರ್ಷಗಳಿಂದ ಈ ರೀತಿ ಆಡುತ್ತಿದ್ದೇವೆ ಎಂದು ಹೇಳಿದರು. ರೋಹಿತ್ ಅವರೊಂದಿಗೆ ಬ್ಯಾಟಿಂಗ್ ಮಾಡುವುದು ತುಂಬಾ ಖುಷಿಯಾಗಿದೆ, ಆದರೆ ಅದಕ್ಕಿಂತ ಹೆಚ್ಚಾಗಿ ನಾವು ಸಮಗ್ರ ಗೆಲುವು ಸಾಧಿಸಿದ್ದೇವೆ ಎಂದರು.

ವಿರಾಟ್ ಅವರ ಗೆಲುವು ಸಮಗ್ರ ಮತ್ತು ತೃಪ್ತಿಕರವಾಗಲು ಕಾರಣಗಳನ್ನು ಸಹ ನೀಡಿದರು. "ಈ ಬಾರಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವ್ ಮತ್ತು ಡೇವಿಡ್ ಮತ್ತು ಮಾರ್ನಸ್ ಲ್ಯಾಬುಸ್ಚೆನ್ ಇದ್ದರು. ಅವರ ಬೌಲಿಂಗ್ ಅತ್ಯುತ್ತಮವಾಗಿದೆ ಮತ್ತು ಅವರು ಫೀಲ್ಡಿಂಗ್‌ನಲ್ಲಿ ಅತ್ಯಂತ ವೇಗವಾಗಿದ್ದಾರೆ. ಆದಾಗ್ಯೂ, ನಮ್ಮ ತಂಡ ಕಳೆದ ಬಾರಿಗಿಂತ ಉತ್ತಮವಾಗಿತ್ತು" ಎಂದು ಅವರು ಹೇಳಿದರು.

"2–0 ಗೋಲಿನ ನಂತರವೂ ನಾವು ಕೊನೆಯ ಸರಣಿಯನ್ನು ಕಳೆದುಕೊಂಡಿದ್ದೇವೆ. ಆದರೆ ಈ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿರುವುದು ನಮಗೆ ಒಂದು ದೊಡ್ಡ ಸಂಕೇತವಾಗಿದೆ. 2020 ಅದ್ಭುತವಾಗಿದೆ. ನಾವು ಮತ್ತಷ್ಟು ಮುಂದೆ ಹೋಗಲು ಬಯಸುತ್ತೇವೆ. ಇದು ಅತ್ಯುತ್ತಮ ಮತ್ತು ತೃಪ್ತಿಕರ ಗೆಲುವುಗಳಲ್ಲಿ ಒಂದಾಗಿದೆ" ಎಂದು ವಿರಾಟ್ ಕೋಹ್ಲಿ ಹರ್ಷ ವ್ಯಕ್ತಪಡಿಸಿದರು.

Section: 
English Title: 
IND vs AUS: Virat said special reason to win the series
News Source: 
Home Title: 

IND vs AUS: ಸರಣಿ ಗೆಲುವಿನ ವಿಶೇಷ ಕಾರಣ ಬಿಚ್ಚಿಟ್ಟ ವಿರಾಟ್

IND vs AUS: ಸರಣಿ ಗೆಲುವಿನ ವಿಶೇಷ ಕಾರಣ ಬಿಚ್ಚಿಟ್ಟ ವಿರಾಟ್
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
IND vs AUS: ಸರಣಿ ಗೆಲುವಿನ ವಿಶೇಷ ಕಾರಣ ಬಿಚ್ಚಿಟ್ಟ ವಿರಾಟ್
Publish Later: 
No
Publish At: 
Monday, January 20, 2020 - 10:26
Created By: 
Yashaswini V
Updated By: 
Yashaswini V
Published By: 
Yashaswini V